ಹಾರ್ಮುಜ್ ಜಲಸಂಧಿಯಲ್ಲಿ ಭಾರತೀಯ ಹಡಗಿನ ಮೇಲೆ ಕ್ಷಿಪಣಿ ದಾಳಿ!

ದಾಳಿ

ನವದೆಹಲಿ: ಹಾರ್ಮುಜ್ ಜಲಸಂಧಿಯ ಸಮೀಪ ಭಾರತೀಯ ಧ್ವಜ ಹೊತ್ತ ವಾಣಿಜ್ಯ ಹಡಗುಗಳ ಮೇಲೆ ಕ್ಷಿಪಣಿ ಮತ್ತು ಗುಂಡಿನ ದಾಳಿ ನಡೆದಿದೆ. ಇರಾನ್-ಅಮೆರಿಕಾ ಉದ್ವಿಗ್ನತೆಯ ನಡುವೆ ಸಂಭವಿಸಿದ ಈ ಘಟನೆಯು ಜಾಗತಿಕ ತೈಲ ಸಾಗಾಟ ಮಾರ್ಗಕ್ಕೆ ತೀವ್ರ ಬೆದರಿಕೆಯಾಗಿದೆ.

ಭಾರತದ ವಿದೇಶಾಂಗ ಸಚಿವಾಲಯ (MEA) ಈ ದಾಳಿಯನ್ನು ತೀವ್ರವಾಗಿ ಖಂಡಿಸಿದೆ. ಎರಡು ಭಾರತೀಯ ಧ್ವಜ ಹೊತ್ತ ಹಡಗುಗಳು ಸನ್‌ಮಾರ್ ಹೆರಾಲ್ಡ್ ಹಡಗು ಹಾರ್ಮುಜ್ ಜಲಸಂಧಿ ದಾಟುವಾಗ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕೋರ್ಪ್ಸ್ (IRGC) ನೌಕಾಪಡೆಯಿಂದ ದಾಳಿಗೆ ಒಳಗಾಗಿವೆ ಎಂದು ವರದಿಯಾಗಿದೆ.

ಹಡಗುಗಳು ಒಮಾನ್ ಕರಾವಳಿಯ ಸಮೀಪವಿದ್ದಾಗ ದಾಳಿ ನಡೆದಿದೆ. ಇರಾನ್ ಪಡೆಗಳು ಮುನ್ನೆಚ್ಚರಿಕೆಯಿಲ್ಲದೆ ಗುಂಡು ಹಾರಿಸಿದ್ದು, ಕೆಲವು ವರದಿಗಳ ಪ್ರಕಾರ ಕ್ಷಿಪಣಿ ದಾಳಿಯೂ ನಡೆದಿದೆ. ಆದರೆ ಎರಡೂ ಹಡಗುಗಳಲ್ಲಿದ್ದ ಭಾರತೀಯ ನಾವಿಕರು ಸುರಕ್ಷಿತರಾಗಿದ್ದಾರೆ ಎಂದು ಭಾರತ ಸರ್ಕಾರ ದೃಢಪಡಿಸಿದೆ. ಹಡಗುಗಳು ತಮ್ಮ ಪಯಣವನ್ನು ನಿಲ್ಲಿಸಿ ವಾಪಸ್ ತಿರುಗಿವೆ.

ಭಾರತವು ಇರಾನ್ ರಾಯಭಾರಿಯನ್ನು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರಿಗೆ ಮಾಹಿತಿ ತಿಳಿಸಿವೆ. “ಈ ರೀತಿಯ ದಾಳಿಗಳು ಅಂತರರಾಷ್ಟ್ರೀಯ ನೌಕಾ ಸುರಕ್ಷತೆಗೆ ತೀವ್ರ ಬೆದರಿಕೆ” ಎಂದು ಭಾರತ ಹೇಳಿದೆ.

ಇರಾನ್ ಮತ್ತು ಅಮೆರಿಕಾ ನಡುವಿನ ಉದ್ವಿಗ್ನತೆ ಹೆಚ್ಚಾದ ನಂತರ ಹಾರ್ಮುಜ್ ಜಲಸಂಧಿಯಲ್ಲಿ ತೀವ್ರ ಅಸ್ಥಿರತೆ ಉಂಟಾಗಿದೆ. ಜಗತ್ತಿನ ತೈಲ ಸಾಗಾಟದ 20% ಈ ಜಲಸಂಧಿಯ ಮೂಲಕ ನಡೆಯುತ್ತದೆ. ಇರಾನ್ ತನ್ನ ನಿಯಂತ್ರಣವನ್ನು ಬಿಗಿಗೊಳಿಸುತ್ತಿರುವುದು ಜಾಗತಿಕ ತೈಲ ಬೆಲೆಯ ಮೇಲೂ ಪರಿಣಾಮ ಬೀರಿದೆ.

ಭಾರತ ಸರ್ಕಾರವು ಈ ಪ್ರದೇಶದಲ್ಲಿ ಭಾರತೀಯ ಹಡಗುಗಳ ಸುರಕ್ಷತೆಗೆ ವಿಶೇಷ ನಿಗಾ ಇಡುವಂತೆ ನೌಕಾಪಡೆಗೆ ಸೂಚನೆ ನೀಡಿದೆ. ಭಾರತೀಯ ನಾವಿಕರ ಸುರಕ್ಷತೆಗೆ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಈ ಘಟನೆಯು ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಇನ್ನಷ್ಟು ಹೆಚ್ಚಿಸಿದೆ. ಭಾರತ ಸರ್ಕಾರವು ಪರಿಸ್ಥಿತಿಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದೆ.

 

Exit mobile version