ಇಂದು, ಏಪ್ರಿಲ್ 14, 2025, ಭಾರತದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನ. ಪ್ರತಿ ವರ್ಷ ಈ ದಿನವನ್ನು ದೇಶಾದ್ಯಂತ ‘ಅಂಬೇಡ್ಕರ್ ಜಯಂತಿ’ಯಾಗಿ ಆಚರಿಸಲಾಗುತ್ತದೆ. ಬಾಬಾ ಸಾಹೇಬ್ ಎಂದೇ ಜನಪ್ರಿಯರಾದ ಅಂಬೇಡ್ಕರ್, ಭಾರತದ ಸಂವಿಧಾನದ ರೂವಾರಿಯಾಗಿ, ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಹರಿಕಾರರಾಗಿ ಶಾಶ್ವತ ಛಾಪು ಮೂಡಿಸಿದ್ದಾರೆ. ಅವರ ಜೀವನ ಮತ್ತು ತತ್ವಗಳು ಇಂದಿಗೂ ಲಕ್ಷಾಂತರ ಜನರಿಗೆ ಸ್ಫೂರ್ತಿಯಾಗಿವೆ. ಈ ಲೇಖನದಲ್ಲಿ ಅವರ ಜೀವನದ ಕೆಲವು ಪ್ರಮುಖ ಅಂಶಗಳು ಮತ್ತು ಸಂದೇಶಗಳನ್ನು ಒಳಗೊಂಡಿದೆ.
ಅಂಬೇಡ್ಕರ್ ಅವರ ಜೀವನ ಪಯಣ
ಡಾ. ಭೀಮರಾವ್ ರಾಮ್ಜಿ ಅಂಬೇಡ್ಕರ್ ಅವರು 1891ರ ಏಪ್ರಿಲ್ 14ರಂದು ಮಧ್ಯಪ್ರದೇಶದ ಮೋವ್ ಎಂಬಲ್ಲಿ ಜನಿಸಿದರು. 1908ರಲ್ಲಿ ಎಲ್ಫಿನ್ ಸ್ಟೋನ್ ಹೈಸ್ಕೂಲ್ನಿಂದ ಮೆಟ್ರಿಕ್ಯುಲೇಶನ್ ಪಾಸಾಗಿದ್ದ ಅವರು, ಉನ್ನತ ಶಿಕ್ಷಣಕ್ಕಾಗಿ ಅಮೆರಿಕಾದ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರವನ್ನು ಅಧ್ಯಯನ ಮಾಡಿದರು. 1927ರಲ್ಲಿ ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದ ಅವರು, ಜಾತಿ ತಾರತಮ್ಯ ಮತ್ತು ಅಸ್ಪೃಶ್ಯತೆಯ ವಿರುದ್ಧ ದಿಟ್ಟ ಹೋರಾಟ ಆರಂಭಿಸಿದರು.
1920ರಲ್ಲಿ ‘ಮೂಕನಾಯಕ’ ಎಂಬ ಪತ್ರಿಕೆಯನ್ನು ಆರಂಭಿಸಿ, ದಮನಿತ ಸಮುದಾಯಗಳ ಧ್ವನಿಯಾದರು. ಸ್ವತಂತ್ರ ಭಾರತದ ಮೊದಲ ಕಾನೂನು ಸಚಿವರಾಗಿ ಸೇವೆ ಸಲ್ಲಿಸಿದ ಅವರು, ಸಂವಿಧಾನ ರಚನೆಯ ಕರಡು ಸಮಿತಿಯ ಅಧ್ಯಕ್ಷರಾಗಿ ಭಾರತದ ಸಂವಿಧಾನಕ್ಕೆ ಅಪಾರ ಕೊಡುಗೆ ನೀಡಿದರು. ಇದಕ್ಕಾಗಿಯೇ ಅವರನ್ನು ‘ಸಂವಿಧಾನ ಶಿಲ್ಪಿ’ ಎಂದು ಕರೆಯಲಾಗುತ್ತದೆ.
1935ರ ಯೌಲ್ಲ ಸಮ್ಮೇಳನದಲ್ಲಿ ಅಂಬೇಡ್ಕರ್, “ನಾನು ಹಿಂದೂ ಧರ್ಮದಲ್ಲಿ ಜನಿಸಿದ್ದು ಅನಿವಾರ್ಯವಾದರೂ, ಹಿಂದೂವಾಗಿ ಸಾಯುವುದಿಲ್ಲ,” ಎಂದು ಘೋಷಿಸಿದ್ದರು. 1956ರ ಡಿಸೆಂಬರ್ 6ರಂದು ದೆಹಲಿಯ ತಮ್ಮ ನಿವಾಸದಲ್ಲಿ 65ನೇ ವಯಸ್ಸಿನಲ್ಲಿ ಅವರು ನಿಧನರಾದರು. 1990ರಲ್ಲಿ ಅವರಿಗೆ ಮರಣೋತ್ತರವಾಗಿ ಭಾರತದ ಅತ್ಯುನ್ನತ ಗೌರವ ‘ಭಾರತ ರತ್ನ’ ಪ್ರಶಸ್ತಿಯನ್ನು ನೀಡಲಾಯಿತು.
ಅಂಬೇಡ್ಕರ್ ಅವರ ಸ್ಫೂರ್ತಿದಾಯಕ ಸಂದೇಶಗಳು
- ಶಿಕ್ಷಣದ ಮಹತ್ವ: “ಶಿಕ್ಷಣವು ಪುರುಷರಿಗೆ ಎಷ್ಟು ಅಗತ್ಯವೋ, ಮಹಿಳೆಯರಿಗೂ ಅಷ್ಟೇ ಮುಖ್ಯವಾಗಿದೆ.”
