ಭಾರತದಿಂದ ದಾಳಿ ಭೀತಿ, ಅಲ್ಲಾಹನೇ ಈ ಯುದ್ಧವನ್ನು ನಿಲ್ಲಿಸಬೇಕು: ಪಾಕಿಸ್ತಾನ ರಕ್ಷಣಾ ಸಚಿವ

Film 2025 05 01t103542.929

ಪಾಕಿಸ್ತಾನ ರಕ್ಷಣಾ ಸಚಿವ ಖ್ವಾಜಾ ಆಸೀಫ್ ಅವರು ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಕುರಿತು ತೀವ್ರ ಆತಂಕ ವ್ಯಕ್ತಪಡಿಸಿದ್ದು, ಸಂಘರ್ಷದ ಸಾಧ್ಯತೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ ಎಂದು ಹೇಳಿದ್ದಾರೆ. “ಅಲ್ಲಾಹನೇ ಈ ಯುದ್ಧವನ್ನು ನಿಲ್ಲಿಸಬೇಕು” ಎಂಬ ಆಶಯವನ್ನೂ ಅವರು ವ್ಯಕ್ತಪಡಿಸಿದ್ದಾರೆ.

ಅವರು ತಿಳಿಸಿದಂತೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ದೇಶಗಳು ಭಾರತ–ಪಾಕಿಸ್ತಾನ ನಡುವಿನ ಉದ್ವಿಗ್ನತೆಯನ್ನು ಶಮನಗೊಳಿಸಲು ಪ್ರಯತ್ನಿಸುತ್ತಿರುವರೂ, ಕಾಲ ಕ್ರಮೇಣ ಪರಿಸ್ಥಿತಿ ಗಂಭೀರವಾಗುತ್ತಿದೆ. ಇತ್ತೀಚಿನ ಭದ್ರತಾ ಬೆಳವಣಿಗೆಗಳನ್ನು ಗಮನದಲ್ಲಿಟ್ಟಾಗ, ಸಂಘರ್ಷ ಸಾಧ್ಯತೆ ಕಡಿಮೆಯಾಗುವ ಬದಲು ಹೆಚ್ಚುತ್ತಿದೆ ಎಂದು ಅವರು ಎಚ್ಚರಿಸಿದರು.

“ಭಾರತದಿಂದ ಯಾವುದೇ ಉಲ್ಲಂಘನೆ ಅಥವಾ ದಾಳಿ ನಡೆದರೆ, ಪಾಕಿಸ್ತಾನ ಅದರ ವಿರುದ್ಧ ಸೂಕ್ತ ಮತ್ತು ತೀವ್ರ ಪ್ರತಿಕ್ರಿಯೆ ನೀಡಲಿದೆ. ನಾವು ಹೇಗೆ ಪ್ರತಿಕ್ರಿಯಿಸೋದು ಎಂಬುದು ಭಾರತದ ನಡೆ ಮೇಲೆ ಅವಲಂಬಿತವಾಗಿರುತ್ತದೆ. ನಾವು ಯಾವುದೇ ಸಂದೇಹವಿಲ್ಲದಂತೆ ಉತ್ತರ ನೀಡುತ್ತೇವೆ” ಎಂದು ಖ್ವಾಜಾ ಆಸೀಫ್ ಹೇಳಿದ್ದಾರೆ.

ಅವರು ಮುಂದಾಗಿ, “ಪಾಕಿಸ್ತಾನದ ಪ್ರತಿಕ್ರಿಯೆಯ ಪ್ರಮಾಣವನ್ನು ನಾನು ಊಹಿಸಲು ಬಯಸುವುದಿಲ್ಲ. ಆದರೆ ಅದು ಭಾರತ ತೆಗೆದುಕೊಳ್ಳುವ ಕ್ರಮಕ್ಕಿಂತ ಉಗ್ರವಾಗಿರಬಹುದು” ಎಂದು ಸವಾಲು ಎಸೆದಿದ್ದಾರೆ.

Exit mobile version