ಪೋಷಕರಿಗೆ ಅವರ ಮಕ್ಕಳದ್ದೆ ಚಿಂತೆ, ಹೀಗಾಗೇ ಮಕ್ಕಳಿಗೆ ವಿದ್ಯಾಬ್ಯಾಸ ಕೊಡಿಸೋ ವಿಚಾರವಾಗಿ ಅವರೆಲ್ಲಾ ಸಚಿವರ ಬಳಿ ಸಹಾಯಕ್ಕೆ ಬಂದಿದ್ರು, ಆದ್ರೆ ಪೋಷಕರು-ಮಕ್ಕಳ ಭವಿಷ್ಯದ ಬಗ್ಗೆ ಚಿಂತಿಸಬೇಕಾದ ಶಿಕ್ಷಣ ಸಚಿವರದ್ದು ಮಾತ್ರ ದರ್ಪದ ವರ್ತನೆ ತೋರಿದ್ದಾರೆ. ಸಚಿವರ ವಿರುದ್ದ ಮಾತನಾಡಿದ ಮಗುವಿನ ವಿರುದ್ದ ಕ್ರಮಕ್ಕೆ ಸೂಚಿಸಿದ್ದ ಸಚಿವರು ಇಂದು ಪೋಷಕರನ್ನೆ ತರಾಟೆಗೆ ತಗೆದುಕೊಂಡ ಘಟನೆ ನಡೆದಿದೆ. ಸಚಿವರ ಈ ದರ್ಪದ ವರ್ತನೆಗೆ ಪೋಷಕರು ಹಿಡಿ ಹಿಡಿ ಶಾಪ ಹಾಕಿದ್ದಾರೆ.
ಶಾಲಾ ಕಾಲೇಜುಗಳಿಗೆ ಈಗಾಗಲೇ ದಾಖಲಾತಿ ಶುರುವಾಗಿವೆ. ಮಕ್ಕಳಿಗೆ ದಾಖಲಾತಿ ಕೊಡಿಸಲು ಪೋಷಕರು ಹಗಲಿರುಳು ಪರದಾಡುತ್ತಿದ್ದಾರೆ. ಆದ್ರೆ 1ನೇ ತರಗತಿಗೆ ಮಕ್ಕಳನ್ನ ದಾಖಲಾತಿ ಮಾಡಿಸೋಕೆ 6 ವರ್ಷ ಕಡ್ಡಾಯ ಅನ್ನೋ ರೂಲ್ಸ್ ಪೋಷಕರಿಗೆ ಹೊಸ ಟೆನ್ಸನ್ಸ್ ತಂದಿಟ್ಟಿದೆ. 6 ವರ್ಷಕ್ಕೆ 1-2 ತಿಂಗಳು ಕಡಿಮೆ ಇದ್ರು ಮಕ್ಕಳಿಗೆ ಅಡ್ಮಿಷನ್ ಸಿಗ್ತಿಲ್ಲ. ಹೀಗಾಗಿ ವಯೋಮಿತಿ ಸಡಿಲಿಕೆ ಬಗ್ಗೆ ಸಚಿವರ ಬಳಿ ಸಹಾಯ ಕೇಳೋಕೆ ಬಂದ್ರೆ ಶಿಕ್ಷಣ ಸಚಿವರು ದರ್ಪದ ವರ್ತನೆ ತೋರಿಸಿದ್ದಾರೆ. ಮಾಧ್ಯಮಗಳ ಜೊತೆ ಬರತೀರಾ ಅಂತಾ ಪೋಷಕರನ್ನೆ ಸಚಿವರು ತರಾಟೆಗೆ ತಗೆದುಕೊಳ್ಳುವ ಮೂಲಕ ಇದೆಲ್ಲಾ ರಬ್ಬಿಶ್ ನಡೆಯಲ್ಲ ಅಂತಾ ದರ್ಪ ತೋರಿದ್ದಾರೆ.
