ರಾಜ್ಯದಲ್ಲಿ ದಕ್ಷಿಣ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ

Untitled design 2025 04 15t074027.075

ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಹಾಗೂ ಕರಾವಳಿ ಕರ್ನಾಟಕದ ಹಲವೆಡೆ ಚಂಡಮಾರುತದ ಪರಿಣಾಮವಾಗಿ ಮಳೆಯಾಗುತ್ತಿದೆ. ಕಳೆದ ಕೆಲವು ದಿನಗಳಿಂದ ಮಂಜು ಮುಸುಕಿನ ವಾತಾವರಣದೊಂದಿಗೆ ಮಳೆಯಾಗುತ್ತಿರುವುದರಿಂದ ಬಿಸಿಲ ಬೇಗೆಯಿಂದ ಜನತೆಗೆ ತಾತ್ಕಾಲಿಕ ವಿಶ್ರಾಂತಿ ಸಿಕ್ಕಿದೆ.

ಬೆಂಗಳೂರು ನಗರದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಮೋಡ ಕವಿದ ವಾತಾವರಣವಿದ್ದು, ಅಲ್ಲಲ್ಲಿ ಮಳೆಯಾಗಿದೆ. ಬನಶಂಕರಿ, ಜೆಪಿನಗರ, ಮೆಜೆಸ್ಟಿಕ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಸೋಮವಾರ ಮಳೆಯಾಗಿದೆ. ಇಂದು ಕೂಡ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ.

ADVERTISEMENT
ADVERTISEMENT
ಮಳೆಯಾಗಲಿರುವ ಜಿಲ್ಲೆಗಳು

ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಹಾವೇರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರ ಜಿಲ್ಲೆಗಳಲ್ಲಿ ಇನ್ನು ಮುಂದಿನ ದಿನಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ.

ಒಣಹವೆಯಿಂದ ಕಂಗಾಲಾದ ಉತ್ತರ ಒಳನಾಡು:
ಇತ್ತ ಉತ್ತರ ಕರ್ನಾಟಕದ ಯಾದಗಿರಿ, ವಿಜಯಪುರ, ರಾಯಚೂರು, ಗದಗ, ಧಾರವಾಡ, ಬೀದರ್, ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳಲ್ಲಿ ಇನ್ನೂ ಒಣಹವೆಯೇ ಮುಂದುವರೆದಿದೆ. ಕೆಲವೊಂದು ಕಡೆಗಳಲ್ಲಿ ಉಷ್ಣತೆ ಅಪಾರವಾಗಿ ಹೆಚ್ಚಿದ್ದು, ತೀವ್ರ ಬಿಸಿಲಿನಿಂದ ಜನತೆ ಹೈರಾಣಾಗಿದ್ದಾರೆ.

ರಾಜ್ಯದ ತಾಪಮಾನ ವಿವರಗಳು

ಕಲಬುರಗಿ: ಗರಿಷ್ಠ 40.6 ಡಿಗ್ರಿ ಸೆಲ್ಸಿಯಸ್, ಕನಿಷ್ಠ 24.3 ಡಿಗ್ರಿ, ಬೀದರ್: ಗರಿಷ್ಠ 37.6 ಡಿಗ್ರಿ, ಕನಿಷ್ಠ 20.8 ಡಿಗ್ರಿ, ವಿಜಯಪುರ: ಗರಿಷ್ಠ 38.0 ಡಿಗ್ರಿ, ಕನಿಷ್ಠ 24.0 ಡಿಗ್ರಿ, ಬಾಗಲಕೋಟೆ: ಗರಿಷ್ಠ 36.4 ಡಿಗ್ರಿ, ಕನಿಷ್ಠ 22.8 ಡಿಗ್ರಿ, ಧಾರವಾಡ: ಗರಿಷ್ಠ 36.0 ಡಿಗ್ರಿ, ಕನಿಷ್ಠ 20.6 ಡಿಗ್ರಿ, ಗದಗ: ಗರಿಷ್ಠ 36.4 ಡಿಗ್ರಿ, ಕನಿಷ್ಠ 22.0 ಡಿಗ್ರಿ, ಹಾವೇರಿ: ಗರಿಷ್ಠ 34.6 ಡಿಗ್ರಿ, ಕನಿಷ್ಠ 20.4 ಡಿಗ್ರಿ, ಕೊಪ್ಪಳ: ಗರಿಷ್ಠ 35.8 ಡಿಗ್ರಿ, ಕನಿಷ್ಠ 23.8 ಡಿಗ್ರಿ, ರಾಯಚೂರು: ಗರಿಷ್ಠ 38.6 ಡಿಗ್ರಿ, ಕನಿಷ್ಠ 24.2 ಡಿಗ್ರಿ ತಾಪಮಾನ ದಾಖಲಾಗಿದೆ.

