ಒಳಮೀಸಲಾತಿ ಮಧ್ಯಂತರ ವರದಿ ಸಿಎಂಗೆ ಹಸ್ತಾಂತರ: ಆಯೋಗದಿಂದ 104 ಪುಟಗಳ ವರದಿ ಸಲ್ಲಿಕೆ

Untitled design 2025 03 27t154627.427

ಬೆಂಗಳೂರು: ರಾಜ್ಯ ಸರ್ಕಾರ ರಚನೆ ಮಾಡಿದ್ದ ಒಳಮೀಸಲಾತಿ ಆಯೋಗವು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಧ್ಯಂತರ ವರದಿಯನ್ನು ಸಲ್ಲಿಸಿದೆ. ಆಯೋಗದ ಅಧ್ಯಕ್ಷರಾದ ನ್ಯಾ. ನಾಗಮೋಹನದಾಸ್ ಅವರು ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ 104 ಪುಟಗಳ ಈ ಮಹತ್ವದ ವರದಿಯನ್ನು ಸಿಎಂಗೆ ಹಸ್ತಾಂತರಿಸಿದರು.

ADVERTISEMENT
ADVERTISEMENT

ವರದಿ ಸಲ್ಲಿಕೆ ನಂತರ ಆಯೋಗದ ಅಧ್ಯಕ್ಷ ನಾಗಮೋಹನದಾಸ್ ಮಾತನಾಡಿ, “ಈ ವರದಿಯನ್ನು ನಾವು ತರಾತುರಿಯಲ್ಲಿ ಕೊಟ್ಟಿಲ್ಲ. ಎರಡು ತಿಂಗಳಿಗಿಂತ ಹೆಚ್ಚು ಕಾಲ ಆಳವಾದ ಅಧ್ಯಯನ ನಡೆಸಿದ ನಂತರ ಮಧ್ಯಂತರ ವರದಿಯನ್ನು ನೀಡಲಾಗಿದೆ. ಸರ್ಕಾರ ಈ ವರದಿಯನ್ನು ಕೇಳಿರಲಿಲ್ಲ, ಆದರೆ ನಮ್ಮ ಆಯೋಗವೇ ಸ್ವಯಂಪ್ರೇರಿತರಾಗಿ ಈ ವರದಿಯನ್ನು ನೀಡಿದೆ. ಸರ್ಕಾರ ಇದರ ಬಗ್ಗೆ ಯಾವ ನಿರ್ಧಾರ ತೆಗೆದುಕೊಳ್ಳುತ್ತದೋ ನೋಡಬೇಕು” ಎಂದರು.

ಮಧ್ಯಂತರ ವರದಿ ಮೀಸಲಾತಿ ಕೊಡಲು ವಿಳಂಬ ಧೋರಣೆ ಮಾಡೋಕೆ ಅಲ್ಲ. ಶಾಶ್ವತ ಪರಿಹಾರ ಕೊಡೋದು ನಮ್ಮ ಇಚ್ಚೆ. ಈ ನಿಟ್ಟಿನಲ್ಲಿ ಈ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಈ ಮಧ್ಯಂತರ ವರದಿಯಲ್ಲಿ ಏನಿದೆ ಎಂದು ಹೇಳೋಕೆ ಆಗಲ್ಲ. “ಇದೀಗ ಸರ್ಕಾರದ ಅಧೀನದಲ್ಲಿದೆ. ಸರ್ಕಾರವೇ ಏನು ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದನ್ನು ಅವರೇ ಸ್ಪಷ್ಟಪಡಿಸಬೇಕು” ಎಂದರು.

ರಾಜ್ಯದ ಒಳಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ಆಯೋಗವು ನೀಡಿದ ವರದಿ ಪ್ರಮುಖ ಪ್ರಸ್ತಾಪವಾಗಿತ್ತು. ಸಚಿವ ಎಚ್.ಕೆ. ಪಾಟೀಲ ಅವರು ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ನಾಗಮೋಹನದಾಸ್ ಆಯೋಗವು ಒಳಮೀಸಲಾತಿ ವರ್ಗೀಕರಣ ಕುರಿತಂತೆ ಮಧ್ಯಂತರ ವರದಿಯನ್ನು ನೀಡಿದೆ.

