ಅದೊಂದು ನಿರ್ಜಲ ಪ್ರದೇಶ,ಯಾರು ಕೂಡ ಅಷ್ಟಾಗಿ ಓಡಾಡುತ್ತಿರಲಿಲ್ಲ. ಅಕ್ಕ ಪಕ್ಕ ಲೇಔಟ್ಗಳು ರೆಡಿಯಾಗ್ತಿತ್ತು. ಇವತ್ತು ಖಾಲಿಯಾದ ಜಾಗದ ಬಳಿ ಬೆಳಗ್ಗೆ ಹೋಗಿದ್ದ ವ್ಯಕ್ತಿ ಅದೊಂದು ಅನಾಥ ಬಾಡಿ ನೋಡಿ ಶಾಕ್ ಆಗಿದ್ದ. ಯಾಕಂದ್ರೆ ಯುವಕನೋರ್ವ ನನ್ನ ಹತ್ಯೆ ಮಾಡಿರುವ ಹಂತಕರು ಖಾಲಿ ಜಾಗದಲ್ಲಿ ಬಿಸಾಕಿ ಹೋಗಿದ್ರು.
ಇವತ್ತು ಬೆಳಗ್ಗೆ ಏಳುಗಂಟೆ ಸಮಯದಲ್ಲಿ ಪೊಲೀಸ್ ಕಂಟ್ರೋಲ್ ರೂಮ್ಗೆ ಕರೆ ಮಾಡಿದ್ದ ಅದೊಬ್ಬ ವ್ಯಕ್ತಿ ಯಾರನ್ನೋ ಕೊಲೆ ಮಾಡಿ ಬಿಸಾಕಿದ್ದಾರೆ ಅಂತ ಮಾಹಿತಿ ಕೊಟ್ಟಿದ್ದ. ಕೂಡಲೆ ಸ್ಥಳಕ್ಕೆ ಹೋಗಿದ್ದ ಪೀಣ್ಯಾ ಪೊಲೀಸ್ರಿಗೆ ನಿರ್ಜಲ ಪ್ರದೇಶದ ರೀತಿ ಇರೋ ಜಾಗದಲ್ಲಿ ವ್ಯಕ್ತಿಯೋರ್ವನ ಶವ ಸಿಕ್ಕಿದೆ.
ಮೃತದೇಹ ಪರಿಶೀಲನೆ ನಡೆಸಿರುವ ಪೊಲೀಸ್ರಿಗೆ ಮೇಲು ನೋಟಕ್ಕೆ ಅಲ್ಲೊಂದು ಕೊಲೆ ಆಗಿದೆ ಅಂತಾ ಗೊತ್ತಾಗಿದೆ. ಆದ್ರೆ ಆ ವ್ಯಕ್ತಿ ಯಾರು. ಪೂರ್ವಪರೆ ಏನು ಅನ್ನೋದು ಗೊತ್ತಾಗಿಲ್ಲ. ಚಾಕು ಇರಿತವಾಗಿಲ್ಲ. ಮಚ್ಚಿನ ಏಟು ಬಿದ್ದಿಲ್ಲ.ಆದ್ರೆ ಕೈ ಮೇಲೆ ಮುಖದ ಮೇಲೆ ಎದೆಯ ಮೇಲೆ ಗಾಯಗಳಾಗಿವೆ ಪೆಟ್ಟಿನಿಂದಲೇ ಸುಮಾರು 25-30 ವರ್ಷದ ಯುವಕನನ್ನ ಕೊಲೆ ಮಾಡಿ ಹಂತಕರು ಎಸ್ಕೇಪ್ ಆಗಿದ್ದಾರೆ. ಶವ ಬಿದ್ದಿರೋ ರೀತಿ ನೋಡಿದ್ರೆ ಬೇರೆಡೆ ಹೊಡೆದು ಕೊಲೆ ಮಾಡಿರುವ ಆರೋಪಿಗಳು ಇಲ್ಲಿ ಬಿಸಾಕಿ ಎಸ್ಕೇಪ್ ಆಗಿರೋದು ಇದೆ. ಪೊಲೀಸ್ರು ಬಂದ ನಂತರ ಸೋಕೋ ಟೀಂ ಕೂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಡಾಗ್ ಸ್ಕ್ವಾಡ್ ಕೂಡ ಬಂದು ಕ್ರೈಂ ಸೀನ್ ಪರಿಶೀಲನೆ ಮಾಡಿತು.
ಸದ್ಯ ಕೊಲೆ ಮಾಡಿರುವ ಅನುಮಾನದ ಮೇಲೆ ಪ್ರಕರಣ ದಾಖಲಿಸಿಕೊಂಡಿರೋ ಪೀಣ್ಯಾ ಪೊಲೀಸರು ತನಿಖೆ ನಡೆಸ್ತಿದ್ದಾರೆ. ಮೇಲುನೋಟಕ್ಕೆ ಬಿಹಾರ ಮೂಲದಾತ ಅನ್ನೋ ಶಂಕೆ ಇದೆ. ಅಕ್ಕ ಪಕ್ಕದ ಏರಿಯಾಗಳ ಸಿಸಿಟಿವಿ ಪರಿಶೀಲನೆ ನಡೆಸಲಾಗ್ತಿದೆ. ತನಿಖೆ ನಂತರವೇ ಸತ್ತೋನು ಯಾರು..? ಕೊಲೆ ಮಾಡಿದ್ಯಾರು ಅನ್ನೋದು ಗೊತ್ತಾಗಬೇಕಿದೆ.