ಬೆಂಗಳೂರು ಕರಗಕ್ಕೆ ಹಣವನ್ನೇ ಬಿಡುಗಡೆ ಮಾಡದ ಬಿಬಿಎಂಪಿ!

Untitled design 2025 04 12t162009.578

ಬೆಂಗಳೂರು: ನಾಡಿನ ಹೆಮ್ಮೆಗೂ, ಸಂಸ್ಕೃತಿ ಶ್ರೇಷ್ಠತೆಯ ಪ್ರತಿರೂಪವಾಗಿರುವ ಬೆಂಗಳೂರು ಕರಗ ಉತ್ಸವ ಆರಂಭವಾಗಲು ಕ್ಷಣಗಣನೆ ಆರಂಭವಾಗಿದೆ. ಸಹಸ್ರಾರು ಭಕ್ತರ ನಡುವೆ ಇಂದು ರಾತ್ರಿ ಕರಗ ಉತ್ಸವದ ಮುಖ್ಯ ಘಟ್ಟ ಜರುಗಲಿದ್ದು, ಬೆಂಗಳೂರಿನ ಧರ್ಮರಾಯಸ್ವಾಮಿ ದೇವಾಲಯದ ಈಗಾಗಲೇ ಉತ್ಸವಮಯವಾಗಿದೆ. ಆದರೆ ಈ ಸಂಭ್ರಮದ ಕ್ಷಣದಲ್ಲಿ, ಬಿಬಿಎಂಪಿ ಮತ್ತು ಮುಜರಾಯಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದ ಚಳಿಗೆ ದೇವಾಲಯದ ಆಡಳಿತ ಮಂಡಳಿ ಆಕ್ರೋಶ ವ್ಯಕ್ತಪಡಿಸಿದೆ.

ಮೀಸಲಾದ ಬಜೆಟ್, ಬಿಡುಗಡೆ ಆಗದ ಅನುದಾನ

ಈ ವರ್ಷ ಕರಗ ಉತ್ಸವದ ಆಯೋಜನೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) 1.5 ಕೋಟಿ ರೂಪಾಯಿಯನ್ನು ತನ್ನ ಬಜೆಟ್‌ನಲ್ಲಿ ಮೀಸಲಿಟ್ಟು ಬಹಿರಂಗಪಡಿಸಿದ್ದರೂ, ಇದುವರೆಗೂ ಒಂದು ರೂಪಾಯಿಯೂ ಬಿಡುಗಡೆ ಮಾಡಿಲ್ಲ ಎಂಬುದು ದೇವಸ್ಥಾನ ಆಡಳಿತ ಮಂಡಳಿ ಆಕ್ರೋಶ ವ್ಯಕ್ತಪಡಿಸಿದೆ. ಧರ್ಮರಾಯಸ್ವಾಮಿ ದೇವಾಲಯದ ಅಧ್ಯಕ್ಷ ಸತೀಶ್ ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ, “ಬಜೆಟ್‌ನಲ್ಲಿ ಒಂದೂವರೆ ಕೋಟಿ ರೂಪಾಯಿಯನ್ನು ಮೀಸಲಾಗಿಸಿದೆ ಎಂದು ಹೇಳಲಾಗಿದೆ. ಆದರೆ ಇದುವರೆಗೆ ಒತ್ತಾಯಪಟ್ಟರೂ ಒಂದೇ ಒಂದು ರೂಪಾಯಿ ಬಂದಿಲ್ಲ. ನಾವು ಪೂಜಾರಿಗಳು, ಭಕ್ತರು ಸೇರಿ ನಮ್ಮ ಸ್ವಂತ ಹಣದಿಂದ ಜಾತ್ರೆ ನಡೆಸುತ್ತಿದ್ದೇವೆ” ಎಂದು ಹೇಳಿದ್ದಾರೆ.

ADVERTISEMENT
ADVERTISEMENT

ಅನುದಾನ ಬಿಡುಗಡೆಗೆ ಮುಜರಾಯಿ ಇಲಾಖೆ ಹಾಗೂ ಪಿಆರ್. ರಮೇಶ್ ಅವರ ಮುಖಾಂತರ ಅಡ್ಡಿ ಉಂಟಾಗಿದೆ ಎಂಬ ಆರೋಪವೂ ಮಂಡಳಿ ಮಾಡಿದೆ. “ ಉತ್ಸವದ ಒಂದು ವಾರ ಮುಂಚೆಯೇ ಕನಿಷ್ಠ 50 ಲಕ್ಷ ರೂಪಾಯಿಗಳನ್ನು ಅಡ್ವಾನ್ಸ್‌ ಆಗಿ ನೀಡಲಾಗುತ್ತಿತ್ತು. ಆದರೆ ಈ ಬಾರಿ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ. ಕರಗದ ಕೊನೆಯ ದಿನದವರೆಗೂ ಹಣ ಮಾಡಿಲ್ಲ ಎಂದು ಅವರು ಹೇಳಿದ್ದಾರೆ.

