ಸರಳ ಸಜ್ಜನಿಕೆಯ ಕೃಷ್ಣಗೆ ಬ್ಯಾಟರಾಯನಪುರ ಫಿದಾ!

ಗ್ಯಾರಂಟಿ ನ್ಯೂಸ್ ಮೂಡ್ ಆಫ್ ಕರ್ನಾಟಕ ಮೆಗಾ ಸರ್ವೆ

Untitled design 2025 04 05t201837.071

ಗ್ಯಾರಂಟಿ ನ್ಯೂಸ್ ಸ್ಯಾಟಲೈಟ್ ಸುದ್ದಿ ವಾಹಿನಿ ಮೂಡ್ ಆಫ್ ಕರ್ನಾಟಕ ಎಂಬ ಮೆಗಾ ಸರ್ವೆ ನಡೆಸುತ್ತಿದೆ. ಈ ಸಮೀಕ್ಷೆಯಲ್ಲಿ ರಾಜ್ಯದ ಎಲ್ಲಾ 224 ಕ್ಷೇತ್ರಗಳಲ್ಲಿ ಸದ್ಯದ ಸ್ಥಿತಿಗತಿ ಹೇಗಿದೆ ಅನ್ನೋದ್ರ ಕುರಿತಾಗಿ ಜನರ ನಾಡಿಮಿಡಿತ ಗ್ರಹಿಸುವ ಕೆಲಸ ಮಾಡ್ತಿದೆ.

ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ 2023ರ ಫಲಿತಾಂಶದಲ್ಲಿ ಕಾಂಗ್ರೆಸ್‌‌‌‌ನ ಕೃಷ್ಣಬೈರೇಗೌಡ 160,182 (54%), ಬಿಜೆಪಿಯ ತಮ್ಮೇಶ್ ಗೌಡ-121,978 (41%), ಜೆಡಿಎಸ್ ನಿಂದ ಪಿ.ನಾಗರಾಜು-4,365 (1%) ಮತಗಳನ್ನು ಪಡೆದು ಕೃಷ್ಣಬೈರೇಗೌಡ ಗೆಲುವು ಸಾಧಿಸಿದ್ದರು.

ADVERTISEMENT
ADVERTISEMENT

ಬ್ಯಾಟರಾಯನಪುರ ಕ್ಷೇತ್ರದ ಚಿತ್ರಣ..

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಗೆ ಹೊಂದಿಕೊಂಡಿರುವ ಬ್ಯಾಟರಾಯನಪುರ ಕ್ಷೇತ್ರ ಉದ್ಯಮಪತಿಗಳು, ಐಟಿ ಬಿಟಿ ಕಂಪನಿಗಳು, ಅಪಾರ್ಟ್‌ಮೆಂಟ್‌ಗಳು ಹೀಗೆ ದೊಡ್ಡ ಬಂಡವಾಳದ ಹರಿವು ಹೊಂದಿರುವ ಕ್ಷೇತ್ರವಾಗಿದ್ದು, ಬ್ಯಾಟರಾಯನಪುರದಲ್ಲಿ ರಿಯಲ್ ಎಸ್ಟೇಟ್ ವಹಿವಾಟು ನಾಗಾಲೋಟದಲ್ಲಿದೆ. 2008ರ ಕ್ಷೇತ್ರ ಪುನರ್ ವಿಂಗಡಣೆಯ ನಂತರ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರವಾಯಿತು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಏಳು ವಾರ್ಡ್ಗಳು, ಐದು ಗ್ರಾಮ ಪಂಚಾಯ್ತಿಗಳನ್ನು ಒಳಗೊಂಡಿದೆ.

ಮೂಡ್ ಆಫ್ ಕರ್ನಾಟಕ ಬ್ಯಾಟರಾಯನಪುರ ಮೂಡ್ ಹೇಗಿದೆ?

ಕಳೆದ 6 ಚುನಾವಣೆಗಳಲ್ಲೂ ಸಚಿವ ಕೃಷ್ಣಬೈರೇಗೌಡ ಗೆಲುವು ಸಾಧಿಸುತ್ತ ಬರುತಿದ್ದು, ಒಕ್ಕಲಿಗ, SC/ST & ಮುಸ್ಲಿಂ, ಕ್ರಿಶ್ಚಿಯನ್ ಮತದಾರರು ಹೆಚ್ಚಾಗಿದ್ದರೆ. ಸರಳ ಸಜ್ಜನಿಕೆ..ಜನರಿಗೆ ಸ್ಪಂದಿಸುವ ನೇಚರ್ ನಿಂದಲೇ ಶಾಸಕ ಕೃಷ್ಣಬೈರೇಗೌಡ ಜನಪ್ರಿಯತೆ ಗಳಿಸಿದ್ದಾರೆ. ಬಿಜೆಪಿಗೆ ಗುಂಪುಗಾರಿಕೆಯೇ ಮುಳುವುವಾಗಿದ್ದು, ತಮ್ಮೇಶ್ ಗೌಡಗೆ ಸೋಲು ಕಂಡರು.
ಅಭಿವೃದ್ಧಿ ಕಾರ್ಯಗಳೇ ಕೃಷ್ಣಬೈರೇಗೌಡಗೆ ಶ್ರೀರಕ್ಷೆಯಾಗಿದ್ದು, ಗ್ಯಾರಂಟಿ ಯೋಜನೆಗಳಿಂದಲೂ ಕೃಷ್ಣಗೆ ಬೋನಸ್ ಬಲ ತಂದು ಕೊಟ್ಟಿದೆ.

ಬ್ಯಾಟರಾಯನಪುರ ಕ್ಷೇತ್ರದ ಆಕಾಂಕ್ಷಿಗಳು ಯಾರು?
ಕಾಂಗೇಸ್ ನಲ್ಲಿ ಪ್ರಭಾವಿ ಸಚಿವರಾಗಿರುವ ಕೃಷ್ಣಭೈರೇಗೌಡ ಮುಂದಿನ ಚುನಾವಣೆಯಲ್ಲೂ ಸ್ಫರ್ಧೆ ಮಾಡುವುದು ಖಚಿತವಾಗಿದ್ದು, ಬಿಜೆಪಿಯಿಂದ-ತಮ್ಮೇಶ್ ಗೌಡ, ಜೆಡಿಎಸ್ ನಲ್ಲಿ ರವಿ ಟಿಕೆಟ್ ಪಡೆಯಲು ಲಾಬಿ ನಡೆಸುತ್ತಿದ್ದಾರೆ.

ನಿಮ್ಮ ನೆಚ್ಚಿನ ಗ್ಯಾರಂಟಿ ನ್ಯೂಸ್ ಈ ಕೆಳಕಂಡ ಕೇಬಲ್ & ಡಿಟಿಎಚ್ ನೆಟ್ ವರ್ಕ್ ಗಳಲ್ಲಿ ಲಭ್ಯ..

Exit mobile version