18 ಬಿಜೆಪಿ ಶಾಸಕರು 6 ತಿಂಗಳ ಕಾಲ ಸಸ್ಪೆಂಡ್‌‌‌! ಖಾದರ್ ಖದರ್..!

ಬಿಜೆಪಿ ಶಾಸಕರನ್ನು ಸದನದಿಂದ ಎತ್ತಿಕೊಂಡು ಹೊರಕ್ಕೆ ಹಾಕಿದ ಮಾರ್ಷಲ್ಸ್!

Karnataka assembly

ಕರ್ನಾಟಕ ವಿಧಾನಸಭೆಯಲ್ಲಿ ಗದ್ದಲ ಕೋಲಾಹಲಕ್ಕೆ ಕಾರಣವಾಗಿ ಸದನದ ಗೌರವಕ್ಕೆ ಧಕ್ಕೆ ತಂದಂತ ಬಿಜೆಪಿಯ 18 ಸದಸ್ಯರರುಗಳನ್ನು 6 ತಿಂಗಳ ಕಾಲ ಅಮಾನತುಗೊಳಿಸಿ ಸ್ಪೀಕರ್‌ ಯು.ಟಿ ಖಾದರ್‌. ಇಂದು ಮಧ್ಯಾಹ್ನದ ಭೋಜನ ವಿರಾಮದ ನಂತರ ನಡೆದ ಕಲಾಪ ಆರಂಭಗೊಳ್ಳುತ್ತಿದ್ದಂತೆ ಮುಸ್ಲಿಂ ಮೀಸಲಾತಿ ಮಸೂದೆ ಸೇರಿದಂತೆ ವಿವಿಧ ಮಸೂದೆ ವಿರೋಧಿಸಿದ ಬಿಜೆಪಿಯ ಶಾಸಕರ ಪ್ರತಿಭಟನೆ, ಗದ್ದಲ ಕೋಲಾಹಲವನ್ನು ಉಂಟು ಮಾಡಿದರು.

ಸ್ಪೀಕರ್​ ಯುಟಿ ಖಾದರ್ ಅವರು ಸದನದಲ್ಲಿಅಮಾನತುಗೊಳಿಸಿದವರನ್ನು ಹೆಸರು ಹೇಳುತ್ತಿದ್ದಂತೆಯೇ ಮಾರ್ಷಲ್ಸ್, ಒಬ್ಬೊಬ್ಬರನ್ನೇ ಎತ್ತಿಕೊಂಡು ಬಂದು ಹೊರಹಾಕಿದರು.

ADVERTISEMENT
ADVERTISEMENT

ಬಿಜೆಪಿ 18 ಸದಸ್ಯರು ಸಸ್ಪೆಂಡ್‌‌‌

1-ದೊಡ್ಡಣ್ಣ ಗೌಡ ಪಾಟೀಲ್, 2-ಸಿ ಕೆ ರಾಮಮೂರ್ತಿ, 3-ಅಶ್ವತ್ಥ ನಾರಾಯಣ, 4-ಎಸ್ ಆರ್ ವಿಶ್ವನಾಥ್, 5 -ಬೈರತಿ ಬಸವರಾಜ, 6-ಎಂ ಆರ್ ಪಾಟೀಲ್, 7-ಚನ್ನಬಸಪ್ಪ, 8-ಬಿ ಸುರೇಶ್ ಗೌಡ, 9-ಉಮನಾಥ್ ಕೋಟ್ಯಾನ್ 10-ಶರಣು ಸಲಗಾರ್, 11-ಶೈಲೇಂದ್ರ ಬೆಲ್ದಾಳೆ, 12-ಯಶಪಾಲ್ ಸುವರ್ಣ, 13-ಹರೀಶ್ ಬಿಪಿ, 14-ಡಾ. ಭರತ್ ಶೆಟ್ಟಿ, 15-ಮುನಿರತ್ನ, 16-ಬಸವರಾಜ ಮತ್ತಿಮೋಡ್, 17-ಧೀರಜ್ ಮುನಿರಾಜು, 18-ಡಾ ಚಂದ್ರು ಲಮಾಣಿ ಅವರನ್ನು ವಿಧಾನಸಭೆ ಕಲಾಪದಿಂದ ಆರು ತಿಂಗಳುಗಳ ಕಾಲ ಅಮಾನತು ಮಾಡಿ ಸ್ಪೀಕರ್ ಯುಟಿ ಖಾದರ್ ರೂಲಿಂಗ್ ಹೊರಡಿಸಿದ್ದಾರೆ.

ಕೈಕಾಲು ಹಿಡ್ದು ಮುನಿರತ್ನನನ್ನ ಹೊರಹಾಕಿದ ಮಾರ್ಷಲ್ಸ್​

ಬಿಜೆಪಿ 18 ಶಾಸಕರನ್ನು ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯುಟಿ ಖಾದರ್ ಅವರು 6 ತಿಂಗಳ ಕಾಲ ಅಮಾನತುಗೊಳಿಸಿದ್ದಾರೆ. ಸಭೆಯಲ್ಲಿ ಭಾರೀ ಗದ್ದಲವನ್ನು ಸೃಷ್ಟಿಸಿ, ಸ್ಪೀಕರ್ ಪೀಠಕ್ಕೆ ಅಗೌರವ ತೋರಿದ ಆರೋಪದ ಮೇಲೆ ಈ ಕ್ರಮ ತೆಗೆದುಕೊಳ್ಳಲಾಗಿದೆ. 

ಹನಿಟ್ರ್ಯಾಪ್‌ ಪ್ರಕರಣದ ತನಿಖೆಯನ್ನು ಹಾಲಿ ಹೈಕೋರ್ಟ್‌ ನ್ಯಾಯಾಧೀಶರಿಂದ ತನಿಖೆ ನಡೆಸಬೇಕೆಂದು ಆಗ್ರಹಿಸಿ ವಿಪಕ್ಷಗಳ ಸದಸ್ಯರಿಂದು ವಿಧಾನಸಭೆಯ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಈ ವೇಳೆ ಸ್ಪೀಕರ್‌ ಖಾದರ್‌ ಮೇಲೆ ಪೇಪರ್‌ ಎಸೆದು ಸಿಟ್ಟು ಹೊರ ಹಾಕಿದರು. 

ಬಿಜೆಪಿ 18 ಶಾಸಕರನ್ನು 6 ತಿಂಗಳ ಕಾಲ ಸಸ್ಪೆಂಡ್‌ ಮಾಡಿ ಸ್ಪೀಕರ್‌ ರೂಲಿಂಗ್‌ ಹೊರಡಿಸಿದರು. ಬಳಿಕ ಮಾರ್ಷಲ್ಸ್ ಮುನಿರತ್ನರನ್ನು ಸೇರಿ​​, ಒಬ್ಬೊಬ್ಬರನ್ನೇ ಎತ್ತಿಕೊಂಡು ಹೋಗಿ ಆಚೆ ಹಾಕಿದರು.

 

 

 

 

Exit mobile version