ಹುಬ್ಬಳ್ಳಿಯಲ್ಲಿ ಗ್ಯಾರಂಟಿ ನ್ಯೂಸ್ ʼಪ್ರಿನ್ಸಿಪಲ್ ಮೀಟ್ʼ

ಸಂವಾದದಲ್ಲಿ ಆನಂದ್ ಸಂಕೇಶ್ವರ್, VSV ಪ್ರಸಾದ್ ಭಾಗಿ

Untitled design 2026 02 23T173217.648

ಹುಬ್ಬಳ್ಳಿ: ಗ್ಯಾರಂಟಿ ನ್ಯೂಸ್ ಕೇವಲ ಸುದ್ದಿಗಳಷ್ಟೇ ಅಲ್ಲ. ಸಮಾಜಮುಖಿ ಕೆಲಸಗಳಲ್ಲೂ ಮುಂಚೂಣಿಯಲ್ಲಿದೆ. ಲೋಕಾರ್ಪಣೆಗೊಂಡ ಕೇವಲ ಹತ್ತೇ ತಿಂಗಳಲ್ಲಿ ರಾಜ್ಯದ ಜನರ ಮನೆ-ಮನ ಮುಟ್ಟಿದ ಗ್ಯಾರಂಟಿ ನ್ಯೂಸ್, ಇದೀಗ ಶಿಕ್ಷಣ ಕ್ಷೇತ್ರದಲ್ಲೂ ಹೊಸ ಹೆಜ್ಜೆ ಇಟ್ಟಿದೆ. ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ʼಪ್ರಿನ್ಸಿಪಲ್ಸ್ ಮೀಟ್ʼ ಎಂಬ ವಿನೂತನ ಕಾರ್ಯಕ್ರಮದ ಮೂಲಕ ಮಕ್ಕಳ ಉಜ್ವಲ ಭವಿಷ್ಯ ರೂಪಿಸುವ ದಿಸೆಯಲ್ಲಿ ವಿಶೇಷ ಸಂವಾದ ಕಾರ್ಯಕ್ರಮ ನಡೆಯಿತು.

ವಾಣಿಜ್ಯ ನಗರಿ ಹುಬ್ಬಳ್ಳಿ ಹೋಟೆಲ್ ಸ್ವರ್ಣ ಪ್ಯಾರಡೈಸ್‌ನಲ್ಲಿ ಗ್ಯಾರಂಟಿ ನ್ಯೂಸ್‌‌‌‌ನಿಂದ ಪ್ರಿನ್ಸಿಪಲ್ ಮೀಟ್ ಕಾರ್ಯಕ್ರಮ ನಡೆಯಿತು. ವಿ ಆರ್ ಎಲ್ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಆನಂದ್ ಸಂಕೇಶ್ವರ್, ಸ್ವರ್ಣ ಗ್ರೂಪ್ ಆಫ್ ಕಂಪನಿ ಮ್ಯಾನೇಜಿಂಗ್ ಡೈರೆಕ್ಟರ್ VSV ಪ್ರಸಾದ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ರು.

PU ನಂತರ ವಿದ್ಯಾರ್ಥಿಗಳ ಭವಿಷ್ಯ ಮತ್ತು ಪೋಷಕರ ಪಾತ್ರ ವಿಷಯದ ಮೇಲೆ ಸಂವಾದ ಕಾರ್ಯಕ್ರಮ ನಡೀತು. ಹುಬ್ಬಳ್ಳಿ-ಧಾರವಾಡ ಜಿಲ್ಲೆಯ ವಿವಿಧ ಕಾಲೇಜುಗಳ 60ಕ್ಕೂ ಹೆಚ್ಚು ಪ್ರಾಧ್ಯಾಪಕರು, ಪ್ರಾಂಶುಪಾಲರು ಸಂವಾದದಲ್ಲಿ ಭಾಗಿಯಾಗಿದ್ರು.

