• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, June 25, 2025
  • Login
  • Register
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ಪಕ್ಷದಿಂದ ಉಚ್ಚಾಟನೆಯಾಗಿ ಗೆದ್ದವರು ಇಬ್ಬರು ಮಾತ್ರ: ಹೊಸ ಇತಿಹಾಸ ಬರೆಯುತ್ತಾರಾ ಯತ್ನಾಳ್..?

ಮಹೇಶ್ ಕುಮಾರ್ ಕೆ. ಎಲ್ by ಮಹೇಶ್ ಕುಮಾರ್ ಕೆ. ಎಲ್
March 28, 2025 - 2:38 pm
in Flash News, ಕರ್ನಾಟಕ
0 0
0
Film (97)

ಯತ್ನಾಳ್ ಉಚ್ಚಾಟನೆ ರಾಜ್ಯ ರಾಜಕೀಯದ ದಿಕ್ಕು ಬದಲಿಸುತ್ತಾ..? ಹೀಗೊಂದು ಪ್ರಶ್ನೆ ಉದ್ಭವವಾಗಿದೆ. ಏಕೆಂದರೆ ದೇಶದ ರಾಜಕೀಯದಲ್ಲಿ ಹಲವು ಉಚ್ಚಾಟನೆಗಳು ನಡೆದಿವೆ. ಅವು ಐತಿಹಾಸಿಕ ತಿರುವಿಗೆ ಸಾಕ್ಷಿಯಾಗಿವೆ.
ಪಕ್ಷದಿಂದ ಉಚ್ಚಾಟನೆ ಎಂದರೆ.. ಬೇರೇನಲ್ಲ.. ಅವರು ಇನ್ನು ಮುಂದೆ ಆ ಪಕ್ಷದಲ್ಲಿ ಇರೋದಿಲ್ಲ. ಸದಸ್ಯರಾಗಿರೋದಿಲ್ಲ. ಅವರಿಗೆ ಬೇರೆ ಪಕ್ಷಕ್ಕೆ ಹೋಗುವುದಕ್ಕೆ ಯಾವುದೇ ಅಡ್ಡಿ ಆತಂಕ ಇರುವುದಿಲ್ಲ. ಆದರೆ, ಯತ್ನಾಳ್ ಹಿಂದುತ್ವವಾದಿ. ಅವರಿಗೆ ಸದ್ಯಕ್ಕೆ ಬಿಜೆಪಿ ಬಿಟ್ಟರೆ ಬೇರೆ ಆಯ್ಕೆಯೂ ಇಲ್ಲ. ಇಷ್ಟಕ್ಕೂ ದೇಶದ ದಿಕ್ಕನ್ನೇ ಬದಲಿಸಿದ ಉಚ್ಚಾಟನೆಗಳ ಇತಿಹಾಸವನ್ನೊಂದ್ಸಲ ನೋಡ್ತಾ ಹೋಗೋಣ.
ಐತಿಹಾಸಿಕ ಉಚ್ಚಾಟನೆಗಳು:
1969 : ಇಂದಿರಾ ಗಾಂಧಿ ಉಚ್ಚಾಟನೆ

