ಬಿಕ್ಲು ಶಿವ ಕೊಲೆ ಆರೋಪಿ ಬೈರತಿ ಬಸವರಾಜ್ ಮತ್ತೆ ಕಸ್ಟಡಿಗೋ? ಜೈಲಿಗೋ?

BeFunky collage 2026 02 21T090741.404

ರೌಡಿಶೀಟರ್ ಬಿಕ್ಲು ಶಿವ ಹತ್ಯೆ ಪ್ರಕರಣದಲ್ಲಿ 5ನೇ ಆರೋಪಿಯಾಗಿರುವ ಬಿಜೆಪಿ ಶಾಸಕ ಬೈರತಿ ಬಸವರಾಜ್ ಅವರ CID ಕಸ್ಟಡಿ ಅವಧಿ ಇಂದು ಮುಕ್ತಾಯವಾಗಲಿದೆ. ಸಿಐಡಿ ತಂಡ ಇಂದು ಶಾಸಕರನ್ನು ಕೋರ್ಟ್‌ಗೆ ಹಾಜರುಪಡಿಸಲಿದ್ದು, ವಿಚಾರಣೆಯ ನಂತರ ಮತ್ತೆ ಕಸ್ಟಡಿ ವಿಸ್ತರಣೆಗೆ ಕೇಳುವ ಸಾಧ್ಯತೆ ಇದೆ ಅಥವಾ ಜ್ಯೂಡಿಶಿಯಲ್ ಕಸ್ಟಡಿಗೆ ಕಳುಹಿಸುವ ಸಾಧ್ಯತೆ ಇದೆ.

ಕಳೆದ ಫೆಬ್ರವರಿ 15ರಂದು 42ನೇ ಎಸಿಜೆಎಂ ನ್ಯಾಯಾಲಯದ ನ್ಯಾಯಾಧೀಶರು ಬೈರತಿ ಬಸವರಾಜ್ ಅವರನ್ನು ಫೆಬ್ರವರಿ 21ರವರೆಗೆ 7 ದಿನಗಳ ಕಾಲ CID ಕಸ್ಟಡಿಗೆ ನೀಡಿದ್ದರು. ಜಯದೇವ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿ ಆರೋಗ್ಯ ಸರಿಯಿದ್ದ ನಂತರವೇ ಕಸ್ಟಡಿ ನೀಡಲಾಗಿತ್ತು. ಸಿಐಡಿ 9 ದಿನ ಕಸ್ಟಡಿ ಕೇಳಿದ್ದರೂ ನ್ಯಾಯಾಲಯ 7 ದಿನಗಳಿಗೆ ಮಿತಿಗೊಳಿಸಿತ್ತು.

ವಿಚಾರಣೆಯಲ್ಲಿ ಶಾಸಕರ ಸ್ಥಿತಿ :

ಪ್ರಕರಣದ ಹಿನ್ನೆಲೆ :

ಬೆಂಗಳೂರಿನ ಹಲಸೂರು ಕೆರೆ ಸಮೀಪ 2025ರ ಜುಲೈ 15ರಂದು ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಬಿಕ್ಲು ಶಿವನನ್ನು ಕೊಲೆ ಮಾಡಲಾಗಿತ್ತು. ಇದರಲ್ಲಿ ಒಟ್ಟು 20ಕ್ಕೂ ಹೆಚ್ಚು ಆರೋಪಿಗಳು ಬಂಧನಕ್ಕೊಳಗಾಗಿದ್ದಾರೆ. ಬೈರತಿ ಬಸವರಾಜ್ ಅವರನ್ನು ಸಂಚು ರೂಪಿಸಿದ ಆರೋಪಿಯಾಗಿ ಹೆಸರು ಕೇಳಿ ಬಂದಿದೆ. ಸುಪ್ರೀಂ ಕೋರ್ಟ್ ನಿರೀಕ್ಷಣಾ ಜಾಮೀನು ನಿರಾಕರಿಸಿದ ನಂತರ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು.

ಇಂದು ಕೋರ್ಟ್‌ನಲ್ಲಿ ಏನಾಗುತ್ತದೆ ಎಂಬುದು ಎಲ್ಲರ ಗಮನ ಸೆಳೆದಿದೆ. ಸಿಐಡಿ ಮತ್ತೆ ಕಸ್ಟಡಿ ವಿಸ್ತರಣೆ ಕೇಳಿದರೆ ಅಥವಾ ಜೈಲು ವಾಸ ಆರಂಭವಾದರೆ ರಾಜಕೀಯ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಲಿದೆ.

Exit mobile version