ಭಾರತದ ದಾಳಿಗೆ ಪಾಕ್‌ ತತ್ತರ: ಇಸ್ಲಾಮಾಬಾದ್‌ನಲ್ಲಿ ಮೊಳಗಿದ ಸೈರನ್‌!

Untitled design (72)
ADVERTISEMENT
ADVERTISEMENT

ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತದಲ್ಲಿ ಪಾಕಿಸ್ತಾನದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಭಾರತಕ್ಕೆ ಅನ್ಯಾಯ ಮಾಡಿದ ಉಗ್ರರಿಗೆ ತಕ್ಕ ಶಿಕ್ಷೆ ನೀಡಬೇಕು ಎಂದು ಇಡೀ ಭಾರತವೇ  ಆಗ್ರಹಿಸಿತು. ಈ ಹಿನ್ನೆಲೆಯಲ್ಲಿ ಭಾರತ ಸರ್ಕಾರವು ಆಪರೇಷನ್‌ ಸಿಂಧೂರ ಎಂಬ ಬೃಹತ್‌ ಕಾರ್ಯಾಚರಣೆಯನ್ನು ಆರಂಭಿಸಿತ್ತು. ಮೇ 6-7ರಂದು ನಡೆದ ಈ ಕಾರ್ಯಾಚರಣೆಯಲ್ಲಿ ಪಾಕಿಸ್ತಾನ ಮತ್ತು ಪಾಕ್‌ ಆಕ್ರಮಿತ ಕಾಶ್ಮೀರದ (PoK) 9 ಉಗ್ರರ ನೆಲೆಗಳನ್ನು ಧ್ವಂಸಗೊಳಿಸಲಾಯಿತ್ತು. ಈ ದಾಳಿಯಲ್ಲಿ ಸುಮಾರು 100 ಉಗ್ರರು ಹತರಾದರು ಎಂದು ಸರ್ವಪಕ್ಷ ಸಭೆಯ ನಂತರ ಭಾರತ ಸರ್ಕಾರ ಅಧಿಕೃತವಾಗಿ ತಿಳಿಸಿತ್ತು.

ಭಾರತೀಯ ರಕ್ಷಣಾ ಇಲಾಖೆಯು ಈ ಕಾರ್ಯಾಚರಣೆ ಇನ್ನೂ ಮುಂದುವರಿಯುತ್ತದೆ ಎಂದು ಘೋಷಿಸಿದ ಕೆಲವೇ ಗಂಟೆಗಳಲ್ಲಿ, ಪಾಕಿಸ್ತಾನದ 12 ಸೇನಾ ನೆಲೆಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಲಾಯಿತು. ಈ ದಾಳಿಗಳು ಲಾಹೋರ್‌ನಲ್ಲಿ ಕೇಂದ್ರೀಕೃತವಾಗಿದ್ದು, ಪಾಕ್‌ ಸೇನೆಯ ಕ್ಷಿಪಣಿಗಳನ್ನು ಭಾರತದ ಸುದರ್ಶನ ಚಕ್ರ ಮತ್ತು ಎಸ್‌-400 ಕ್ಷಿಪಣಿ ರಕ್ಷಣಾ ವ್ಯವಸ್ಥೆಯ ಮೂಲಕ ಸಂಪೂರ್ಣವಾಗಿ ನಾಶಪಡಿಸಲಾಯಿತ್ತು.

ಈ ಘಟನೆಯ ಬೆನ್ನಲ್ಲೇ, ಭಾರತೀಯ ಸೇನೆಯು ಲಾಹೋರ್‌ನಲ್ಲಿ ಮತ್ತೊಂದು ದಾಳಿಯನ್ನು ಆರಂಭಿಸಿತು. ಈ ಬಾರಿ ಪಾಕಿಸ್ತಾನ ಸೇನೆಯ ಪ್ರಧಾನ ಕಚೇರಿಯ ಮೇಲೆಯೇ ಗುರಿಯಿಟ್ಟು ದಾಳಿ ನಡೆಸಲಾಯಿತು. ಲಾಹೋರ್‌ನ ಆಕಾಶದಲ್ಲಿ ಭಾರತೀಯ ಡ್ರೋನ್‌ಗಳ ಸುರಿಮಳೆಯೇ ಆರಂಭವಾಯಿತ್ತು. ಈ ದಾಳಿಯಿಂದ ಪಾಕಿಸ್ತಾನದ ವಾಯು ರಕ್ಷಣಾ ವ್ಯವಸ್ಥೆಗೆ (ಏರ್‌ ಡಿಫೆನ್ಸ್‌ ಸಿಸ್ಟಮ್‌) ಭಾರೀ ಹಾನಿಯಾಯಿತು. ಈ ಘಟನೆಯಿಂದ ತತ್ತರಿಸಿಹೋದ ಪಾಕಿಸ್ತಾನ ಸರ್ಕಾರವು ತನ್ನ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಮುನ್ನೆಚ್ಚರಿಕೆಯ ಸೈರನ್‌ ಮೊಳಗಿಸಿತು.

ಪಾಕಿಸ್ತಾನದ ಜನತೆಗೆ ಸರ್ಕಾರವು ತುರ್ತು ಸೂಚನೆಯೊಂದನ್ನು ನೀಡಿದೆ. “ಯಾರೂ ಮನೆಯಿಂದ ಹೊರಬರಬೇಡಿ, ಮನೆಯಲ್ಲಿ ದೀಪಗಳನ್ನು ಆನ್‌ ಮಾಡಬೇಡಿ” ಎಂದು ಸ್ಪಷ್ಟ ಎಚ್ಚರಿಕೆ ನೀಡಲಾಗಿದೆ. ಇಸ್ಲಾಮಾಬಾದ್‌ನಲ್ಲಿ ಸೈರನ್‌ ಮೊಳಗುತ್ತಿದ್ದು, ಜನರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಭಾರತದ ಈ ದಾಳಿಗಳಿಂದ ಪಾಕಿಸ್ತಾನದ ಸೇನಾ ಸಾಮರ್ಥ್ಯಕ್ಕೆ ದೊಡ್ಡ ಏಟು ಬಿದ್ದಿದೆ. ಭಾರತೀಯ ಸೇನೆಯ ಈ ಕಾರ್ಯಾಚರಣೆಯು ಗಡಿಯಾಚೆಗಿನ ಭಯೋತ್ಪಾದನೆಗೆ ತಕ್ಕ ಉತ್ತರವನ್ನು ನೀಡಿದಂತಿದೆ.

ಈ ದಾಳಿಗಳು ಕೇವಲ ಸೇನಾ ನೆಲೆಗಳಿಗೆ ಸೀಮಿತವಾಗಿಲ್ಲ. ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಗಳಿಗೆ ಬೆಂಬಲ ನೀಡುವ ಎಲ್ಲ ಸೌಲಭ್ಯಗಳನ್ನು ಗುರಿಯಾಗಿಸಲಾಗಿದೆ. ಭಾರತದ ಈ ಕಾರ್ಯಾಚರಣೆಯು ರಾಷ್ಟ್ರೀಯ ಭದ್ರತೆಗೆ ಎಷ್ಟು ಬದ್ಧವಾಗಿದೆ ಎಂಬುದನ್ನು ಜಗತ್ತಿಗೆ ತೋರಿಸಿದೆ. ಆಪರೇಷನ್‌ ಸಿಂಧೂರದ ಯಶಸ್ಸಿನಿಂದ ಪಾಕಿಸ್ತಾನದ ಸೇನಾ ಶಕ್ತಿಯ ಆಧಾರವೇ ಕದಡಿದಂತಾಗಿದೆ.

Exit mobile version