ಕರ್ನಾಟಕದಾದ್ಯಂತ ಮುಂದಿನ ಒಂದು ವಾರ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡಕ್ಕೆ ರೆಡ್ ಅಲರ್ಟ್ ಘೋಷಿಸಲಾಗಿದೆ.
ಶಿವಮೊಗ್ಗ, ಕೊಡಗು, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಜಾರಿಯಲ್ಲಿದೆ. ಇನ್ನು ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ಯಾದಗಿರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಮತ್ತು ಚಾಮರಾಜನಗರಕ್ಕೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ವಿಜಯನಗರ, ತುಮಕೂರು, ದಾವಣಗೆರೆ, ಚಿತ್ರದುರ್ಗ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.
ಕಳೆದ 24 ಗಂಟೆಗಳಲ್ಲಿ ಶಿರಾಲಿ, ಮಂಕಿ, ಗೇರುಸೊಪ್ಪ, ಕುರ್ಡಿ, ಚಿಂಚೋಳಿ, ಗದಗ, ಮಂಗಳೂರು, ಹೊನ್ನಾವರ, ಶಕ್ತಿನಗರ, ಆಗುಂಬೆ, ಲಿಂಗಸುಗೂರು, ಹುಮ್ನಾಬಾದ್, ಕೆರೂರು, ಮಾಣಿ, ಮಂಠಾಳ, ಸುಳ್ಯ, ಇಳಕಲ್, ಗೋಕರ್ಣ, ಕ್ಯಾಸಲ್ರಾಕ್, ಪುತ್ತೂರು, ಬಂಟವಾಳ, ಪಾವಗಡ, ಕಾರ್ಕಳ, ಭಾಗಮಂಡಲ, ಬೆಳ್ಳೂರು, ಅಂಕೋಲಾ, ನಲ್ವತವಾಡ, ಹುಣಸಗಿ, ಹುನಗುಂದ, ಬಾದಾಮಿ, ನರಗುಂದ, ಆಲಮಟ್ಟಿ, ಜೋಯ್ಡಾ, ಅಣ್ಣಿಗೆರೆ, ಕಮಲಾಪುರ, ಸಿಂಧನೂರು, ಕುಷ್ಟಗಿ, ಕಮ್ಮರಡಿ, ಕೊಪ್ಪ, ಕೋಟಾ, ಹುಂಚದಕಟ್ಟೆ, ಪೊನ್ನಂಪೇಟೆ, ಕಳಸ, ಮದ್ದೂರು, ಜಯಪುರ, ಸೋಮವಾರಪೇಟೆ, ಸಿದ್ದಾಪುರ, ಧರ್ಮಸ್ಥಳ, ಬಿಳಗಿ, ಮಾನ್ವಿ, ಮುನಿರಾಬಾದ್, ತಾವರಗೇರಾ, ಸೇಡಂ ಮತ್ತು ಹಾವೇರಿಯಲ್ಲಿ ಭಾರೀ ಮಳೆ ದಾಖಲಾಗಿದೆ.
ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣವಿದ್ದು, ಶನಿವಾರ ಅಲ್ಲಲ್ಲಿ ಮಳೆ ಸುರಿದಿದೆ. ಎಚ್ಎಎಲ್ನಲ್ಲಿ ಗರಿಷ್ಠ ಉಷ್ಣಾಂಶ 28.3°C, ಕನಿಷ್ಠ 19.9°C, ಬೆಂಗಳೂರು ನಗರದಲ್ಲಿ ಗರಿಷ್ಠ 27.9°C, ಕನಿಷ್ಠ 20.3°C, ಕೆಐಎಎಲ್ನಲ್ಲಿ ಗರಿಷ್ಠ 28.3°C, ಕನಿಷ್ಠ 19.6°C, ಜಿಕೆವಿಕೆಯಲ್ಲಿ ಗರಿಷ್ಠ 28.2°C, ಕನಿಷ್ಠ 19.6°C ದಾಖಲಾಗಿದೆ. ಕರಾವಳಿಯ ಹೊನ್ನಾವರದಲ್ಲಿ ಗರಿಷ್ಠ 26.8°C, ಕನಿಷ್ಠ 22.9°C, ಕಾರವಾರದಲ್ಲಿ ಗರಿಷ್ಠ 27.2°C, ಕನಿಷ್ಠ 24.0°C, ಮಂಗಳೂರು ವಿಮಾನ ನಿಲ್ದಾಣದಲ್ಲಿ ಗರಿಷ್ಠ 25.0°C, ಕನಿಷ್ಠ 23.0°C, ಶಕ್ತಿನಗರದಲ್ಲಿ ಗರಿಷ್ಠ 25.3°C, ಕನಿಷ್ಠ 22.7°C ದಾಖಲಾಗಿದೆ.
ಇತರ ಜಿಲ್ಲೆಗಳ ಉಷ್ಣಾಂಶ: ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಗರಿಷ್ಠ 28.6°C, ಕನಿಷ್ಠ 21.2°C, ಬೀದರ್ನಲ್ಲಿ ಗರಿಷ್ಠ 31.0°C, ಕನಿಷ್ಠ 21.8°C, ವಿಜಯಪುರದಲ್ಲಿ ಗರಿಷ್ಠ 29.5°C, ಧಾರವಾಡದಲ್ಲಿ ಗರಿಷ್ಠ 28.0°C, ಕನಿಷ್ಠ 20.0°C, ಗದಗದಲ್ಲಿ ಗರಿಷ್ಠ 28.8°C, ಕನಿಷ್ಠ 20.0°C, ಕಲಬುರಗಿಯಲ್ಲಿ ಗರಿಷ್ಠ 33.4°C, ಕನಿಷ್ಠ 22.5°C, ಹಾವೇರಿಯಲ್ಲಿ ಗರಿಷ್ಠ 26.4°C, ಕನಿಷ್ಠ 20.2°C, ಕೊಪ್ಪಳದಲ್ಲಿ ಗರಿಷ್ಠ 29.1°C, ಕನಿಷ್ಠ 23.5°C, ರಾಯಚೂರಿನಲ್ಲಿ ಗರಿಷ್ಠ 31.8°C, ಕನಿಷ್ಠ 22.6°C ದಾಖಲಾಗಿದೆ.
ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹ, ಭೂಕುಸಿತದ ಅಪಾಯವಿದ್ದು, ಸ್ಥಳೀಯ ಆಡಳಿತವು ಎಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಕೃಷಿಕರಿಗೆ ಬೆಳೆ ರಕ್ಷಣೆಗೆ ಮುಂಜಾಗ್ರತೆ ವಹಿಸಲು ಮತ್ತು ಜನರಿಗೆ ಸುರಕ್ಷಿತ ಸ್ಥಳಗಳಲ್ಲಿ ಇರಲು ಸೂಚನೆ ನೀಡಲಾಗಿದೆ.