ಇಂದಿರಾ ಗಾಂಧಿ ದೇಶದ ಪ್ರಧಾನಿಯಾಗಿದ್ದರು. ಆಗಿನ್ನೂ ಕಾಂಗ್ರೆಸ್ ಚಿಹ್ನೆ ಹಸ್ತವಾಗಿರಲಿಲ್ಲ. ಚರಕ ನೂಲುತ್ತಿದ್ದ ಮಹಿಳೆ. ಆಗ ಬೆಂಗಳೂರಿನ ಗಾಜಿನ ಮನೆಯಲ್ಲಿ ಸಭೆ ಸೇರಿದ್ದ ಆಗಿನ ಕಾಂಗ್ರೆಸ್ ಅಧ್ಯಕ್ಷ ನಿಜಲಿಂಗಪ್ಪ, ಕಾಮರಾಜ್, ಸಂಜೀವ್ ರೆಡ್ಡಿ, ಮೊರಾರ್ಜಿ ದೇಸಾಯಿ ಅವರೆಲ್ಲ ಒಟ್ಟು ಸೇರಿ ಇಂದಿರಾ ಗಾಂಧಿ ಅವರನ್ನೇ ಪಕ್ಷದಿಂದ ಉಚ್ಚಾಟನೆ ಮಾಡಿದ್ದರು.
ಮುಂದೆ ಇಂದಿರಾ ಗಾಂಧಿಯವರದ್ದೇ ಒಂದು ಕಾಂಗ್ರೆಸ್ ಆಯ್ತು. ಕಾಂಗ್ರೆಸ್ ಕಮಿಟಿಯಲ್ಲಿದ್ದ 705 ಸದಸ್ಯರ ಪೈಕಿ, 446 ಕಾಂಗ್ರೆಸ್ಸಿಗರು ಇಂದಿರಾ ಪರ ನಿಂತರೆ, ಮಿಕ್ಕವರು ಕಾಮರಾಜ್, ಮೊರಾರ್ಜಿ ದೇಸಾಯಿ ಅವರ ಪರ ನಿಂತರು. ಅವರದ್ದೇ ಒಂದು ಕಾಂಗ್ರೆಸ್ ಪಕ್ಷವಾಯ್ತು. ಮೂಲ ಕಾಂಗ್ರೆಸ್ ಇಬ್ಭಾಗವಾಯ್ತು. ಈಗ ಇರುವುದು ಇಂದಿರಾ ಗಾಂಧಿ ಸ್ಥಾಪಿಸಿದ್ದ ಕಾಂಗ್ರೆಸ್ ಪಕ್ಷ.
ಆ ಉಚ್ಚಾಟನೆಯ ನಂತರ, ಕಾಂಗ್ರೆಸ್ ಪಕ್ಷದಲ್ಲಿ ಇಂದಿರಾ ಗಾಂಧಿ ಪ್ರಾಬಲ್ಯವೂ ಹೆಚ್ಚಿತು. ಜೊತೆಗೆ ಇಂದಿರಾ ಗಾಂಧಿ ಅವರ ವ್ಯಕ್ತಿತ್ವವೂ ಬದಲಾಯ್ತು. ಯಾರನ್ನೂ ನಂಬದ ಸ್ಥಿತಿಗೆ ತಲುಪಿದ ಇಂದಿರಾ, ರಾಷ್ಟ್ರ ರಾಜಕೀಯದಲ್ಲಿ ಇತಿಹಾಸ ಸೃಷ್ಟಿಸಿದ್ರು.
ಎಮರ್ಜೆನ್ಸಿ ನಂತರ ಸೋತಿದ್ದ ಇಂದಿರಾ ಗಾಂಧಿ, ಕರ್ನಾಟಕದ ಚಿಕ್ಕಮಗಳೂರಿನಿಂದ ಸ್ಪರ್ಧೆ ಮಾಡಿ ಗೆಲ್ಲೋದಕ್ಕೆ ಇದೂ ಒಂದು ಕಾರಣ ಎನ್ನಬಹುದು.
1979 : ಕಾಂಗ್ರೆಸ್‌ನಿಂದ ದೇವರಾಜ ಅರಸು ಉಚ್ಚಾಟನೆ

RelatedPosts

ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾಗಿದ್ದ ಮಹಿಳೆಯ ಮರ್ಡರ್: ಆರೋಪಿ ಎಸ್ಕೇಪ್

