ಕೆಲಸದ ಅವಧಿ ತಿದ್ದುಪಡಿ: 48 ಗಂಟೆಗಳ ಮಿತಿಯಲ್ಲಿ ಬದಲಾವಣೆ ಇಲ್ಲ ಎಂದ ಸರ್ಕಾರ

Untitled design 2025 06 21t233044.741

ಬೆಂಗಳೂರು: ರಾಜ್ಯದಲ್ಲಿ ಕೆಲಸದ ಅವಧಿಯನ್ನು ಹೆಚ್ಚಿಸುವ ಸಂಬಂಧ ಚರ್ಚೆಗಳು ತೀವ್ರಗೊಂಡಿರುವ ಬೆನ್ನಲ್ಲೇ, ಕರ್ನಾಟಕ ಸರ್ಕಾರ ಸ್ಪಷ್ಟನೆ ನೀಡಿದೆ. ವಾರಕ್ಕೆ ಗರಿಷ್ಠ 48 ಗಂಟೆಗಳ ಕೆಲಸದ ಸಮಯದ ಮಿತಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ತಿಳಿಸಿದೆ. ಈ ತಿದ್ದುಪಡಿಯು ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ಐಎಲ್‌ಒ) ಮತ್ತು ದೇಶೀಯ ಕಾರ್ಮಿಕ ಕಾನೂನುಗಳ ಮಾನದಂಡಗಳಿಗೆ ಸಂಪೂರ್ಣವಾಗಿ ಅನುಗುಣವಾಗಿದೆ ಎಂದು ಸರ್ಕಾರ ಹೇಳಿದೆ.

ಸಚಿವ ಸಂತೋಷ್ ಲಾಡ್‌ ಸ್ಪಷ್ಟನೆ

ದಿನಕ್ಕೆ 8 ಗಂಟೆಗಳ ಬದಲಿಗೆ 10 ಗಂಟೆಗಳ ಕೆಲಸದ ಸಮಯದ ಪ್ರಸ್ತಾವನೆಯ ಬಗ್ಗೆ ತೀವ್ರ ಚರ್ಚೆ ಮತ್ತು ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಗುರುವಾರ ಸ್ಪಷ್ಟನೆ ನೀಡಿದ್ದಾರೆ. ಜೂನ್ 19, 2025ರಂದು ನಡೆದ ತ್ರಿಪಕ್ಷೀಯ ಸಭೆಯಲ್ಲಿ ನೋಂದಾಯಿತ ಕಾರ್ಮಿಕ ಸಂಘಟನೆಗಳು ಮತ್ತು ಉದ್ಯಮ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಲಾಗಿದೆ. “ವಾರಕ್ಕೆ 48 ಗಂಟೆಗಳ ಗರಿಷ್ಠ ಕೆಲಸದ ಮಿತಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ಈ ತಿದ್ದುಪಡಿಯು ಐಎಲ್‌ಒ ಮಾನದಂಡಗಳಿಗೆ ಒಡ್ಡದೆ, ದೇಶೀಯ ಕಾನೂನುಗಳಿಗೆ ಅನುಗುಣವಾಗಿದೆ,” ಎಂದು ಸಚಿವರು ತಿಳಿಸಿದ್ದಾರೆ. ಯಾವುದೇ ಅಂತರರಾಷ್ಟ್ರೀಯ ಒಪ್ಪಂದದ ಉಲ್ಲಂಘನೆ ಆಗಿಲ್ಲ ಎಂದು ದೃಢಪಡಿಸಿದ್ದಾರೆ.

ADVERTISEMENT
ADVERTISEMENT

ಈ ತಿದ್ದುಪಡಿಯ ಬಗ್ಗೆ ಸಾರ್ವಜನಿಕರು ಮತ್ತು ಉದ್ಯೋಗಿಗಳಲ್ಲಿ ತಪ್ಪು ತಿಳುವಳಿಕೆಯಿಂದ ಭೀತಿ ಉಂಟಾಗಿತ್ತು. ಈ ಸ್ಪಷ್ಟನೆಯಿಂದ ಆ ಭೀತಿಗೆ ತೆರೆ ಬಿದ್ದಿದೆ. ಸರ್ಕಾರದ ನಿರ್ಧಾರವು ಐಎಲ್‌ಒ ಮಾನದಂಡಗಳಿಗೆ ಅನುಗುಣವಾಗಿದ್ದು, ಯಾವುದೇ ಅಂತರರಾಷ್ಟ್ರೀಯ ಕಾನೂನು ಉಲ್ಲಂಘನೆಯಿಲ್ಲ ಎಂದು ಸಚಿವ ಲಾಡ್ ಪುನರುಚ್ಚರಿಸಿದ್ದಾರೆ. ಈ ತಿದ್ದುಪಡಿಯಿಂದ ಕಾರ್ಮಿಕರಿಗೆ ಯಾವುದೇ ತೊಂದರೆಯಾಗದಂತೆ ಕಾನೂನು ರೂಪಿಸಲಾಗುತ್ತಿದೆ ಎಂದು ಭರವಸೆ ನೀಡಿದ್ದಾರೆ.

