ಜೆಮ್ಸ್ ಬಾಂಡ್ ಡೋವಾಲ್ ಎಲ್ಲಿದ್ದಾರೆ?: ಕೇಂದ್ರ ಸರ್ಕಾರದ ವಿರುದ್ಧ ಖರ್ಗೆ ಕಿಡಿ

123 2025 04 23t192128.310

ತನ್ನನ್ನು ಚಾಣಕ್ಯ ಎಂದು ಕರೆದುಕೊಳ್ಳುವ ಗೃಹಮಂತ್ರಿ ಅಮಿತ್ ಶಾ ಅವರು ಸರ್ಕಾರಗಳನ್ನು ಕೆಡವುವಲ್ಲಿ, ಪಕ್ಷಗಳನ್ನು ಒಡೆಯುವಲ್ಲಿ ಮತ್ತು ಚುನಾವಣೆಗಳನ್ನು ತಮ್ಮ ಇಚ್ಛೆಗೆ ತಿರುಗಿಸುವಲ್ಲಿ ತೊಡಗಿರುವಾಗ, ಇಂತಹ ದುರ್ಘಟನೆಗಳು ಸಂಭವಿಸುತ್ತವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.

ಗುಪ್ತಚರ ವ್ಯವಸ್ಥೆ ಎಲ್ಲಿದೆ?,ನಿಗಾವಹಣೆ ಎಲ್ಲಿದೆ?, ‘ಜೇಮ್ಸ್ ಬಾಂಡ್’ ಎಂದು ಕರೆಯಲ್ಪಡುವ ಡೋವಾಲ್ ಎಲ್ಲಿದ್ದಾರೆ? ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದಿದ್ದಾರೆ.

ಪುಲ್ವಾಮಾ ಮತ್ತು ಪಹಲ್ಗಾಮ್ ಈ ಎರಡೂ ಘಟನೆಗಳಲ್ಲಿ ಭದ್ರತಾ ವೈಫಲ್ಯಗಳ ಬಗ್ಗೆ ಮುಂಚಿತವಾಗಿಯೇ ಎಚ್ಚರಿಕೆ ನೀಡಲಾಗಿತ್ತು. ಆದರೆ, ಎರಡನ್ನೂ ಸಂಪೂರ್ಣವಾಗಿ ನಿರ್ಲಕ್ಷಿಸಲಾಯಿತು.

ಇದಕ್ಕಿಂತಲೂ ಆಘಾತಕಾರಿಯಾದ ಸಂಗತಿಯೆಂದರೆ, ಕೋವಿಡ್ ಸಂದರ್ಭದಲ್ಲಿ ಹಣ ಉಳಿಸುವ ಉದ್ದೇಶದಿಂದ ಬಿಜೆಪಿ ಸರ್ಕಾರವು 1.8 ಲಕ್ಷಕ್ಕೂ ಹೆಚ್ಚು ಸೈನಿಕರ ಸಂಖ್ಯೆಯನ್ನು ಕಡಿಮೆಗೊಳಿಸಿತು.

ಅಮಿತ್ ಶಾ ಅವರು ಎಡವಲದ ನಾಯಕರ ಮೇಲೆ ಗೂಢಚರ್ಯೆ ನಡೆಸಲು ಅಥವಾ ಜಯ್ ಶಾ ಅವರನ್ನು ಐಸಿಸಿ ಅಧ್ಯಕ್ಷರನ್ನಾಗಿಸಲು ತೋರುವ ಉತ್ಸಾಹವನ್ನು, ವಿದೇಶಿ ಭಯೋತ್ಪಾದಕ ಭದ್ರತಾ ಬೆದರಿಕೆಗಳನ್ನು ನಿಗಾವಹಿಸಲು ತೋರಿಸಿದ್ದರೆ, ಚೀನಾವು ಗಡಿಯಲ್ಲಿ ಶಾಂತವಾಗಿರುತ್ತಿತ್ತು, ಮತ್ತು ಈ ದಾಳಿಯೇ ಸಂಭವಿಸಿರಲಿಲ್ಲ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಅಮಿತ್ ಶಾ ವಿರುದ್ಧ ಗುಡುಗಿದ್ದಾರೆ.

ಈ ಸರ್ಕಾರವು ಈ ದಾಳಿಯನ್ನು ಲಘುವಾಗಿ ತೆಗೆದುಕೊಳ್ಳಲಿದೆ, ಸಾವಿನ ಸಂಖ್ಯೆಯನ್ನು ಕಡಿಮೆ ತೋರಿಸಲಿದೆ, ಈ ದುರಂತವನ್ನು ಸಮುದಾಯಗಳ ನಡುವೆ ದ್ವೇಷ ಹರಡಲು ಬಳಸಿಕೊಳ್ಳಲಿದೆ ಅಥವಾ ಎಂದಿನಂತೆ ಕಾಂಗ್ರೆಸ್ ಮೇಲೆ ದೋಷಾರೋಪಣೆಯಲ್ಲಿ ತೊಡಗಲಿದೆ.

ಪ್ರಧಾನಮಂತ್ರಿಗಳಿಗೆ ಗೃಹಮಂತ್ರಿ ಅಮಿತ್ ಶಾ ಅವರ ರಾಜೀನಾಮೆಯನ್ನು ಕೇಳುವ ಧೈರ್ಯವಿದೆಯೇ?
ಆರ್‌ಎಸ್‌ಎಸ್‌ನ ಕೋಪವು ಕೇವಲ ವಿಜಯದಶಮಿ ಉತ್ಸವದ ಭಾಷಣಗಳಿಗೆ ಮಾತ್ರವೇ ಸೀಮಿತವೇ? ಅಥವಾ ಅಲ್ಪಸಂಖ್ಯಾತರು ಮತ್ತು ದಲಿತರ ವಿರುದ್ಧ ಮಾತ್ರವೇ? ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಕಟುವಾಗಿ ಟೀಕಿಸಿದ್ದಾರೆ.

ಅವರಿಗೆ ಪ್ರಧಾನಮಂತ್ರಿಗೆ ಬಾಗಿಲು ತೋರಿಸುವ ಧೈರ್ಯವಿದೆಯೇ? ಎಂದು ಪ್ರಿಯಾಂಕ್ ಖರ್ಗೆ ತಮ್ಮ ಎಕ್ಸ್‌ನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಟ್ವೀಟ್ ಮಾಡಿದ್ದಾರೆ.

    Exit mobile version