ಮಧ್ಯಂತರ ವರದಿಯ ಪ್ರಮುಖ ಶಿಫಾರಸುಗಳು
  1. ಪರಿಶಿಷ್ಟ ಜಾತಿಯೊಳಗಿನ ಉಪಜಾತಿಗಳನ್ನು ವರ್ಗೀಕರಣ ಮಾಡುವುದು: ಪರಿಶಿಷ್ಟ ಜಾತಿಯ ಸಮುದಾಯಗಳು ತಮ್ಮ ಸಾಂಸ್ಕೃತಿಕ, ಆರ್ಥಿಕ ಮತ್ತು ಸಾಮಾಜಿಕ ಹಿನ್ನಲೆಯಲ್ಲಿ ವಿಭಜನೆಯ ಅಗತ್ಯವಿದೆ. ಇದರಿಂದ ಮೀಸಲಾತಿಯ ಪ್ರಯೋಜನ ಸಮುದಾಯದ ಎಲ್ಲ ವರ್ಗಗಳಿಗೆ ಸಮಾನವಾಗಿ ತಲುಪುವ ಸಾಧ್ಯತೆ ಇದೆ.
  2. ದತ್ತಾಂಶ ಸಂಗ್ರಹಣೆ: ರಾಜ್ಯದ ಪರಿಶಿಷ್ಟ ಜಾತಿಗಳ ನಿಖರ ಸಂಖ್ಯಾ ವಿವರ, ಅವರ ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಸ್ಥಿತಿಗತಿ ಕುರಿತು ಪೂರಕ ದತ್ತಾಂಶ ಸಂಗ್ರಹಿಸಬೇಕೆಂದು ಶಿಫಾರಸು ಮಾಡಲಾಗಿದೆ.
  3. ಆಧುನಿಕ ತಂತ್ರಜ್ಞಾನ ಬಳಸಿ ಸಮೀಕ್ಷೆ ನಡೆಸುವುದು: ಈ ಸಮೀಕ್ಷೆ 30-40 ದಿನಗಳಲ್ಲಿ ಪೂರ್ಣಗೊಳ್ಳುವಂತೆ ತಂತ್ರಜ್ಞಾನವನ್ನು ಬಳಸಿಕೊಂಡು ವೇಗವಾಗಿ ಪೂರ್ಣಗೊಳಿಸುವ ಬಗ್ಗೆ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.
  4. ಸಮೀಕ್ಷೆ ನಡೆಸಲು ಪ್ರಶ್ನಾವಳಿಯನ್ನು ಸಿದ್ಧಪಡಿಸುವುದು: ಸಮೀಕ್ಷೆಯ ಕಾರ್ಯನಿರ್ವಹಣೆಗೆ ಸೂಕ್ತ ಪ್ರಶ್ನಾವಳಿಯನ್ನು ರೂಪಿಸಿ, ಅನ್ವಯವಾಗುವ ಮಾಹಿತಿಯನ್ನು ಸಂಗ್ರಹಿಸಲು ಕ್ರಮ ಕೈಗೊಳ್ಳಬೇಕು.

ಈ ಮಧ್ಯಂತರ ವರದಿಯನ್ನು ಸಂಪುಟ ಸಮಿತಿ ಅಂಗೀಕರಿಸಿದ್ದು, ಶಿಫಾರಸುಗಳ ಅನುಷ್ಠಾನವನ್ನು ವೇಗಗೊಳಿಸಲು ನಿರ್ಧರಿಸಲಾಗಿದೆ. ಸಮೀಕ್ಷೆ ಮತ್ತು ದತ್ತಾಂಶ ಸಂಗ್ರಹ ಕಾರ್ಯವನ್ನು ನೆರವೇರಿಸಲು ನಾಗಮೋಹನದಾಸ ಸಮಿತಿಯನ್ನೇ ನೇಮಕ ಮಾಡಲಾಗಿದೆ.

ಸಮಿತಿಗೆ ಕೆಲಸ ಪೂರ್ಣಗೊಳಿಸಲು 60 ದಿನಗಳ ಅವಧಿ ವಿಸ್ತರಣೆ ನೀಡಲಾಗಿದ್ದು, ಈ ಅವಧಿಯೊಳಗೆ ಅಂತಿಮ ವರದಿಯನ್ನು ಸಲ್ಲಿಸುವಂತೆ ಸೂಚಿಸಲಾಗಿದೆ.

Exit mobile version