ಬೆಂಗಳೂರು: ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಆಗಸ್ಟ್ 22ರಿಂದ ಮಳೆಯ ತೀವ್ರತೆ ತಾತ್ಕಾಲಿಕವಾಗಿ ಕಡಿಮೆಯಾಗಲಿದೆ. ಆದರೆ, ಆಗಸ್ಟ್ 27ರಿಂದ ಮತ್ತೆ ಭಾರೀ ಮಳೆಯ ಅಬ್ಬರ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಮತ್ತು ಬೆಳಗಾವಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ.
ಕ್ಯಾಸಲ್ರಾಕ್, ಯಲ್ಲಾಪುರ, ಲೋಂಡಾ, ಕದ್ರಾ, ಕಾರವಾರ, ಜೋಯ್ಡಾ, ಹಳಿಯಾಳ, ಗೇರುಸೊಪ್ಪ, ಮಂಕಿ, ಖಾನಾಪುರ, ನಿಪ್ಪಾಣಿ, ಬೆಳಗಾವಿ, ಕಿತ್ತೂರು, ಕಮ್ಮರಡಿ, ಆಗುಂಬೆ, ಕಿರವತ್ತಿ, ಹೊನ್ನಾವರ, ಹುಬ್ಬಳ್ಳಿ, ಚಿಕ್ಕೋಡಿ, ಹುಕ್ಕೇರಿ, ಸವಣೂರು, ಚಿತ್ತಾಪುರ, ಧರ್ಮಸ್ಥಳ, ಲೋಕಾಪುರ, ಧಾರವಾಡ, ಸಂಕೇಶ್ವರ, ಬೈಲಹೊಂಗಲ, ಆಳಂದ, ಕಲಬುರಗಿ, ಅಣ್ಣಿಗೆರೆ, ಮುದ್ದೇಬಿಹಾಳ, ಸೇಡಂ, ಕುಂದಗೋಳ, ರಾಯ್ಬಾಗ್, ಶೋರಾಪುರ, ಕಳಸ, ಮತ್ತು ಕೊಪ್ಪದಲ್ಲಿ ಈಗಾಗಲೇ ಮಳೆ ದಾಖಲಾಗಿದೆ.
ಬೆಂಗಳೂರಿನಲ್ಲಿ ಕಳೆದ ಎರಡು ದಿನಗಳಿಂದ ತುಂತುರು ಮಳೆಯಾಗಿದ್ದು, ಇಂದು ಕೂಡ ಮೋಡಕವಿದ ವಾತಾವರಣ ಮುಂದುವರಿದಿದೆ. ಎಚ್ಎಎಲ್ನಲ್ಲಿ ಗರಿಷ್ಠ 25.8°C ಮತ್ತು ಕನಿಷ್ಠ 18.8°C, ಬೆಂಗಳೂರು ನಗರದಲ್ಲಿ ಗರಿಷ್ಠ 24.4°C ಮತ್ತು ಕನಿಷ್ಠ 19.4°C, ಕೆಐಎಎಲ್ನಲ್ಲಿ ಗರಿಷ್ಠ 25.6°C ಮತ್ತು ಕನಿಷ್ಠ 20.9°C, ಜಿಕೆವಿಕೆಯಲ್ಲಿ ಗರಿಷ್ಠ 26.2°C ಮತ್ತು ಕನಿಷ್ಠ 18.8°C ಉಷ್ಣಾಂಶ ದಾಖಲಾಗಿದೆ.
ತೀರ್ಥಕ್ಷೇತ್ರಗಳಾದ ಹೊನ್ನಾವರದಲ್ಲಿ ಗರಿಷ್ಠ 27.7°C ಮತ್ತು ಕನಿಷ್ಠ 22.9°C, ಕಾರವಾರದಲ್ಲಿ ಗರಿಷ್ಠ 26.4°C ಮತ್ತು ಕನಿಷ್ಠ 23.8°C, ಮಂಗಳೂರು ಏರ್ಪೋರ್ಟ್ನಲ್ಲಿ ಗರಿಷ್ಠ 28.6°C ಮತ್ತು ಕನಿಷ್ಠ 24.0°C, ಶಕ್ತಿನಗರದಲ್ಲಿ ಗರಿಷ್ಠ 29.1°C ಮತ್ತು ಕನಿಷ್ಠ 22.7°C ದಾಖಲಾಗಿದೆ.
ಬೆಳಗಾವಿ ಏರ್ಪೋರ್ಟ್ನಲ್ಲಿ ಗರಿಷ್ಠ 22.5°C ಮತ್ತು ಕನಿಷ್ಠ 20.0°C, ಬೀದರ್ನಲ್ಲಿ ಗರಿಷ್ಠ 26.4°C ಮತ್ತು ಕನಿಷ್ಠ 20.6°C, ವಿಜಯಪುರದಲ್ಲಿ ಗರಿಷ್ಠ 25.0°C ಮತ್ತು ಕನಿಷ್ಠ 21.2°C, ಧಾರವಾಡದಲ್ಲಿ ಗರಿಷ್ಠ 22.0°C ಮತ್ತು ಕನಿಷ್ಠ 19.2°C, ಗದಗದಲ್ಲಿ ಗರಿಷ್ಠ 24.9°C ಮತ್ತು ಕನಿಷ್ಠ 20.4°C, ಕಲಬುರಗಿಯಲ್ಲಿ ಗರಿಷ್ಠ 24.5°C ಮತ್ತು ಕನಿಷ್ಠ 21.4°C, ಹಾವೇರಿಯಲ್ಲಿ ಗರಿಷ್ಠ 23.8°C ಮತ್ತು ಕನಿಷ್ಠ 21.2°C, ಕೊಪ್ಪಳದಲ್ಲಿ ಗರಿಷ್ಠ 26.7°C ಮತ್ತು ಕನಿಷ್ಠ 23.8°C, ರಾಯಚೂರಿನಲ್ಲಿ ಗರಿಷ್ಠ 27.4°C ಮತ್ತು ಕನಿಷ್ಠ 21.6°C ಉಷ್ಣಾಂಶ ದಾಖಲಾಗಿದೆ.





