ನಟ ಕಿರಣ್ ರಾಜ್ ಮೇಲೆ ಸಿಂಹ ಅಟ್ಯಾಕ್? ವಿಡಿಯೋ ನೋಡಿ ಫ್ಯಾನ್ಸ್ ಶಾಕ್!

ವ್ಯರ್ಥವಾಗಬಹುದು, (15)

ಬೆಂಗಳೂರು: ಕನ್ನಡ ಚಿತ್ರರಂಗದ ನಟ ಕಿರಣ್ ರಾಜ್ ಅವರ ಸಾಹಸಮಯ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಗಮನ ಸೆಳೆಯುತ್ತಿದೆ. ಸಫಾರಿ ವೇಳೆ ಸಿಂಹಗಳೊಂದಿಗೆ ನಟ ಕಾಣಿಸಿಕೊಂಡಿರುವ ಈ ವಿಡಿಯೋದಲ್ಲಿ, ಸಿಂಹವೊಂದು ಕಿರಣ್ ರಾಜ್ ಅವರ ಮೇಲೆ ದಾಳಿ ಮಾಡಿದಂತೆ ಕಾಣಿಸುವ ದೃಶ್ಯವಿದೆ. ಇದರಿಂದ ಅಭಿಮಾನಿಗಳು ಆತಂಕಗೊಂಡಿದ್ದಾರೆ.

ಆದರೆ ವಿಡಿಯೋ ವೈರಲ್ ಆದ ಬೆನ್ನಲ್ಲೇ ಸ್ವತಃ ಕಿರಣ್ ರಾಜ್ ಅವರು ಸ್ಪಷ್ಟನೆ ನೀಡಿದ್ದು, ತಾವು ಸಂಪೂರ್ಣ ಸುರಕ್ಷಿತವಾಗಿರುವುದಾಗಿ ತಿಳಿಸಿದ್ದಾರೆ. ಹೀಗಾಗಿ ಅಭಿಮಾನಿಗಳು ಆತಂಕಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಸಿಂಹಗಳೊಂದಿಗೆ ಸ್ನೇಹ ಬೆಳೆಸಿಕೊಳ್ಳಲು ಮುಂದಾದ ನಟ

ಕಿರಣ್ ರಾಜ್ ಅವರೇ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. “ಸಿಂಹಕ್ಕೆ ತರಬೇತಿ ನೀಡುವುದು ಹೇಗೆ ಎಂಬುದನ್ನು ಕಲಿಯುವ ಮೊದಲ ದಿನ” ಎಂಬ ಅರ್ಥದ ಕ್ಯಾಪ್ಶನ್‌ನೊಂದಿಗೆ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.

ವಿಡಿಯೋದಲ್ಲಿ ರೋಜರ್ ಮತ್ತು ರಾಕಿ ಎಂಬ ಎರಡು ಸಿಂಹಗಳು ಕಾಣಿಸಿಕೊಳ್ಳುತ್ತವೆ. ಅವುಗಳೊಂದಿಗೆ ನಟ ಸಂವಹನ ನಡೆಸುತ್ತಿರುವುದು ಕಂಡುಬರುತ್ತದೆ. ಸಿಂಹಗಳೊಂದಿಗೆ ಸ್ನೇಹ ಬೆಳೆಸಿಕೊಳ್ಳುವ ವಿಶ್ವಾಸವನ್ನೂ ಕಿರಣ್ ರಾಜ್ ವ್ಯಕ್ತಪಡಿಸುತ್ತಿರುವುದು ವಿಡಿಯೋದಲ್ಲಿ ಕಾಣುತ್ತದೆ.

ಕಾಡು ಪ್ರಾಣಿಗಳೊಂದಿಗೆ ಇಂತಹ ರೀತಿಯಲ್ಲಿ ಸಮಯ ಕಳೆಯುವುದು ಸಾಮಾನ್ಯವಲ್ಲ. ಹೀಗಾಗಿ ವಿಡಿಯೋ ಆರಂಭವಾದ ಕೆಲವೇ ಕ್ಷಣಗಳಲ್ಲಿ ಅಭಿಮಾನಿಗಳ ಗಮನ ಸಂಪೂರ್ಣವಾಗಿ ನಟ ಮತ್ತು ಸಿಂಹಗಳ ನಡುವಿನ ಚಲನವಲನದತ್ತ ಸೆಳೆಯುತ್ತದೆ.

ಏಕಾಏಕಿ ನಟನನ್ನು ಕೆಳಗೆ ಬೀಳಿಸಿದ ಸಿಂಹ?