ರಾಷ್ಟ್ರಪತಿಗೆ ‘ಸಿತಾರೆ ಜಮೀನ್ ಪರ್’ ಸಿನಿಮಾ ತೋರಿಸಿದ ನಟ ಆಮಿರ್ ಖಾನ್

ಕಲಬುರಗಿಯಲ್ಲಿ ಮಾರಾಕಾಸ್ತ್ರಗಳಿಂದ ಕೊಚ್ಚಿ ಮೂವರ ಭೀಕರ ಹತ್ಯೆ

ಇತಿಹಾಸ ಸೃಷ್ಟಿಗೆ ಕೌಂಟ್‌ಡೌನ್: ಗಗನಯಾತ್ರಿ ಶುಭಾಂಶು ಶುಕ್ಲಾ ಇಂದು ಬಾಹ್ಯಾಕಾಶ ಯಾನ

ADVERTISEMENT
ADVERTISEMENT

ಇನ್ನು ಕರ್ನಾಟಕದ ರಾಜಕೀಯಕ್ಕೆ ಬಂದರೆ, ಅರಸು ಅವರನ್ನ ಆದರ್ಶವಾಗಿ ಹೇಳ್ಕೊಳ್ತಾರೆ. ಆದರೆ, ಅದೇ ಅರಸು ಅವರನ್ನು ಇಂದಿರಾ ಗಾಂಧಿ ಪಕ್ಷದಿಂದ ಉಚ್ಚಾಟಿಸಿದ್ದರು. ಅದು 1979ರಲ್ಲಿ ನಡೆದಿತ್ತು. ಅರಸು ಸಂಪುಟದಲ್ಲಿ ಮಂತ್ರಿಯಾಗಿದ್ದ ಬಂಗಾರಪ್ಪ ನೇತೃತ್ವದಲ್ಲೇ ಒಂದು ಸಮಿತಿ ಮಾಡಿ, ಆ ಸಮಿತಿಯಿಂದ ಶಿಫಾರಸು ಮೇರೆಗೆ ಅರಸು ಅವರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಚಾಟಿಸಲಾಗಿತ್ತು. ಅರಸು ಜೊತೆಯಲ್ಲಿದ್ದವರೆಲ್ಲ ಇಂದಿರಾ ಕಾಂಗ್ರೆಸ್ಸಿನ ಜೊತೆಗೆ ನಿಂತರು. ಅದು ಅರಸು ರಾಜಕೀಯ ಪತನದ ಆರಂಭವೂ ಹೌದು.
1984 : ಬಿಜೆಪಿಯಿಂದ ಎಕೆ ಸುಬ್ಬಯ್ಯ ಉಚ್ಚಾಟನೆ
ಕರ್ನಾಟಕದಲ್ಲಿ 1983ರಲ್ಲಿ ರಾಮಕೃಷ್ಣ ಹೆಗಡೆ ನೇತೃತ್ವದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ಸೇತರ ಸರ್ಕಾರ ಅಸ್ಥಿತ್ವಕ್ಕೆ ಬಂದಿತ್ತು. ಬಿಜೆಪಿ ಬೇರು ಬಿಡೋಕೆ ಆರಂಭಸಿತ್ತಷ್ಟೇ. ಆಗ ಅದೇ ಮೊದಲ ಬಾರಿಗೆ ಬಿಜೆಪಿಯಿಂದ 18 ಶಾಸಕರು ಗೆದ್ದು ಬಂದಿದ್ದರು. ಆಗ ಎಕೆ ಸುಬ್ಬಯ್ಯ ಅವರು ಆರ್‌ಎಸ್‌ಎಸ್‌ ನಾಯಕರನ್ನು ಬಹಿರಂಗವಾಗಿ ಟೀಕಿಸಿದ ಕಾರಣಕ್ಕೆ, ಉಚ್ಚಾಟನೆಯಾಗಿದ್ದರು. ಆಗ ಎಲ್ ಕೆ ಅಡ್ವಾಣಿ ಬೆಂಗಳೂರಿಗೆ ಬಂದು ಎಕೆ ಸುಬ್ಬಯ್ಯ ಅವರನ್ನುಉಚ್ಚಾಟನೆ ಮಾಡಿದ್ದರು. ಬಿಬಿ ಶಿವಪ್ಪ, ರಾಜ್ಯ ಬಿಜೆಪಿ ಅಧ್ಯಕ್ಷರಾಗಿದ್ದರು. ಎಕೆ ಸುಬ್ಬಯ್ಯ, ಕನ್ನಡ ನಾಡು ಪಕ್ಷ ಸ್ಥಾಪಿಸಿದ್ದು ಆಗಲೇ.

1997 : ಜನತಾದಳದಿಂದ ಹೆಗಡೆ ಉಚ್ಚಾಟನೆ
ಅದು ದೇವೇಗೌಡರು ಪ್ರಧಾನಿಯಾದ ವರ್ಷ. ಲೋಕಸಭೆಯಲ್ಲಿ ವಿಶ್ವಾಸಮತ ಸಾಬೀತಾದ ಮರುದಿನವೇ ರಾಮಕೃಷ್ಣ ಹೆಗಡೆ ಅವರನ್ನು ಜನತಾ ದಳದಿಂದ ಉಚ್ಚಾಟನೆ ಮಾಡಲಾಗಿತ್ತು.
ಆಗ ದೇವೇಗೌಡರ ಜೊತೆ ನಿಂತಿದ್ದವರು ಸಿದ್ದರಾಮಯ್ಯ, ಜೆಹೆಚ್‌ ಪಟೇಲ್ ಮತ್ತಿತರ ನಾಯಕರು. ಆದರೆ ಕೆಲವೇ ವರ್ಷಗಳಲ್ಲಿ ಜನತಾದಳ ಇಬ್ಭಾಗವಾಗಿ, ಜಾತ್ಯತೀತ ಜನತಾ ದಳ ಹುಟ್ಟಿತು.

