ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮಾರ್ಚ್ 6ರಂದು ಹೆಸರಘಟ್ಟ ಸಮೀಪದ ಖಾಸಗಿ ರೆಸಾರ್ಟ್ನಲ್ಲಿ ತೇಜಸ್ವಿ ಸೂರ್ಯ ಮತ್ತು ಗಾಯಕಿ ಶಿವಶ್ರೀ ಸ್ಕಂದ ಪ್ರಸಾದ್ ಅವರು ಮದುವೆಯಾಗಿದ್ದರು. ಸಂಸದ ತೇಜಸ್ವಿ ಸೂರ್ಯ ಅವರ ಮದುವೆ ಶಾಸ್ತ್ರಗಳು ನಡೆಯುತ್ತಿರುವಾಗ ಗುರು, ಹಿರಿಯರು, ಬಂಧುಗಳು ಸ್ನೇಹಿತರು ನೆರೆದಿದ್ದರು. ಮದುವೆಗೆ ಎರಡು ಕುಟುಂಬದ ಸದಸ್ಯರು ಮತ್ತು ಅತ್ಯಾಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಆರತಕ್ಷತೆ ಕಾರ್ಯಕ್ರಮದಲ್ಲಿ ನಡೆದ ನಮ್ಮ ಸ್ವಾಗತ ಸಮಾರಂಭದಲ್ಲಿ ನಾವು ಅನುಭವಿಸಿದ ಅಗಾಧವಾದ ಪ್ರೇಮ ಮತ್ತು ಆಶೀರ್ವಾದಗಳು ಶಿವಶ್ರೀ ಸ್ಕಂದ ಪ್ರಸಾದ್ ಮತ್ತು ನನ್ನನ್ನು ಮುಗ್ಧರನ್ನಾಗಿ ಮಾಡಿವೆ. ನಾವು ಸಾಧ್ಯವಾದಷ್ಟು ಸಿದ್ಧತೆಗಳನ್ನು ಮಾಡಿದ್ದರೂ, ಬಂದ ಜನರ ಸಂಖ್ಯೆ ನಮ್ಮ ನಿರೀಕ್ಷೆಗಳನ್ನು ಮೀರಿತ್ತು. ಇದು ನಮ್ಮಗಿರುವ ಅಪಾರ ಪ್ರೀತಿಗೆ ಸಾಕ್ಷಿಯಾಗಿದೆ.
ಸಾಮಾಜಿಕ-ಆರ್ಥಿಕ ಹಿನ್ನೆಲೆ, ವಯೋಮಾನಗಳನ್ನು ಮೀರಿ, ಎಲ್ಲರೂ ನಮ್ಮನ್ನು ಆಶೀರ್ವದಿಸಲು ಬಂದಿದ್ದರು. ವಯಸ್ಸದವರು, ತಮ್ಮ ಮಕ್ಕಳನ್ನು ತಬ್ಬಿಕೊಂಡು ಬಂದ ಪೋಷಕರು, 95 ವರ್ಷದ ವೃದ್ಧರು ಎಲ್ಲರ ಆಗಮನದಿಂದ ನಮಗೆ ಗೌರವದಾಯಕ ಪ್ರೀತಿ ಆಶೀರ್ವಾದ ಸಿಕ್ಕಿದೆ. ಅನೇಕ ಜನರು ಎರಡು ಗಂಟೆಗಿಂತ ಹೆಚ್ಚು ಸಾಲಿನಲ್ಲಿ ನಿಲ್ಲುವ ಸಹನೆ ತೋರಿಸಿದರು. ಇನ್ನೂ ಕೆಲವರು ಮುಂಜಾನೆಯಿಂದ ಕಾಯುತ್ತಲೇ ಇದ್ದರು, ಇನ್ನೂ ಸ್ವಲ್ಪ ಜನರು ನಮ್ಮನ್ನು ಸ್ಥಳದಿಂದಲೇ ಆಶೀರ್ವದಿಸಿದರು, ಇದು ನನಗೆ ಹೃದಯ ತುಂಬಿದ ಕ್ಷಣವಾಗಿದೆ. ಅನಾನುಕೂಲತೆಗಾಗಿ ನಾವು ನಿಮ್ಮಲ್ಲಿ ಕ್ಷಮೆಯಾಚನೆ ಮಾಡುತ್ತೇನೆ.
ಸಮಾರಂಭದ ನಂತರ ನಾನು ಯೋಚಿಸಿದೆ, “ಈ ಪ್ರೀತಿಗೆ ನಾವೇನು ಮಾಡಿದ್ದೇವೆ? ಹೇಗೆ ತೀರಿಸಲಿ?” ಎಂದು ಯೋಚಿಸಿದರೆ, ಇದು ನಮ್ಮ ದೇಶ, ಸಂಸ್ಕೃತಿ ಮತ್ತು ಜನತೆಯ ಸೇವೆಗೆ ಸರ್ವಸ್ವವನ್ನು ಅರ್ಪಿಸುವುದು. ಶಿವಶ್ರೀ ಮತ್ತು ನಾನು ನಮ್ಮ ಕ್ಷೇತ್ರಗಳಲ್ಲಿ ಪರಿಶ್ರಮಿಸುತ್ತೆವೆ. ಈ ಮಹಾನ್ ರಾಷ್ಟ್ರದ ಪ್ರಗತಿಗೆ ಕೊಡುಗೆ ನೀಡಲು ಬದ್ಧರಾಗಿದ್ದೇವೆ.
ನಿಮ್ಮ ಸಹಾನುಭೂತಿ ಮತ್ತು ಪ್ರೋತ್ಸಾಹಕ್ಕೆ ಮತ್ತೊಮ್ಮೆ ನಮನ. ನಿಮ್ಮ ಪ್ರೀತಿಯೇ ನಮ್ಮ ಶಕ್ತಿ.