ಕರ್ನಾಟಕದ 66 ಟೋಲ್ ಪ್ಲಾಜಾಗಳಲ್ಲಿ ಸುಂಕ ಶೇ 3-5 ರಷ್ಟು ಹೆಚ್ಚಾಗಲಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಈ ಹೆಚ್ಚಳವನ್ನು ಘೋಷಿಸಿದೆ. ಬೆಂಗಳೂರು-ಮೈಸೂರು, ಬೆಂಗಳೂರು-ತಿರುಪತಿ, ಮತ್ತು ಬೆಂಗಳೂರು-ಹೈದರಾಬಾದ್ ಮಾರ್ಗಗಳಲ್ಲಿನ ಪ್ರಮುಖ ಟೋಲ್ ಪ್ಲಾಜಾಗಳು ಈ ಹೆಚ್ಚಳದಿಂದ ಪ್ರಭಾವಿತವಾಗಲಿವೆ.
ಹೆಚ್ಚಳದ ವಿವರಗಳು:
- ದರ ಏರಿಕೆ:ಗರಿಷ್ಠ 5% ಮತ್ತು ಕನಿಷ್ಠ 3% ಹೆಚ್ಚಳ.
- ಪ್ರಭಾವಿತ ಮಾರ್ಗಗಳು:ಕಣಿಮಿಣಿಕೆ, ಶೇಷಗಿರಿಹಳ್ಳಿ (ಬೆಂಗಳೂರು-ಮೈಸೂರು), ನಂಗ್ಲಿ (ಬೆಂಗಳೂರು-ತಿರುಪತಿ), ಬಾಗೇಪಲ್ಲಿ(ಬೆಂಗಳೂರು-ಹೈದರಾಬಾದ್), ಸಾದಹಳ್ಳಿ(ಬೆಂಗಳೂರು ವಿಮಾನ ನಿಲ್ದಾಣ ರಸ್ತೆ), ಹುಲಿಕುಂಟೆ, ಮತ್ತು ನಲ್ಲೂರು ದೇವನಹಳ್ಳಿ (ಸ್ಯಾಟಲೈಟ್ ಟೌನ್ ರಿಂಗ್ ರಸ್ತೆ) ಸೇರಿದಂತೆ 66 ಪ್ಲಾಜಾಗಳು.
- NHAI ನೀತಿ:ರಾಷ್ಟ್ರೀಯ ಹೆದ್ದಾರಿ ಶುಲ್ಕ ನಿಯಮಗಳು ಮತ್ತು ರಿಯಾಯಿತಿ ಒಪ್ಪಂದಗಳಿಗೆ ಅನುಗುಣವಾಗಿ ದರಗಳನ್ನು ನಿಗದಿಪಡಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಶುಲ್ಕಗಳಿಗೆ ಹೊಸ ನೀತಿಯನ್ನು ಪರಿಚಯಿಸಲು ಸಜ್ಜಾಗಿದೆ. ಈ ವಿಚಾರವಾಗಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮಾರ್ಚ್19 ರಂದು ರಾಜ್ಯಸಭೆಯಲ್ಲಿ ಮಾಹಿತಿ ನೀಡಿದ್ದರು.
ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕ ಹೇಳಿಕೆ:
ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ, 2023-24ರಲ್ಲಿ ಟೋಲ್ ಸಂಗ್ರಹವು ₹64,809.86 ಕೋಟಿ ತಲುಪಿದ್ದು. ಇದು ಹಿಂದಿನ ವರ್ಷಕ್ಕಿಂತ 35% ರಷ್ಟು ಹೆಚ್ಚಾಗಿದೆ ಎಂದು ಹೇಳಿದ್ದಾರೆ. 2019-20 ರಲ್ಲಿ ಟೋಲ್ ಶುಲ್ಕ ಸಂಗ್ರಹವು 27,503 ಕೋಟಿ ರೂ.ಗಳಷ್ಟಿತ್ತು ಎಂದು ಗಡ್ಕರಿ ಮಾಹಿತಿ ನೀಡಿದ್ದರು.ಕರ್ನಾಟಕದ 66 ಟೋಲ್ ಪ್ಲಾಜಾಗಳಿವೆ.
ದುಬಾರಿ ಟೋಲ್ ದರಗಳು ದೈನಂದಿನ ಪ್ರಯಾಣಿಕರು ಮತ್ತು ವ್ಯಾಪಾರಿಗಳಿಗೆ ಹೆಚ್ಚಿನ ಆರ್ಥಿಕ ಭಾರ ತಂದೊಡ್ಡುತ್ತವೆ. ಪರ್ಯಾಯ ಮಾರ್ಗಗಳು ಅಥವಾ ಸಾರ್ವಜನಿಕ ಸಾರಿಗೆ ಬಳಕೆಗೆ ಪ್ರೋತ್ಸಾಹ ನೀಡಲು ಸರ್ಕಾರಿ ಯೋಜನೆಗಳ ಅಗತ್ಯವಿದೆ.