2005 : JDSನಿಂದ ಸಿದ್ದರಾಮಯ್ಯ ಉಚ್ಚಾಟನೆ

ಇನ್ನು 2005ರಲ್ಲಿ ದೇವೇಗೌಡರು ಮತ್ತು ಸಿದ್ದರಾಮಯ್ಯ ನಡುವೆ ಭಿನ್ನಾಭಿಪ್ರಾಯ ಉದ್ಭವವಾಯ್ತು. ಆಗ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರನ್ನು ಅಹಿಂದ ಸಮಾವೇಶದ ಕಾರಣ ನೀಡಿ ಉಚ್ಚಾಟನೆ ಮಾಡಲಾಗಿತ್ತು. ಅದಾದ ನಂತರ ಕಾಂಗ್ರೆಸ್ ಸೇರಿದ ಸಿದ್ದರಾಮಯ್ಯ, ಎರಡು ಬಾರಿ ಸಿಎಂ ಆಗಿ ಇತಿಹಾಸ ಸೃಷ್ಟಿಸಿದರು.

ಹೀಗೆ ದೇಶದಲ್ಲಿ ಸೃಷ್ಟಿಯಾದ 5 ರಾಜಕೀಯ ಉಚ್ಚಾಟನೆಗಳಿಗೆ, 5 ರಾಜಕೀಯ ಮನ್ವಂತರಗಳಿಗೆ, 5 ರಾಜಕೀಯ ಕ್ರಾಂತಿಗಳಿಗೆ, 5 ರಾಜಕೀಯ ಹೊಸ ಹುಟ್ಟುಗಳಿಗೆ ಕರ್ನಾಟಕವೇ ಕಾರಣವಾಗಿದೆ. ಇವು ಉಚ್ಚಾಟನೆಯಿಂದ ಸೃಷ್ಟಿಯಾದ ಇತಿಹಾಸಗಳು. ಈಗ ಬಿಜೆಪಿಯಿಂದ ಮೂರನೇ ಬಾರಿಗೆ ಬಸನಗೌಡ ಪಾಟೀಲ ಯತ್ನಾಳ್ ಉಚ್ಚಾಟನೆಯಾಗಿದ್ದಾರೆ.
ಒಂದೊಂದು ಉಚ್ಚಾಟನೆಗಳೂ ಒಂದೊಂದು ಇತಿಹಾಸ ಬರೆದಿವೆ. ಹೊಸ ಇತಿಹಾಸ ಬರೆದಿದ್ದು ಇಂದಿರಾ ಗಾಂಧಿ ಮತ್ತು ಸಿದ್ದರಾಮಯ್ಯ ಮಾತ್ರ. ಉಳಿದಂತೆ ದೇವರಾಜ ಅರಸು, ಎಕೆ ಸುಬ್ಬಯ್ಯನವರಿಗೆ ಅದು ಸಾಧ್ಯವಾಗಲಿಲ್ಲ. ರಾಮಕೃಷ್ಣ ಹೆಗಡೆ, ರಾಜ್ಯದಲ್ಲಿ ಬಿಜೆಪಿಗೆ ಭದ್ರ ನೆಲೆ ಸಿಗುವುದಕ್ಕೆಕ ಕಾರಣರಾದು. ತಮ್ಮ ಉಚ್ಚಾಟನೆಯಿಂದ ಯತ್ನಾಳ್ ಹೊಸ ಇತಿಹಾಸ ಬರೆಯುತ್ತಾರೋ.. ನೇಪಥ್ಯಕ್ಕೆ ಸರಿಯುತ್ತಾರೋ.. ನಿರ್ಧಾರ ಮಾಡಬೇಕಿರುವುದು ಸ್ವತಃ ಯತ್ನಾಳ್.