ಸಂವಾದದಲ್ಲಿ ಮಾತನಾಡಿದ ಆನಂದ ಸಂಕೇಶ್ವರ್, ವಿದ್ಯಾರ್ಥಿಗಳಿಗೆ ಪಿಯು ಮಹತ್ವದ ಘಟ್ಟ. ತಮ್ಮ ಭವಿಷ್ಯವನ್ನ ನಿರ್ಧರಿಸುವ ಹಂತ ಇದು. ವಿದ್ಯಾರ್ಥಿಗಳ ಜೊತೆ ಪೋಷಕರ ಪಾತ್ರವೂ ತುಂಬಾ ಮಹತ್ವದ್ದು ಎಂದರು. ಜೊತೆಗೆ AI ಯುಗದಲ್ಲಿ ನಾವಿದ್ದೇವೆ. ಯಾವ ಕೋರ್ಸ್, ಹೇಗೆ ಹಾಗೂ ಎಷ್ಟು ಮಹತ್ವ ಎಂಬ ವಿಚಾರವನ್ನವ ಪ್ರಾಂಶುಪಾಲರು ವಿದ್ಯಾರ್ಥಿಗಳಿ ತಿಳಿಸಬೇಕು. ಕ್ವಾಲಿಟಿ ವಿದ್ಯಾಭ್ಯಾಸ, ಶಿಕ್ಷಣ ಸಿಗಬೇಕು. ಕ್ವಾಲಿಡಿ ಔಟ್ ಪುಟ್ ಹೊರಗೆ ಬರಬೇಕು. ಅದಕ್ಕೆ ಶಿಕ್ಷಣ ತುಂಬಾ ಮಹತ್ವದ್ದು ಎಂದು ಆನಂದ್ ಸಂಕೇಶ್ವರ್ ಹೇಳಿದರು. ಇದೇ ವೇಳೆ, ವಿ ಆರ್ ಎಲ್ ಸಂಸ್ಥೆ ಯಶೋಗಾಥೆ ಬಗ್ಗೆ ವಿವರಿಸಿದ್ರು. ತಮ್ಮ ಓದಿನ ದಿನಗಳನ್ನ ನೆನೆದ ಆನಂದ್ ಸಂಕೇಶ್ವರ್, ವಿದ್ಯಾಭ್ಯಾಸ ಮಾಡಿಕೊಂಡೇ, ಕೆಲಸ ಕಲಿತ ಸನ್ನಿವೇಶ, ಸಂದರ್ಭವನ್ನ ವಿವರಿಸಿದ್ರು. ಗ್ಯಾರಂಟಿ ನ್ಯೂಸ್ ಮಾಡುತ್ತಿರುವ ಪ್ರಿನ್ಸಿಪಲ್ ಮೀಟ್ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ರು.

ಇನ್ನು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ VSV ಪ್ರಸಾದ್, ಇತ್ತೀಚಿನ ದಿನಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ವೃತಿ ಪರತೆ ಕಾಣುತ್ತಿಲ್ಲ. ಉದ್ಯೋಗ ಇದೆ, ಆದ್ರೆ ಅರ್ಹತೆ ಸಾಕಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಎಲ್ಲರೂ ವಿಧ್ಯಾವಂತರೇ, ಆದ್ರೆ ಕೆಲಸಕ್ಕೆ ಬೇಕಾದ ತರಬೇತಿ ಇರಲ್ಲ. ಡಿಗ್ರಿ ಸರ್ಟಿಫಿಕೇಟ್ ಇದ್ದರೂ , ಕೆಲಸ ಮಾಡುವಷ್ಟು ನೈಪುಣ್ಯತೆ ಬೆಳೆಸಿಕೊಂಡಿಲ್ಲ. ಶಿಕ್ಷಣದಲ್ಲಿ ಮತ್ತಷ್ಟು ಕ್ರಾಂತಿಕಾರಕ ಬದಲಾವಣೆ ಆಗಬೇಕು. ವ್ಯವಸ್ಥೆಯಲ್ಲಿ ಮತ್ತಷ್ಟು ಮಾರ್ಪಾಡಾಗಬೇಕು ಅಂದ್ರು. ಈ ನಿಟ್ಟಿನಲ್ಲಿ ಝೆನ್-ಜಿ ಕಿಡ್ಸ್ ಯೋಚಿಸಬೇಕು ಅಂತ vsv ಪ್ರಸಾದ್ ಸಲಹೆ ನೀಡಿದ್ರು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಗ್ಯಾರಂಟಿ ನ್ಯೂಸ್ CEO ನಮ್ರತಾ ಅವರು, ಆ್ಯಂಕರ್ ಹಾಗೂ ಪತ್ರಕರ್ತೆಯಾಗಿ ಈಗ ಉದ್ಯಮಿಯಾಗಿ ಎದುರಿಸುವ ಸವಾಲುಗಳ ಬಗ್ಗೆ ಹೇಳಿದ್ರು. ಗ್ಯಾರಂಟಿ ನ್ಯೂಸ್ ಕಳೆದ 10 ತಿಂಗಳುಗಳಿಂದ ವಿಭಿನ್ನ ಕಾರ್ಯಕ್ರಮಗಳನ್ನ ಮಾಡ್ಕೊಂಡು ಬಂದಿದೆ. ಈಗ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪ್ರಿನ್ಸಿಪಲ್ ಮೀಟ್ ಕಾರ್ಯಕ್ರಮ ಆಯೋಜಿಸಿದ್ದಾಗಿ ಹೇಳಿದರು. ಮೂಲತಃ ಧಾರವಾಡದವರೇ ಆದ ನಮ್ರತಾ ಅವರು, ತಮ್ಮ ಹುಟ್ಟೂರಲ್ಲೇ ಈ ರೀತಿಯ ವಿಶೇಷ ಕಾರ್ಯಕ್ರಮ ಮಾಡಿ, ತಾವು ಭಾಗಿ ಆಗಿದ್ದು ವಿಶೇಷ.

