ಮಂಗಳೂರು: ಸುಜಾತಾ ಭಟ್ ಅವರ “ಅನನ್ಯಾ ಭಟ್ ನನ್ನ ಮಗಳಲ್ಲ, ಕೆಲವರು ಹೆದರಿಸಿ ಹೇಳಿಕೆ ನೀಡಿಸಿದ್ದಾರೆ” ಎಂಬ ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿದಂತೆ ಹೋರಾಟಗಾರ ಗಿರೀಶ್ ಮಟ್ಟಣ್ಣವರ್ ಪ್ರತಿಕ್ರಿಯೆ ನೀಡಿದ್ದಾರೆ.
“ಸುಜಾತಾ ಭಟ್ ಅವರೇ ನಮ್ಮನ್ನು ಸಂಪರ್ಕಿಸಿದ್ದರು. ನಾವು ಯಾವುದೇ ಒತ್ತಾಯ ಮಾಡಿಲ್ಲ. ಕೇವಲ ಮಾನವೀಯ ದೃಷ್ಟಿಯಿಂದ ಅವರಿಗೆ ಸಹಾಯ ಮಾಡಿದ್ದೇವೆ,” ಎಂದು ಗಿರೀಶ್ ಮಟ್ಟಣ್ಣವರ್ ಸ್ಪಷ್ಟಪಡಿಸಿದ್ದಾರೆ.
ADVERTISEMENT
ADVERTISEMENT
ಈ ಪ್ರಕರಣದ ಸತ್ಯಾಸತ್ಯತೆಯನ್ನು ತನಿಖೆಯ ಮೂಲಕ ಕಂಡುಹಿಡಿಯಬೇಕಾಗಿದೆ ಎಂದು ಅವರು ಒತ್ತಿ ಹೇಳಿದ್ದಾರೆ.
ಈ ವಿವಾದವು ಮಂಗಳೂರಿನಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಸುಜಾತಾ ಭಟ್ರ ದ್ವಂದ್ವ ಹೇಳಿಕೆಗಳ ಹಿಂದಿನ ಸತ್ಯವನ್ನು ತನಿಖೆಯಿಂದಲೇ ಖಚಿತಪಡಿಸಬೇಕಿದೆ ಎಂದು ಗಿರೀಶ್ ಮಟ್ಟಣ್ಣವರ್ ತಿಳಿಸಿದ್ದಾರೆ.