ಈ ವರ್ಷ ಕರಗೋತ್ಸವದ ಎಲ್ಲಾ ವೆಚ್ಚಗಳನ್ನು ದೇವಸ್ಥಾನ ನಿರ್ವಹಣಾ ಮಂಡಳಿ ಹಾಗೂ ಪೂಜಾರಿಗಳೇ ಭರಿಸುತ್ತಿದ್ದಾರೆ. 1000 ಕ್ಕೂ ಹೆಚ್ಚು ಹಾರಗಳ ಖರೀದಿ, ವಿದ್ಯುತ್ ಅಲಂಕಾರ, ಭದ್ರತೆ, ವ್ಯವಸ್ಥಾಪನೆ, ಸೇವಾ ಕಾರ್ಯಗಳು  ಈ ಎಲ್ಲವನ್ನೂ ಆರ್ಥಿಕ ನೆರವಿಲ್ಲದೆ ನಿರ್ವಹಿಸುತ್ತಿರುವುದು ಸಮಿತಿಗೆ ದೊಡ್ಡ ಭಾರವಾಗಿದೆ. “ಈ ಎಲ್ಲದಕ್ಕೂ ನಾವು ಹಣ ಹಾಕಿ ತಬ್ಬಿದರೂ, ಸರ್ಕಾರದವರು ಹಣ ಬಿಡುಗಡೆಗೆ ಸರ್ಕಾರ ರಜೆ ಇದೆ ಎಂದು ಹೇಳುತ್ತಿದ್ದಾರೆ,” ಎಂದು ಸದಸ್ಯರು ಆಕ್ರೋಶ ಹೊರಹಾಕಿದ್ದಾರೆ.

ಬೃಹತ್ ಸಾಂಸ್ಕೃತಿಕ, ಧಾರ್ಮಿಕ ಮತ್ತು ಸಾರ್ವಜನಿಕ ಪಾಲ್ಗೊಳ್ಳುವಿಕೆಯಿಂದ ಕೂಡಿರುವ ಕರಗ ಉತ್ಸವವು ನಾಡಿನ ಹೆಮ್ಮೆಯ ಆಚರಣೆ. ಬೆಂಗಳೂರಿನ ಒಗ್ಗಟ್ಟಿಗೆ ಹಾಗೂ ನಂಬಿಕೆಗೆ ಸಂಕೇತವಾಗಿರುವ ಈ ಉತ್ಸವವನ್ನು ಸರಕಾರ ಮತ್ತು ಬಿಬಿಎಂಪಿ ಕಡೆಗಣಿಸುತ್ತಿರುವುದು ಭಕ್ತರಲ್ಲಿ ಬೇಸರ ಮೂಡಿಸಿದೆ. ಅನುದಾನವಿಲ್ಲದೆ ಪೂಜಾರಿಗಳು, ಸಮಿತಿಯ ಸದಸ್ಯರು ತಮ್ಮದೇ ಹಣ ಖರ್ಚುಮಾಡಿ ಈ ಉತ್ಸವವನ್ನು ಯಶಸ್ವಿಯಾಗಿ ನಡೆಸುತ್ತಿದ್ದಾರೆ ಎಣದು ಹೇಳಲಾಗಿದೆ.

ಈಗಾಗಲೇ ಜಾತ್ರೆಗೆ ಎಂಟು ದಿನಗಳಾಗಿದ್ದು, ಇಂದು ದ್ರೌಪದಿ ದೇವಿಯ ಕರಗೋತ್ಸವದ ಅಂತಿಮ ಘಟ್ಟವಾಗಿದೆ. ಅಂತಹ ಮಹತ್ವದ ಕ್ಷಣದಲ್ಲೂ ಒಂದೇ ಒಂದು ರೂಪಾಯಿ ಸಹ ಬಿಡುಗಡೆ ಮಾಡದಿರುವ ಸರ್ಕಾರ ಹಾಗೂ ಬಿಬಿಎಂಪಿಯ ಈ ಉತ್ಸವನ್ನು ಕಡೆಗಣಿಸುತ್ತಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ತಕ್ಷಣವೇ ಅನುದಾನ ಬಿಡುಗಡೆ ಮಾಡಬೇಕೆಂದು ದೇವಸ್ಥಾನ ಮಂಡಳಿ ಹಾಗೂ ಭಕ್ತಸಮುದಾಯ ಸರ್ಕಾರಕ್ಕೆ ಒತ್ತಾಯಿಸಲಿದೆ.

Exit mobile version