ಪ್ರಿನ್ಸಿಪಲ್ ಮೀಟ್ ಕಾರ್ಯಕ್ರಮದಲ್ಲಿ ಸ್ವಾಗತ ಭಾಷಣ ಮಾಡಿ ಮಾತನಾಡಿದ ಗ್ಯಾರಂಟಿ ನ್ಯೂಸ್ ಸಂಪಾದಕರಾದ ಸತೀಶ್ ಆಂಜಿನಪ್ಪ, AI ಯುಗದಲ್ಲಿ ಏನ್ ಓದಬೇಕು ಅನ್ನೋದೇ ದೊಡ್ಡ ಗೊಂದಲ. ಪೋಷಕರು ಎಷ್ಟೇ ವಿದ್ಯಾವಂತರಾಗಿದ್ದರೂ ಮಕ್ಕಳನ್ನ ಯಾವ ಕೋರ್ಸ್‌ಗೆ ಸೇರಿಸಬೇಕು, ಯಾವ ಕಾಲೇಜು ಎಂಬ ಗೊಂದಲ ಇರುತ್ತೆ. ಈ ಗೊಂದಲ ನಿವಾರಣಗಾಗಿಯೇ ಗ್ಯಾರಂಟಿ ನ್ಯೂಸ್, ಎಲ್ಲಾ ಜಿಲ್ಲೆಗಳಲ್ಲಿ ಪ್ರಿನ್ಸಿಪಲ್ ಮೀಟ್ ನಡೆಸುತ್ತಿದೆ. ಸಂವಾದದಲ್ಲಿ ಭಾಗಿಯಾಗುವ ಪ್ರಾಂಶುಪಾಲರು, ಉತ್ತಮ ಸಲಹೆ, ಸೂಚನೆಗಳನ್ನ ನೀಡಿ. ಕೋರ್ಸ್ ಗಳ ಬಗ್ಗೆ, ಕಾಲೇಜುಗಳ ಬಗ್ಗೆ, ವಿದ್ಯಾರ್ಥಿಗಳಿಗೆ ಇರುವ ಅವಕಾಶಗಳ ಬಗ್ಗೆ ಉತ್ತಮ ಚರ್ಚೆ , ಸಂವಾದ ನಡೆಸುತ್ತಿದೆ. ಇದರಿಂದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನುಕೂಲ ಆಗಲಿದೆ. ಪೂರ್ಣ ಕಾರ್ಯಕ್ರಮ ಶೀಘ್ರದಲ್ಲಿಯೇ ಗ್ಯಾರಂಟಿ ನ್ಯೂಸ್ ನಲ್ಲಿ ಪ್ರಸಾರ ಮಾಡುವುದಾಗಿ ಸಂಪಾದಕರಾದ ಸತೀಶ್ ಅಂಜಿನಪ್ಪ ಹೇಳಿದ್ರು.