ರಾಜ್ಯದಲ್ಲಿ ಸುಮಾರು 1 ಲಕ್ಷಕ್ಕೂ ಹೆಚ್ಚು ಮಕ್ಕಳು 6 ವರ್ಷಕ್ಕೆ ಒಂದೆರಡು ತಿಂಗಳು ಕಡಿಮೆ ವಯಸ್ಸಿನ ಮಕ್ಕಳಿದ್ದಾರೆ. ಈ ಮಕ್ಕಳಿಗೆ 1ನೇ ತರಗತಿಯ ದಾಖಲಾತಿಗೆ ಅನುಕೂಲ ಮಾಡಿಕೊಡಬೇಕು. ಹೀಗಾಗಿ ಒಂದನೇ ತರಗತಿಗೆ 6 ವರ್ಷ ವಯೋಮಿತಿ ಸಡಿಲಿಕೆ ಮಾಡುವಂತೆ ಪೋಷಕರ ಮನವಿ ಮಾಡೋಕೆ ಸಚಿವರ ಬಳಿ ಹೋದ್ರೆ ಸಚಿವರು ಮಾತ್ರ ಮತ್ತದೇ ತಮ್ಮ ದರ್ಪ ತೋರಿದ್ದು ಪೋಷಕರ ಹಿಡಿಶಾಪಕ್ಕೆ ಕಾರಣವಾಗಿದೆ.
ಈ ವಿಚಾರವನ್ನ ಮಾಧ್ಯಮದವರು ಪ್ರಶ್ನೆ ಮಾಡಿದ್ರೆ ಎಚ್ಚೆತ್ತುಕೊಂಡ ಶಿಕ್ಷಣ ಸಚಿವ ಮಧು ಬಂಗಾರಪ್ಪ, ನಾನು ಹೇಳಿದ್ದು ಪೋಷಕರಿಗೆ, ಮಾಧ್ಯಮಗಳಿಗೆ ಅಲ್ಲ. ವಯೋಮಿತಿ ಗೊಂದಲದ ಬಗ್ಗೆ ಪೋಷಕರು ನನ್ನ ಬಳಿ ಸಾಕಷ್ಟು ಬಾರಿ ಬಂದಿದ್ದಾರೆ. ಕಳೆದ ಮೂರು ವರ್ಷಗಳ ಹಿಂದೆ ಆಗಿದೆ. ಈಗ ಕಾನೂನಿನಲ್ಲಿ ಏನು ಮಾಡಲು ಸಾಧ್ಯವಿದೆ ಎಂದು ನೋಡಿಕೊಂಡು ಮಾಡಬೇಕು. ನಾನು ಅಧಿಕಾರಿಗಳಿಗೂ ಈ ಸಮಸ್ಯೆ ಬಗ್ಗೆ ಹೇಳಿದ್ದೇನೆ. ಆದರೆ ಪೋಷಕರು ಪದೇ ಪದೇ ಈ ರೀತಿ ಬಂದು ನನ್ನ ಮೇಲೆ ಒತ್ತಡ ಹಾಕುತ್ತಿದ್ದಾರೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನಾನು ತೀರ್ಮಾನ ತೆಗೆದುಕೊಳ್ಳಬೇಕು. ಸುಮ್ಮನೇ ಹೇಗೋ ಮಾಡಲು ಸಾಧ್ಯವಿಲ್ಲ ಎಂದು ಹೇಳಿಕೆ ಕೊಟ್ಟಿದ್ದಾರೆ.
ಶಿಕ್ಷಣ ಸಚಿವ ಮಧು ಬಂಗಾರಪ್ಪರ ದರ್ಪದ ವರ್ತನೆ ಇದೇನೂ ಹೊಸದಲ್ಲ, ಈ ಹಿಂದೆ ಸಚಿವರಿಗೆ ಸರಿಯಾಗಿ ಕನ್ನಡ ಬರಲ್ಲ ಅಂತಾ ವಿದ್ಯಾರ್ಥಿ ಮಾತನಾಡಿದಕ್ಕೆ ವಿದ್ಯಾರ್ಥಿ ವಿರುದ್ದವೇ ಕ್ರಮಕ್ಕೆ ಶಿಪಾರಸ್ಸು ಮಾಡಿದ್ದ ಸಚಿವರು ಇದೀಗ ಸಹಾಯ ಕೇಳಲು ಬಂದ್ರೆ ಇದೀಗ ಮತ್ತೆದೆ ದರ್ಪ ತೋರಿರುವುದು ನಿಜಕ್ಕೂ ಪೋಷಕರು ಹಿಡಿಶಾಪಕ್ಕೆ ಕಾರಣವಾಗಿದೆ.