- ಜ್ಞಾನದ ಶಕ್ತಿ: “ಪ್ರತಿಯೊಬ್ಬರ ಜೀವನಕ್ಕೆ ಜ್ಞಾನವೇ ಆಧಾರಸ್ತಂಭ.”
- ಪ್ರಯತ್ನದ ಮೌಲ್ಯ: “ದೊಡ್ಡ ಪ್ರಯತ್ನಗಳಿಲ್ಲದೆ ಈ ಜಗತ್ತಿನಲ್ಲಿ ಯಾವುದೂ ಶ್ರೇಷ್ಠವಲ್ಲ.”
- ಮನಸ್ಸಿನ ಸ್ವಾತಂತ್ರ್ಯ: “ನಿಮ್ಮ ಮನಸ್ಸು ಮುಕ್ತವಾಗಿದ್ದರೆ, ನೀವು ನಿಜವಾದ ಸ್ವತಂತ್ರರು.”
- ಗುಣಮಟ್ಟದ ಬದುಕು: “ಚೆಂದವಾಗಿ ಕಾಣುವ ಬದಲು ಒಳ್ಳೆಯವರಾಗಿ ಬದುಕಿ.”
- ಮನಸ್ಸಿನ ಬೆಳವಣಿಗೆ: “ಮಾನವ ಜನಾಂಗದ ಅಂತಿಮ ಗುರಿಯಾಗಿ ಮನಸ್ಸಿನ ಅಭಿವೃದ್ಧಿಯಿರಬೇಕು.”
- ಇತಿಹಾಸದ ಪಾಠ: “ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು.”
- ಶ್ರೇಷ್ಠ ಬದುಕು: “ಜೀವನವು ದೀರ್ಘವಾಗಿರುವುದಕ್ಕಿಂತ ಶ್ರೇಷ್ಠವಾಗಿರಲಿ.”
- ಸಂವಿಧಾನದ ಗೌರವ: “ಸಂವಿಧಾನ ದುರ್ಬಳಕೆಯಾಗುತ್ತಿದ್ದರೆ, ಅದನ್ನು ಸುಡುವ ಮೊದಲಿಗ ನಾನಿರುತ್ತೇನೆ.”
- ಕಾನೂನಿನ ಶಕ್ತಿ: “ಕಾನೂನು ಮತ್ತು ಸುವ್ಯವಸ್ಥೆಯು ರಾಜಕೀಯ ದೇಹಕ್ಕೆ ಔಷಧಿಯಂತೆ; ಅನಾರೋಗ್ಯಕ್ಕೆ ಔಷಧಿ ಅಗತ್ಯ.”
- ಸಂಘಟನೆಯ ಶಕ್ತಿ: “ವಿದ್ಯಾವಂತರಾಗಿ, ಸಂಘಟಿತರಾಗಿ, ಹೋರಾಡಿ.”
ಡಾ. ಬಿ.ಆರ್. ಅಂಬೇಡ್ಕರ್ ಅವರ ಜೀವನ ಮತ್ತು ತತ್ವಗಳು ಇಂದಿಗೂ ಯುವಜನರಿಗೆ, ಸಮಾಜಕ್ಕೆ ಸಮಾನತೆ ಮತ್ತು ಪ್ರಗತಿಯ ದಾರಿಯನ್ನು ತೋರಿಸುತ್ತಿವೆ. ಅವರ ಆದರ್ಶಗಳು ನಮ್ಮೆಲ್ಲರ ಜೀವನಕ್ಕೆ ಮಾರ್ಗದರ್ಶಿಯಾಗಿವೆ.
ನಿಮ್ಮ ನೆಚ್ಚಿನ ಗ್ಯಾರಂಟಿ ನ್ಯೂಸ್ ಈ ಕೆಳಕಂಡ ಕೇಬಲ್ & ಡಿಟಿಎಚ್ ನೆಟ್ ವರ್ಕ್ ಗಳಲ್ಲಿ ಲಭ್ಯ..
- Tata Play-1665
- U-Digital-ಮೈಸೂರು-160
- Metro Cast Network-ಬೆಂಗಳೂರು-ಬೆಳಗಾವಿ-30-828
- V4 digital network-623
- Abhishek network-817
- Malnad Digital network-45
- JBM network-ರಾಮದುರ್ಗ-54
- Channel net nine-ಧಾರವಾಡ-128
- Basava cable network-ಚಳ್ಳಕೆರೆ-54
- City channel network– ಚಳ್ಳಕೆರೆ-54
- RST digital-ಕಾರ್ಕಳ-101
- Vinayak cable-ಪಟ್ಟನಾಯಕನಹಳ್ಳಿ-54
- Mubarak digital-ಸಂಡೂರು-54
- SB cable-ಸವದತ್ತಿ-54
- Bhosale network-ವಿಜಯಪುರ-54
- Surya digital-ಜಗಳೂರು-54
- Gayatri network-ಸಿಂಧನೂರು-54
- Global vision-ದಾವಣಗೆರೆ-54
- Janani cable-ಮಂಡ್ಯ-54
- Hira cable-ಬೆಳಗಾವಿ-ಹುಬ್ಬಳ್ಳಿ-54
- UDC network-ಹಾರೋಗೇರಿ-54
- Moka cable-ಬಳ್ಳಾರಿ-100
- CAN network-ಚಿಕ್ಕೋಡಿ-54
- KK digital-ಗಂಗಾವತಿ-54
- Victory network-ದಾವಣಗೆರೆ-54