ಡಿಕೆಶಿ ಸಂಪುಟದ 2ನೇ ಲಿಸ್ಟ್‌ನಲ್ಲಿ ಯಾರಿಗೆ ಸಿಗಲಿದೆ ಮಂತ್ರಿ ಚಾನ್ಸ್‌..?

ಬೆಂಗಳೂರು : ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರದ ಸಂಪುಟ ವಿಸ್ತರಣೆ ಚರ್ಚೆ ಮತ್ತೊಮ್ಮೆ ಜೋರಾಗಿದೆ. ಪರಿಷತ್ ಚುನಾವಣೆ ಮುಗಿಯುತ್ತಿದ್ದಂತೆಯೇ ಡಿ.ಕೆ ಶಿವಕುಮಾರ್‌ ಸಂಪುಟ ವಿಸ್ತರಣೆ ಫಿಕ್ಸ್ ಎನ್ನಲಾಗಿದೆ.. ಸಂಪುಟದಲ್ಲಿ ಪ್ರಸ್ತುತ 20 ಕ್ಕೂ ಹೆಚ್ಚು ಸ್ಥಾನಗಳು ಖಾಲಿ ಇವೆ. ಇದೀಗ ಮೊದಲ ಪಟ್ಟಿಯಲ್ಲಿ ಸ್ಥಾನ ಪಡೆಯದವರಿಗೆ ಎರಡನೇ ಪಟ್ಟಿಯಲ್ಲಿ ಅವಕಾಶ ನೀಡುವ ಸಾಧ್ಯತೆ ಇದೆ.

ಎರಡನೇ ಪಟ್ಟಿಯ ಹಿಂದಿನ ಲೆಕ್ಕಚಾರವೇನು?

ಕಳೆದ ವಾರ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಹಿರಿಯ ಮುಖಂಡ ಸಿದ್ದರಾಮಯ್ಯ ಅವರು ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಅನ್ನು ಭೇಟಿಯಾಗಿ ಸಂಪುಟ ವಿಸ್ತರಣೆ ಕುರಿತು ಚರ್ಚೆ ನಡೆಸಿದ್ದರು. ಈ ಸಭೆಯಲ್ಲಿ ಸುಮಾರು 45 ಮಂದಿಯ ಶಾರ್ಟ್ ಲಿಸ್ಟ್ ಅನ್ನು ಹೈಕಮಾಂಡ್ ಮುಂದಿಡಲಾಗಿದೆ. ರಾಹುಲ್ ಗಾಂಧಿ ಅವರು 50 ವರ್ಷದೊಳಗಿನ ಯುವಕರಿಗೆ ಆದ್ಯತೆ ನೀಡಬೇಕೆಂದು ಸೂಚಿಸಿದ್ದಾರೆ. ಆದರೆ, ಹಿರಿಯ ಹಾಗೂ ಅನುಭವಿ ಮುಖಂಡರಿಗೂ ಸ್ಥಾನ ನೀಡಬೇಕೆಂಬ ಒತ್ತಡವಿದೆ.

ಜೂನ್ 18 ಬಳಿಕ ದೆಹಲಿಗೆ ದೌಡು

ಎರಡನೇ ಪಟ್ಟಿ ಅಂತಿಮಗೊಳಿಸಲು ಜೂನ್ 18 ರ ಬಳಿಕ ಸಿಎಂ ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಮತ್ತೊಮ್ಮೆ ದೆಹಲಿಗೆ ತೆರಳಲಿದ್ದಾರೆ. ಅಲ್ಲಿ ಹೈಕಮಾಂಡ್ ನಾಯಕರೊಂದಿಗೆ ಅಂತಿಮ ಹೆಸರುಗಳನ್ನು ನಿರ್ಧರಿಸಲಾಗುವುದು. ಸಂಪುಟದ ಎಲ್ಲಾ 20 ಸ್ಥಾನಗಳನ್ನು ತುಂಬದೇ, ಕೇವಲ 15 ರಿಂದ 17 ಸ್ಥಾನಗಳನ್ನು ಭರ್ತಿ ಮಾಡುವ ತಂತ್ರವನ್ನು ಡಿ.ಕೆ. ಶಿವಕುಮಾರ್ ರೂಪಿಸಿದ್ದಾರೆ. ಉಳಿದ 3-5 ಸ್ಥಾನಗಳನ್ನು ಖಾಲಿಯಾಗಿಟ್ಟುಕೊಂಡು ನಂತರದ ದಿನಗಳಲ್ಲಿ ಅಸಮಾಧಾನಿತರನ್ನು ಸಮಾಧಾನಪಡಿಸಿಕೊಳ್ಳಲು ಅವಕಾಶವಾಗಿಟ್ಟುಕೊಳ್ಳುವುದು ಅವರ ಯೋಜನೆಯಾಗಿದೆ.

ಯಾರಿಗೆಲ್ಲಾ ಚಾನ್ಸ್ ಸಿಗಬಹುದು?

ಕೆಳಗಿನ ಶಾಸಕರು ಎರಡನೇ ಸಂಪುಟ ಪಟ್ಟಿಯಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಅತ್ಯಧಿಕವಾಗಿದೆ.

ಚಿಕ್ಕಬಳ್ಳಾಪುರ

ಬೆಂಗಳೂರು ಗ್ರಾಮಾಂತರ

ಬೆಂಗಳೂರು ನಗರ (ನಾಲ್ಕು ಪ್ರಮುಖ ಹೆಸರುಗಳು)

ಮಂಡ್ಯ ಜಿಲ್ಲೆ

ಮೈಸೂರು

ಹಾಸನ ಮತ್ತು ಶಿವಮೊಗ್ಗ

ದಾವಣಗೆರೆ

ಒಟ್ಟಾರೆಯಾಗಿ, ಎರಡನೇ ಸಂಪುಟ ವಿಸ್ತರಣೆಯಲ್ಲಿ ಜಿಲ್ಲಾ ಸಮತೋಲನ, ಜಾತಿ ಸಮೀಕರಣ ಮತ್ತು ಯುವಕರಿಗೆ ಆದ್ಯತೆ ನೀಡುವ ಸಾಧ್ಯತೆಯಿದೆ. ಆದರೆ ಜಮೀರ್ ಅಹ್ಮದ್ ಅವರಂತಹ ನಾಯಕರ ಮೇಲಿನ ಆಡಿಯೋ ಪ್ರಕರಣ ಹೈಕಮಾಂಡ್‌ನ ನಿರ್ಧಾರವನ್ನು ಬದಲಿಸಬಹುದು. ಸುಬ್ಬಾರೆಡ್ಡಿ ಅವರ ಕಾನೂನು ತೊಡಕು ಕೂಡ ದೊಡ್ಡ ಅಡ್ಡಿಯಾಗಿದೆ. ಜೂನ್ ಅಂತ್ಯದ ವೇಳೆಗೆ ಎರಡನೇ ಪಟ್ಟಿ ಬಹಿರಂಗವಾಗುವ ಸಾಧ್ಯತೆಯಿದೆ.

Exit mobile version