ಬೆಂಗಳೂರು ಹವಾಮಾನ ಸ್ಥಿತಿ

ಎಚ್‌ಎಎಲ್: ಗರಿಷ್ಠ 33.9 ಡಿಗ್ರಿ, ಕನಿಷ್ಠ 20.0 ಡಿಗ್ರಿ, ನಗರ ಕೇಂದ್ರ: ಗರಿಷ್ಠ 33.6 ಡಿಗ್ರಿ, ಕನಿಷ್ಠ 21.9 ಡಿಗ್ರಿ, ಕೆಐಎಎಲ್: ಗರಿಷ್ಠ 34.3 ಡಿಗ್ರಿ, ಕನಿಷ್ಠ 22.4 ಡಿಗ್ರಿ, ಜಿಕೆವಿಕೆ: ಗರಿಷ್ಠ 34.0 ಡಿಗ್ರಿ, ಕನಿಷ್ಠ 19.8 ಡಿಗ್ರಿ ತಾಪಮಾನ ಇದೆ. ಬೇರೆ ಕಡೆಗಳಿಗಿಂತ ಹಾಲಿನ ನಗರದ ಹವಾಮಾನ ಸ್ವಲ್ಪ ಮಿತವಾಗಿದ್ದು, ಗಾಳಿಯ ವೇಗವೂ ಗಂಟೆಗೆ 30-40 ಕಿ.ಮೀ ಆಗಬಹುದು ಎಂದು ನಿರೀಕ್ಷಿಸಲಾಗಿದೆ.

ಕರಾವಳಿ ಜಿಲ್ಲೆಗಳ ತಾಪಮಾನ

ಹೊನ್ನಾವರ: ಗರಿಷ್ಠ 33.4 ಡಿಗ್ರಿ, ಕನಿಷ್ಠ 24.9 ಡಿಗ್ರಿ, ಕಾರವಾರ: ಗರಿಷ್ಠ 35.7 ಡಿಗ್ರಿ, ಕನಿಷ್ಠ 25.6 ಡಿಗ್ರಿ, ಪಣಂಬೂರು: ಗರಿಷ್ಠ 33.6 ಡಿಗ್ರಿ, ಕನಿಷ್ಠ 25.9 ಡಿಗ್ರಿ ತಾಪಮಾನವಿದೆ.

ಕರ್ನಾಟಕದ ಬಹುತೇಕ ದಕ್ಷಿಣ ಭಾಗಗಳು ಮಳೆಯ ಆವರಣದಲ್ಲಿದ್ದು, ಬಿಸಿಲಿನಿಂದ ಕಂಗೆಟ್ಟಿದ್ದ ಜನಕ್ಕೆ ಮುಕ್ತಿ ಸಿಕ್ಕಿದೆ.  ಆದರೆ ಉತ್ತರ ಭಾಗಗಳಲ್ಲಿ ಬಿಸಿಲು ತನ್ನ ಅಬ್ಬರವನ್ನು ಮುಂದುವರಿಸಿಕೊಂಡಿದ್ದು, ಜನತೆಗೆ ತೀವ್ರ ತಾಪದಿಂದಾಗಿ ತೊಂದರೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಕೆಲ ಜಿಲ್ಲೆಗಳಲ್ಲಿ ತಾತ್ಕಾಲಿಕ ತಂಪುಂಟಾಗುವ ನಿರೀಕ್ಷೆಯಿದೆ.

ಹವಾಮಾನ ತಜ್ಞರು ಮಳೆ ಇನ್ನೂ ಕೆಲ ದಿನಗಳು ಮುಂದುವರಿಯಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಜನತೆ ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು.

Exit mobile version