ಶಿವಮೊಗ್ಗದಲ್ಲಿ ಮಂಜುನಾಥ್ ಮೃತದೇಹಕ್ಕೆ ಸಾರ್ವಜನಿಕರಿಂದ ನಮನ: ಪಾಕಿಸ್ತಾನದ ವಿರುದ್ಧ ಆಕ್ರೋಶ

ಉಗ್ರರ ಪ್ರತೀಕಾತ್ಮ ಸುಟ್ಟು ಆಕ್ರೋಶ ವ್ಯಕ್ತಪಡಿಸಿದ ಶಿವಮೊಗ್ಗ ಜನತೆ

123 2025 04 24t105527.767

ಕಾಶ್ಮೀರದ ಪಹಲ್ಗಾಂವ್‌ನಲ್ಲಿ ಭಯೋತ್ಪಾದಕರ ದಾಳಿಯಲ್ಲಿ ಮೃತಪಟ್ಟ ಶಿವಮೊಗ್ಗದ ಮಂಜುನಾಥ್ ರಾವ್ ಅವರ ಮೃತದೇಹವನ್ನು ಹಳೆಯ ಬಸ್ ಸ್ಟಾಪ್ ಬಳಿ ಸಾರ್ವಜನಿಕರು ವೀಕ್ಷಿಸಿದ್ದಾರೆ. ಈ ಸಂದರ್ಭದಲ್ಲಿ ಸಾರ್ವಜನಿಕರು ಮತ್ತು ಬಜರಂಗದಳ ಕಾರ್ಯಕರ್ತರು ಪಾಕಿಸ್ತಾನದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಕ್ರೋಶದ ಪ್ರತೀಕಾತ್ಮಕ ಪ್ರತಿಭಟನೆ
ಪಾಕಿಸ್ತಾನದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ, ಉಗ್ರರ ಪ್ರತಿಕೃತಿಯನ್ನು ಜೆಸಿಬಿಗೆ ನೇಣು ಹಾಕಿ ಸಾರ್ವಜನಿಕರು ತಮ್ಮ ಕೋಪವನ್ನು ವ್ಯಕ್ತಪಡಿಸಿದರು. “ಪಾಕಿಸ್ತಾನ ಗಾಂಡು” ಎಂಬ ಘೋಷಣೆಗಳೊಂದಿಗೆ ಶಿವಮೊಗ್ಗದ ಜನತೆ ಉಗ್ರವಾದವನ್ನು ಖಂಡಿಸಿದರು.

ಬೈಕ್ ರ್ಯಾಲಿಯೊಂದಿಗೆ ಮೃತದೇಹ ರವಾನೆ
ಮಂಜುನಾಥ್ ಅವರ ಮೃತದೇಹವನ್ನು ಬೈಕ್ ರ್ಯಾಲಿಯೊಂದಿಗೆ ಅಂತಿಮ ಸಂಸ್ಕಾರಕ್ಕಾಗಿ ರವಾನಿಸಲಾಯಿತು. ಬಜರಂಗದಳ ಕಾರ್ಯಕರ್ತರು ಈ ರ್ಯಾಲಿಯನ್ನು ಮುನ್ನಡೆಸಿದ್ದು, ರಸ್ತೆಯುದ್ದಕ್ಕೂ ಶಿವಮೊಗ್ಗದ ಜನರು ಮೃತರಿಗೆ ನಮನ ಸಲ್ಲಿಸಿದರು.

ಮೃತದೇಹದ ಅಂತಿಮ ಯಾತ್ರೆಯನ್ನು ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ನಡೆಸಲಾಯಿತು. ರಸ್ತೆಯ ಉದ್ದಕ್ಕೂ ನೂರಾರು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಜನಸಂದಣಿಯನ್ನು ನಿಯಂತ್ರಿಸಲು ಜಿಲ್ಲಾಡಳಿತವು ಸಕಲ ವ್ಯವಸ್ಥೆಗಳನ್ನು ಮಾಡಿಕೊಂಡಿದೆ.

ಪಾಕಿಸ್ತಾನ-ಬೆಂಬಲಿತ ಭಯೋತ್ಪಾದಕರ ದಾಳಿಯಿಂದ ಮಂಜುನಾಥ್ ರಾವ್ ಸೇರಿದಂತೆ 28ಕ್ಕೂ ಹೆಚ್ಚು ಜನರು ಬಲಿಯಾಗಿರುವುದು ಶಿವಮೊಗ್ಗದ ಜನರಲ್ಲಿ ತೀವ್ರ ಆಕ್ರೋಶವನ್ನು ಉಂಟುಮಾಡಿದೆ. ಈ ದಾಳಿಯನ್ನು ಖಂಡಿಸಿ, ಶಿವಮೊಗ್ಗದ ಜನತೆ ಒಗ್ಗೂಡಿ ಮೃತರಿಗೆ ಗೌರವ ಸೂಚಿಸಿದ್ದಾರೆ.

    Exit mobile version