ಮಾಂಸ ವ್ಯಾಪಾರಿಗಳಿಗೆ ಬಿಗ್ ಶಾಕ್! ಮಹಾಶಿವರಾತ್ರಿ ಹಿನ್ನೆಲೆ ಭಾನುವಾರ ಮಾಂಸ ಮಾರಾಟ ನಿಷೇಧ

Untitled design 2026 02 13T092239.922

ಬೆಂಗಳೂರು: ನಾಡಿನಾದ್ಯಂತ ಸಂಭ್ರಮದಿಂದ ಆಚರಿಸಲಾಗುವ ಮಹಾಶಿವರಾತ್ರಿ ಹಬ್ಬಕ್ಕೆ ರಾಜಧಾನಿ ಬೆಂಗಳೂರು ಸಜ್ಜಾಗುತ್ತಿದೆ. ಈ ಹಬ್ಬದ ಹಿನ್ನೆಲೆಯಲ್ಲಿ ನಗರದಾದ್ಯಂತ ಶಾಂತಿ ಮತ್ತು ಸಾತ್ವಿಕ ವಾತಾವರಣವನ್ನು ಕಾಪಾಡುವ ನಿಟ್ಟಿನಲ್ಲಿ ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ’ (ಬಿಬಿಎಂಪಿ) ಮಹತ್ವದ ಆದೇಶವೊಂದನ್ನು ಹೊರಡಿಸಿದೆ.

ಮಾಂಸ ಪ್ರಿಯರಿಗೆ ಬಿಗ್ ಶಾಕ್ !

ಬರುವ ಫೆಬ್ರವರಿ 15, 2026ರ ಭಾನುವಾರದಂದು ಮಹಾಶಿವರಾತ್ರಿ ಆಚರಣೆ ಇರುವುದರಿಂದ, ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಪ್ರಾಣಿವಧೆ ಮತ್ತು ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಸಾಮಾನ್ಯವಾಗಿ ಭಾನುವಾರ ರಜೆ ದಿನವಾದ್ದರಿಂದ ಮಾಂಸ ಪ್ರಿಯರು ಮಾರುಕಟ್ಟೆಗೆ ಲಗ್ಗೆ ಇಡುವುದು ಸಹಜ. ಆದರೆ, ಈ ಬಾರಿ ಹಬ್ಬದ ದಿನವೇ ಭಾನುವಾರ ಬಂದಿರುವುದರಿಂದ ಮಾಂಸ ಮಾರಾಟಕ್ಕೆ ಬ್ರೇಕ್ ಬಿದ್ದಿದೆ.

ಪಾಲಿಕೆಯ ಸುತ್ತೋಲೆಯಲ್ಲಿ ಏನಿದೆ ?

ಪ್ರಾಧಿಕಾರದ ಮುಖ್ಯ ಆಯುಕ್ತರು ಹೊರಡಿಸಿರುವ ಅಧಿಕೃತ ಸುತ್ತೋಲೆಯ (ಸಂಖ್ಯೆ. ಮುಳಿ 22:328:2025-26) ಅನ್ವಯ, ಈ ಕೆಳಗಿನ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಲಾಗಿದೆ:

ಮಹಾಶಿವರಾತ್ರಿಯು ಆಧ್ಯಾತ್ಮಿಕ ಮತ್ತು ಪವಿತ್ರವಾದ ಹಬ್ಬವಾಗಿದ್ದು, ಬಹುತೇಕ ಜನರು ಈ ದಿನ ಉಪವಾಸ ಮತ್ತು ಜಾಗರಣೆ ಮಾಡುತ್ತಾರೆ. ಈ ಧಾರ್ಮಿಕ ಭಾವನೆಗಳಿಗೆ ಗೌರವ ನೀಡುವ ದೃಷ್ಟಿಯಿಂದ ಪಾಲಿಕೆಯು ಪ್ರತಿ ವರ್ಷವೂ ಇಂತಹ ಕ್ರಮಗಳನ್ನು ಕೈಗೊಳ್ಳುತ್ತದೆ. ಸಾರ್ವಜನಿಕರು ಮತ್ತು ವ್ಯಾಪಾರಸ್ಥರು ನಗರದ ಶುಚಿತ್ವ ಮತ್ತು ಹಬ್ಬದ ಪವಿತ್ರತೆಯನ್ನು ಕಾಪಾಡಲು ಪಾಲಿಕೆಯೊಂದಿಗೆ ಸಹಕರಿಸಬೇಕು ಎಂದು ಬಿಬಿಎಂಪಿ ಆಯುಕ್ತರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ. ಆದ್ದರಿಂದ, ನಾಗರಿಕರು ಭಾನುವಾರ ಮಾಂಸಕ್ಕಾಗಿ ಮಾರುಕಟ್ಟೆಗೆ ತೆರಳುವ ಮುನ್ನ ಈ ಆದೇಶವನ್ನು ಗಮನದಲ್ಲಿಟ್ಟುಕೊಳ್ಳುವುದು ಒಳಿತು.

Exit mobile version