ಚಾಮುಂಡಿ ಬೆಟ್ಟಕ್ಕೆ ಹೋಗುವ ಭಕ್ತರಿಗೆ ಮಹತ್ವದ ಸೂಚನೆ

Untitled design 2025 06 21t224854.537
ADVERTISEMENT
ADVERTISEMENT

ಮೈಸೂರು: ಆಷಾಢ ಮಾಸದ ಆಗಮನದೊಂದಿಗೆ ಚಾಮುಂಡಿ ಬೆಟ್ಟಕ್ಕೆ ಸಾವಿರಾರು ಭಕ್ತರು ಚಾಮುಂಡೇಶ್ವರಿ ಅಮ್ಮನವರ ದರ್ಶನಕ್ಕಾಗಿ ಆಗಮಿಸುತ್ತಾರೆ. ವಿಶೇಷವಾಗಿ ಆಷಾಢ ಶುಕ್ರವಾರ, ವರ್ಧಂತಿ ದಿನಗಳು, ಶನಿವಾರ ಮತ್ತು ಭಾನುವಾರಗಳಂದು ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತದೆ. ಈ ಸಂದರ್ಭದಲ್ಲಿ ಭಕ್ತರ ಅನುಕೂಲಕ್ಕಾಗಿ ಮೈಸೂರು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಚಾಮುಂಡಿ ಬೆಟ್ಟದ ಮೇಲೆ ಸಾರ್ವಜನಿಕ ವಾಹನಗಳ ಪಾರ್ಕಿಂಗ್‌ಗೆ ನಿಷೇಧ ಹೇರಲಾಗಿದ್ದು, ಭಕ್ತರಿಗೆ ಕೆಲವು ಮಹತ್ವದ ಸೂಚನೆಗಳನ್ನು ನೀಡಲಾಗಿದೆ.

ಪಾರ್ಕಿಂಗ್ ವ್ಯವಸ್ಥೆ ಮತ್ತು ಸಾರಿಗೆ

ಆಷಾಢ ಶುಕ್ರವಾರದಂದು ಭಕ್ತರ ಅನುಕೂಲಕ್ಕಾಗಿ ಲಲಿತ ಮಹಲ್ ಹೋಟೆಲ್ ಬಳಿ ತಾತ್ಕಾಲಿಕ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಸಾರ್ವಜನಿಕರು ತಮ್ಮ ವಾಹನಗಳನ್ನು ಈ ಸ್ಥಳದಲ್ಲಿ ನಿಲುಗಡೆ ಮಾಡಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಬಸ್ಸುಗಳ ಮೂಲಕ ಚಾಮುಂಡಿ ಬೆಟ್ಟಕ್ಕೆ ತೆರಳಬೇಕೆಂದು ಮೈಸೂರು ಪೊಲೀಸರು ಮನವಿ ಮಾಡಿದ್ದಾರೆ. ಪಾರ್ಕಿಂಗ್ ಸ್ಥಳದ ವಿವರಗಳನ್ನು ತಿಳಿಯಲು QR ಕೋಡ್ ಬಳಸಬಹುದು. ಈ ವ್ಯವಸ್ಥೆಯಿಂದ ಭಕ್ತರಿಗೆ ಸುಗಮವಾಗಿ ದೇವಾಲಯಕ್ಕೆ ತಲುಪಲು ಸಹಾಯವಾಗಲಿದೆ.

ದರ್ಶನ ಟಿಕೆಟ್ ದರಗಳು

ಆಷಾಢ ಮಾಸದ ಶನಿವಾರ, ಭಾನುವಾರ ಮತ್ತು ಶುಕ್ರವಾರದಂದು ಸಾಮಾನ್ಯ ದರ್ಶನ ಉಚಿತವಾಗಿರುತ್ತದೆ. ಪ್ರವೇಶ ದರ್ಶನಕ್ಕೆ ₹50 ಮತ್ತು ವಿಶೇಷ ದರ್ಶನಕ್ಕೆ ₹300 ಟಿಕೆಟ್ ದರವನ್ನು ನಿಗದಿ ಪಡಿಸಲಾಗಿದೆ. ಇದೇ ಮೊದಲ ಬಾರಿಗೆ ₹2,500 ರ ವಿಶೇಷ ದರ್ಶನ ಟಿಕೆಟ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಈ ಟಿಕೆಟ್‌ನಡಿಯಲ್ಲಿ ಭಕ್ತರು ಎಸಿ ಬಸ್‌ನಲ್ಲಿ ಬೆಟ್ಟಕ್ಕೆ ತೆರಳಬಹುದು, ವಿಶೇಷ ದರ್ಶನದ ವ್ಯವಸ್ಥೆಯೊಂದಿಗೆ ಲಾಡು ಪ್ರಸಾದ, ಮರುಬಳಕೆಯ ನೀರಿನ ಬಾಟಲ್‌ನ್ನು ಕೊಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ. ಸಿ. ಮಹದೇವಪ್ಪ ತಿಳಿಸಿದ್ದಾರೆ.

₹2,500 ವಿಶೇಷ ದರ್ಶನ ಟಿಕೆಟ್‌ಗೆ ಬಿಜೆಪಿ ಮುಖಂಡರು ಮತ್ತು ಕೆಲ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ದರವು ಸಾಮಾನ್ಯ ಭಕ್ತರಿಗೆ ತೊಡಗಲು ಕಷ್ಟಕರವೆಂದು ಟೀಕಿಸಿದ್ದಾರೆ.

ಭಕ್ತರಿಗೆ ಸೂಚನೆ

ದೇವಾಲಯದ ಸುತ್ತ ಸ್ವಚ್ಛತೆ, ಭದ್ರತೆ ಮತ್ತ ಸಂಚಾರ ನಿರ್ವಹಣೆಗಾಗಿ ವಿಶೇಷ ತಂಡಗಳನ್ನ ರಚಿಸಲಾಗಿದೆ. ಭಕ್ತರು ಯಾವದೇ ತೊಂದರೆಗೆ ಒಳಪಡದೇ ಚಾಮುಂಡೇಶ್ವರಿ ಅಮ್ಮನವರ ದರ್ಶನ ಪಡೆಯಲು ಈ ವ್ಯವಸ್ಥೆ ಸಹಾಯಕವಾಗಲಿದೆ.

Exit mobile version