ತಿದ್ದುಪಡಿಯ ಉದ್ದೇಶ

ಕಾನೂನಿನಡಿ ದಿನಕ್ಕೆ ಗರಿಷ್ಠ 9 ಗಂಟೆಗಳ ಕೆಲಸಕ್ಕೆ ಅವಕಾಶವಿದೆ. ಹೊಸ ಪ್ರಸ್ತಾವನೆಯು ದಿನಕ್ಕೆ 10 ಗಂಟೆಗಳ ಕೆಲಸದ ಸಮಯವನ್ನು ಒಳಗೊಂಡಿತ್ತು, ಇದರಲ್ಲಿ 1 ಗಂಟೆಯ ವಿಶ್ರಾಂತಿ ಸಮಯವೂ ಸೇರಿತ್ತು. ಒಟ್ಟಾರೆ, ನಿಜವಾದ ಕೆಲಸದ ಸಮಯ 9 ಗಂಟೆಗಳಷ್ಟೇ ಆಗುತ್ತದೆ. ಒವರ್‌ಟೈಮ್‌ಗೆ ಸಂಬಂಧಿಸಿದಂತೆ ಗರಿಷ್ಠ 12 ಗಂಟೆಗಳ ಮಿತಿಯನ್ನು ಉಲ್ಲೇಖಿಸಲಾಗಿತ್ತು. ಈ ತಿದ್ದುಪಡಿಯ ಉದ್ದೇಶ, ಉದ್ಯೋಗಿಗಳಿಗೆ ಮತ್ತು ಉದ್ಯೋಗದಾತರಿಗೆ ಹೊಂದಿಕೊಳ್ಳುವ ಕೆಲಸದ ಸಮಯದ ಆಯ್ಕೆಗಳನ್ನು ಒದಗಿಸುವುದು. ಇದರಿಂದ ವಾರದ 48 ಗಂಟೆಗಳ ಕೆಲಸವನ್ನು ಕಡಿಮೆ ದಿನಗಳಲ್ಲಿ ಪೂರೈಸಲು ಅವಕಾಶ ಸಿಗುತ್ತದೆ. ಇದು ‘ಪ್ಲೆಕ್ಸಿ-ಅವರ್ಸ್’ ಕಲ್ಪನೆಗೆ ಕಾನೂನಾತ್ಮಕ ರೂಪ ನೀಡುತ್ತದೆ.

ಸರ್ಕಾರವು ಕಾರ್ಮಿಕರ ಕಲ್ಯಾಣಕ್ಕೆ ಬದ್ಧವಾಗಿದೆ ಎಂದು ತಿಳಿಸಿದೆ. ಜೂನ್ 18, 2025ರಂದು ಕರ್ನಾಟಕ ಕಾರ್ಮಿಕ ಇಲಾಖೆಯು ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸ್ಥಾಪನೆ ಕಾಯ್ದೆಯ ಸೆಕ್ಷನ್ 7ರ ತಿದ್ದುಪಡಿಯ ಕುರಿತು ತ್ರಿಪಕ್ಷೀಯ ಸಭೆ ನಡೆಸಿತ್ತು. ಈ ಸಭೆಯಲ್ಲಿ ಮಾನ್ಯತೆ ಪಡೆದ ಕಾರ್ಮಿಕ ಸಂಘಗಳು ಮತ್ತು ಕೈಗಾರಿಕಾ ಪ್ರತಿನಿಧಿಗಳು ಭಾಗವಹಿಸಿದ್ದರು. ಈ ಸಭೆಯಲ್ಲಿ ಚರ್ಚಿತ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಿ, ಎಲ್ಲಾ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸರ್ಕಾರ ಭರವಸೆ ನೀಡಿದೆ.

ಕರ್ನಾಟಕ ಐಟಿ/ಐತಿಈಎಸ್ ನೌಕರರ ಸಂಘ (KITU) ಈ ತಿದ್ದುಪಡಿಗೆ ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ಕ್ರಮವನ್ನು “ಆಧುನಿಕ ಗುಲಾಮಗಿರಿ” ಎಂದು ಕರೆದಿರುವ KITU, ರಾಜ್ಯದಾದ್ಯಂತ ಎಲ್ಲ ಉದ್ಯೋಗ ವಲಯಗಳು ಈ ಪ್ರಸ್ತಾವನೆಯನ್ನು ವಿರೋಧಿಸಬೇಕೆಂದು ಕರೆ ನೀಡಿದೆ. ಐಟಿ ಕ್ಷೇತ್ರ ಸೇರಿದಂತೆ ಹಲವು ಕಾರ್ಮಿಕ ಸಂಘಗಳು ಈ ತಿದ್ದುಪಡಿಗೆ ಆಕ್ಷೇಪ ವ್ಯಕ್ತಪಡಿಸಿವೆ.

Exit mobile version