ವಿಡಿಯೋದಲ್ಲಿ ಸಿಂಹವೊಂದು ಕಿರಣ್ ರಾಜ್ ಅವರತ್ತ ವೇಗವಾಗಿ ಚಲಿಸುವುದು ಹಾಗೂ ನಟ ಕೆಳಗೆ ಬಿದ್ದಂತೆ ಕಾಣಿಸುವ ದೃಶ್ಯವಿದೆ. ಈ ದೃಶ್ಯವೇ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್‌ ಆಗ್ತಿದೆ.. 

ವಿಡಿಯೋ ನೋಡಿದ ಕೆಲವರು ಇದು ನಿಜವಾದ ದಾಳಿಯೇ ಎಂದು ಆತಂಕ ವ್ಯಕ್ತಪಡಿಸಿದರೆ, ಇನ್ನು ಕೆಲವರು ಸಿಂಹದ ವರ್ತನೆ ಹಾಗೂ ನಟನೊಂದಿಗೆ ನಡೆದ ಸಂವಹನದ ಭಾಗವಾಗಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಘಟನೆಯ ಸಂಪೂರ್ಣ ಹಿನ್ನೆಲೆ ಅಥವಾ ವಿಡಿಯೋ ಚಿತ್ರೀಕರಣದ ಸಂದರ್ಭದ ಬಗ್ಗೆ ಹೆಚ್ಚಿನ ವಿವರಗಳು ಲಭ್ಯವಾಗದ ಹಿನ್ನೆಲೆ, ದೃಶ್ಯವನ್ನು ಆಧರಿಸಿ ನಿಖರವಾಗಿ ಸಿಂಹ ದಾಳಿ ನಡೆದಿದೆ ಎಂದು ಹೇಳಲು ಸಾಧ್ಯವಿಲ್ಲ.

‘ನಾನು ಸೇಫ್‌ ಇದ್ದೇನೆ, ಚಿಂತೆ ಬೇಡ’

ವಿಡಿಯೋ ವೈರಲ್ ಆಗುತ್ತಿದ್ದಂತೆ ಕಿರಣ್ ರಾಜ್ ಅವರ ಅಭಿಮಾನಿಗಳು ಕಾಮೆಂಟ್‌ಗಳ ಮೂಲಕ ಆತಂಕ ವ್ಯಕ್ತಪಡಿಸಿದ್ದಾರೆ. ನಟನಿಗೆ ಏನಾದರೂ ಅಪಾಯವಾಗಿದೆಯೇ ಎಂಬ ಪ್ರಶ್ನೆಗಳು ಮೂಡಿದ್ದವು.

ಇದಕ್ಕೆ ಪ್ರತಿಕ್ರಿಯಿಸಿರುವ ಕಿರಣ್ ರಾಜ್, “ನಾನು ಸೇಫ್‌ ಇದ್ದೇನೆ, ಚಿಂತೆ ಮಾಡಬೇಡಿ” ಎಂದು ಸ್ಪಷ್ಟಪಡಿಸಿದ್ದಾರೆ. ತಾವು ಸುರಕ್ಷಿತವಾಗಿರದಿದ್ದರೆ ಇಂತಹ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲು ಸಾಧ್ಯವಾಗುತ್ತಿರಲಿಲ್ಲ ಎಂಬ ಅರ್ಥದಲ್ಲಿ ಪ್ರತಿಕ್ರಿಯಿಸಿದ್ದಾರೆ.

ಅಭಿಮಾನಿಗಳಿಂದ ಎಚ್ಚರಿಕೆಯ ಸಲಹೆ

ಕಿರಣ್ ರಾಜ್ ಅವರ ವಿಡಿಯೋಗೆ ಸಾಮಾಜಿಕ ಜಾಲತಾಣದಲ್ಲಿ ವಿವಿಧ ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಕೆಲವರು ನಟನ ಧೈರ್ಯವನ್ನು ಮೆಚ್ಚಿಕೊಂಡಿದ್ದರೆ, ಇನ್ನೂ ಕೆಲವರು ಸಿಂಹಗಳಂತಹ ಕಾಡು ಪ್ರಾಣಿಗಳೊಂದಿಗೆ ಅತಿಯಾಗಿ ಹತ್ತಿರವಾಗುವುದು ಅಪಾಯಕಾರಿ ಎಂದು ಎಚ್ಚರಿಸಿದ್ದಾರೆ.

 

Exit mobile version