ಕರ್ನಾಟಕ ಹವಾಮಾನ ಮುನ್ಸೂಚನೆ: ಬಿಸಿಲು ಏರಿಕೆ, ಕರಾವಳಿಯಲ್ಲಿ ತುಂತುರು ಮಳೆ ಸಾಧ್ಯತೆ!

ಕರ್ನಾಟಕ ಹವಾಮಾನ ಮುನ್ಸೂಚನೆ

ರಾಜ್ಯದಾದ್ಯಂತ ಬಿಸಿಲು ತೀವ್ರಗೊಳ್ಳುತ್ತಿದ್ದು, ಒಳನಾಡಿನ ಜಿಲ್ಲೆಗಳಲ್ಲಿ ತಾಪಮಾನ ಹೆಚ್ಚಾಗಿ 33-35 ಡಿಗ್ರಿ ಸೆಲ್ಸಿಯಸ್ ವರೆಗೆ ತಲುಪುತ್ತಿದೆ. ಬೆಂಗಳೂರಿನಲ್ಲಿ ಸಹ ಮಧ್ಯಾಹ್ನದ ಬಿಸಿಲು ತೀವ್ರವಾಗಿದ್ದು, ಹೊರಗಡೆ ಚಟುವಟಿಕೆಗಳಿಗೆ ಅಡ್ಡಿಯಾಗುತ್ತಿದೆ.

ಕರಾವಳಿ ಜಿಲ್ಲೆಗಳು (ಕಾಸರಗೋಡು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ):

ಮಧ್ಯಾಹ್ನದ ನಂತರ ಹೆಚ್ಚಿನ ಭಾಗಗಳಲ್ಲಿ ಮೋಡ ಕವಿದ ವಾತಾವರಣ. ಅರಬ್ಬಿ ಸಮುದ್ರದ ಕಡೆಯಿಂದ ಬೀಸುವ ಮೇಲುಸ್ತರದ ಗಾಳಿಯ ಪ್ರಭಾವದಿಂದ ಸಂಜೆ ಅಥವಾ ರಾತ್ರಿ ತುಂತುರು ಹನಿ ಮಳೆ ಅಥವಾ ಹಗುರ ಮಳೆಯ ಸಾಧ್ಯತೆ ಇದೆ. ಘಟ್ಟದ ಕೆಳಗಿನ ಪ್ರದೇಶಗಳಲ್ಲಿ ಮುಂಜಾನೆ ಹಿಮದಂತಹ ತಂಪು ಅಥವಾ ತುಂತುರು ಮಳೆಯ ಚಾನ್ಸ್.

ಮಲೆನಾಡು ಜಿಲ್ಲೆಗಳು (ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ):

ಮಧ್ಯಾಹ್ನದ ನಂತರ ಮೋಡದ ವಾತಾವರಣ ಇರಲಿದ್ದು, ಮಳೆಯ ಸಾಧ್ಯತೆ ಕಡಿಮೆ. ಆದರೆ ತಾಪಮಾನ ಸ್ವಲ್ಪ ತಂಪಾಗಿರಬಹುದು.

ಉತ್ತರ ಮತ್ತು ದಕ್ಷಿಣ ಒಳನಾಡು:

ಅಲ್ಲಲ್ಲಿ ಮಧ್ಯಾಹ್ನದ ನಂತರ ಮೋಡ ಕವಿದಂತಹ ವಾತಾವರಣ, ಆದರೆ ಮಳೆಯ ಸಾಧ್ಯತೆ ಕಡಿಮೆಯೇ. ಬಿಸಿಲು ತೀವ್ರವಾಗಿರುವುದರಿಂದ ಜಾಗ್ರತೆ ಅಗತ್ಯ.

ಉತ್ತರ ಭಾರತದ ಪ್ರಭಾವ:

ಉಷ್ಣ ಮಾರುತಗಳ ಪರಿಚಲನೆ ಮಧ್ಯಮ ಸ್ತರದಲ್ಲಿ ಪ್ರಬಲವಾಗಿದ್ದು, ಮೇಲ್ಸ್ತರದಲ್ಲಿ ದುರ್ಬಲಗೊಂಡಿದೆ. ಇದರಿಂದ ರಾಜ್ಯದಲ್ಲಿ ಬಿಸಿಲು ಏರಿಕೆಯಾಗುತ್ತಿದೆ.

ಸಲಹೆಗಳು:

Exit mobile version