ShareSendShareTweetShare
ಮಹೇಶ್ ಕುಮಾರ್ ಕೆ. ಎಲ್

ಮಹೇಶ್ ಕುಮಾರ್ ಕೆ. ಎಲ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಕಂಟೆಂಟ್ ಎಡಿಟರ್ ಆಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಟಿವಿ ಸುದ್ದಿ ವಾಹಿನಿಯ ವಿವಿಧ ಹುದ್ದೆಗಳಲ್ಲಿ 20 ವರ್ಷ ಕಾರ್ಯ ನಿರ್ವಹಿಸಿದ ಅನುಭವ ಇದೆ. ರಾಜಕೀಯ, ಕ್ರೀಡೆ, ಸಿನಿಮಾ, ವಿಜ್ಞಾನ, ಅಂತಾರಾಷ್ಟ್ರೀಯ ರಂಗಗಳು ಇವರ ಆಸಕ್ತಿಯ ವಿಷಯಗಳು. ಇದಲ್ಲದೆ ವಿಶ್ಲೇಷಣಾತ್ಮಕ ಲೇಖನಗಳನ್ನು ಹೆಚ್ಚಾಗಿ ಬರೆಯುತ್ತಾರೆ. ಕನ್ನಡ ಪುಸ್ತಕಗಳ ಅಧ್ಯಯನ ಇವರ ಆಸಕ್ತಿಯ ವಿಷಯ.

Please login to join discussion

ತಾಜಾ ಸುದ್ದಿ

Untitled design 2025 06 25t095519.974

ವಾಹನ ಸವಾರರಿಗೆ ಬಿಗ್‌ ಶಾಕ್: ಕರ್ನಾಟಕದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ

by ಶಾಲಿನಿ ಕೆ. ಡಿ
June 25, 2025 - 9:59 am
0

Untitled design 2025 06 25t094307.518

ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾಗಿದ್ದ ಮಹಿಳೆಯ ಮರ್ಡರ್: ಆರೋಪಿ ಎಸ್ಕೇಪ್

by ಶಾಲಿನಿ ಕೆ. ಡಿ
June 25, 2025 - 9:52 am
0

Untitled design 2025 06 25t092152.267

ಇಂದು ಆಭರಣ ಪ್ರಿಯರಿಗೆ ಗುಡ್‌ನ್ಯೂಸ್: ಚಿನ್ನ-ಬೆಳ್ಳಿ ಬೆಲೆ ಭಾರೀ ಇಳಿಕೆ

by ಶಾಲಿನಿ ಕೆ. ಡಿ
June 25, 2025 - 9:33 am
0

Untitled design 2025 06 25t085941.346

ರಾಷ್ಟ್ರಪತಿಗೆ ‘ಸಿತಾರೆ ಜಮೀನ್ ಪರ್’ ಸಿನಿಮಾ ತೋರಿಸಿದ ನಟ ಆಮಿರ್ ಖಾನ್

by ಶಾಲಿನಿ ಕೆ. ಡಿ
June 25, 2025 - 9:07 am
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2025 06 25t094307.518
    ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾಗಿದ್ದ ಮಹಿಳೆಯ ಮರ್ಡರ್: ಆರೋಪಿ ಎಸ್ಕೇಪ್
    June 25, 2025 | 0
  • Untitled design 2025 06 25t085941.346
    ರಾಷ್ಟ್ರಪತಿಗೆ ‘ಸಿತಾರೆ ಜಮೀನ್ ಪರ್’ ಸಿನಿಮಾ ತೋರಿಸಿದ ನಟ ಆಮಿರ್ ಖಾನ್
    June 25, 2025 | 0
  • Untitled design 2025 06 25t082500.218
    ಕಲಬುರಗಿಯಲ್ಲಿ ಮಾರಾಕಾಸ್ತ್ರಗಳಿಂದ ಕೊಚ್ಚಿ ಮೂವರ ಭೀಕರ ಹತ್ಯೆ
    June 25, 2025 | 0
  • Untitled design 2025 06 25t080320.266
    ಇತಿಹಾಸ ಸೃಷ್ಟಿಗೆ ಕೌಂಟ್‌ಡೌನ್: ಗಗನಯಾತ್ರಿ ಶುಭಾಂಶು ಶುಕ್ಲಾ ಇಂದು ಬಾಹ್ಯಾಕಾಶ ಯಾನ
    June 25, 2025 | 0
  • Untitled design 2025 06 25t073557.349
    ರಾಜ್ಯದಲ್ಲಿ 3-4 ದಿನ ಧಾರಾಕಾರ ಮಳೆ: ಈ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್
    June 25, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password? Sign Up

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version