ಇನ್ನು ಪಿಯುಸಿ ಮುಗಿದ ನಂತರ ವಿದ್ಯಾರ್ಥಿಗಳು ಯಾವ ದಿಕ್ಕಿನಲ್ಲಿ ಸಾಗಬೇಕು ? ಎಂಜಿನಿಯರಿಂಗ್, ಮೆಡಿಕಲ್, ಡಿಗ್ರಿ, ಸ್ಕಿಲ್ ಬೆಸ್ಟ್‌ ಕೋರ್ಸ್ ಅಥವಾ ಸ್ಪರ್ಧಾತ್ಮಕ ಪರೀಕ್ಷೆಗಳು, ಹೀಗೆ ಆಯ್ಕೆ ಮಾಡುವಾಗ ಆಸಕ್ತಿ, ಸಾಮರ್ಥ್ಯ ಮತ್ತು ಮಾರ್ಗದರ್ಶನ ಅತ್ಯಂತ ಮುಖ್ಯವೆಂದು ಎಕ್ಸಪರ್ಟ್‌ಗಳು ಸಲಹೆ ನೀಡಿದರು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೇವಲ ಅಂಕಗಳಷ್ಟೇ ಸಾಲದು. ಕಮ್ಯುನಿಕೇಷನ್ ಸ್ಕಿಲ್, ಕ್ರಿಟಿಕಲ್ ಥಿಂಕಿಂಗ್, ಡಿಜಿಟಲ್ ಜ್ಞಾನ ಮತ್ತು ವ್ಯಕ್ತಿತ್ವ ವಿಕಾಸವೂ ಅಗತ್ಯವೆಂದು ಚರ್ಚಿತ ವಿಷಯಗಳಾಗಿದ್ದವು.

ಗ್ಯಾರಂಟಿ ನ್ಯೂಸ್ ಪ್ರಿನ್ಸಿಪಲ್ಸ್ ಮೀಟ್ ಉದ್ದೇಶ, ಮಕ್ಕಳ ಭವಿಷ್ಯದ ದೃಷ್ಟಿಯಿಂದ ಸಹಾಯಕವಾಗಲಿದೆ ಎಂದು ಸಂವಾದದಲ್ಲಿ ಭಾಗಿಯಾದ ಪ್ರಾಂಶುಪಾಲರು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಸ್ತುತ ಟಿವಿ ಮಾದ್ಯಗಳನ್ನ ನೋಡೋಕೆ ಕಷ್ಟ ಆಗ್ತಿದೆ. ದಿನ ಬೆಳಗಾದ್ರೆ ಸಾಕು, ವ್ಯರ್ಥ ಚರ್ಚೆ ಮಾಡಿಕೊಂಡು ಇರ್ತಾವೆ, ಆದ್ರೆ ಗ್ಯಾರಂಟಿ ನ್ಯೂಸ್ ವಿಭಿನ್ನ ಕಾರ್ಯಕ್ರಮ ಮಾಡ್ತಿರೋದು ಖುಷಿ ತರಿಸಿದೆ ಎಂದು ಸಿಐಸಿ ಗ್ರಾಮೀಣ ಶಿಕ್ಷಣ ಸಂಸ್ಥೆಯ ನಿರ್ದೇಶಕ ಆರ್.ಎಫ್.ಭರಮಗೌಡ್ರ ಗ್ಯಾರಂಟಿ ನ್ಯೂಸ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ರು.

ಒಟ್ಟಿನಲ್ಲಿ ಇವತ್ತು ಹುಬ್ಬಳ್ಳಿಯಲ್ಲಿ ನಡೆದ ಪ್ರಿನ್ಸಿಪಲ್ ಮೀಟ್ ವಿಶೇಷ ಕಾರ್ಯಕ್ರಮದಲ್ಲಿ ಪೋಷಕರ ಪಾತ್ರದ ಕುರಿತಾಗಿ ವಿಶೇಷ ಚರ್ಚೆ ನಡೆಯಿತು. ಮಕ್ಕಳ ಮೇಲೆ ಪೋಷಕರು ತಮ್ಮ ಅಪೂರ್ಣ ಕನಸುಗಳನ್ನು ಹೇರುವ ಬದಲು, ಅವರ ಆಸಕ್ತಿ ಮತ್ತು ಸಾಮರ್ಥ್ಯ ಅರಿತು ಬೆಂಬಲ ನೀಡಬೇಕು ಎಂದು ಪ್ರಾಂಶುಪಾಲರು ಅಭಿಪ್ರಾಯಪಟ್ಟರು.
ಮಕ್ಕಳ ಜೊತೆ ಸ್ನೇಹಭಾವದಿಂದ ಮಾತನಾಡಿ, ಒತ್ತಡವಿಲ್ಲದ ವಾತಾವರಣ ನಿರ್ಮಿಸಿದಾಗ ಮಾತ್ರ ಅವರ ಪ್ರತಿಭೆ ಹೊರಹೊಮ್ಮಲಿಕ್ಕೆ ಸಾಧ್ಯ ಎಂಬ ಸಂದೇಶ ಕಾರ್ಯಕ್ರಮ ಕೇಂದ್ರಬಿಂದುವಾಗಿತ್ತು..

Exit mobile version