ಆತ ತಾನಾಯಿತು ತನ್ನ ಪಾಡಾಯಿತು ಎಂದು ಇದ್ದ, ಜೀವನಕ್ಕಾಗಿ ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡಿಕೊಂಡಿದ್ದ , ಮನೆ ಮುಂದೆ ಬರ್ತಿದ್ದ ಬೀದಿ ನಾಯಿಗಳಿಗೆ ಊಟ ಹಾಕಿ ಸಾಕುತ್ತಿದ್ದ, ನಿನ್ನೆ ಮನೆಗ ಬಂದ ಪರಿಚಯಸ್ಥ ಹುಡುಗ ಅಡುಗೆ ಮಾಡುವ ವಿಚಾರಕ್ಕೆ ಗಲಾಟೆ ಮಾಡಿ ಹತ್ಯೆ ಮಾಡಿ ಎಸ್ಕೇಪ್ ಆಗಿದ್ದಾನೆ.
ಇವನ ಹೆಸರು ಜರೀಲಾನ್ ಸುಮಾರು 70 ವರ್ಷ, ಇದೇ ಶೆಡ್ ನಲ್ಲಿ ಹಲವು ವರ್ಷಗಳಿಂದ ವಾಸವಾಗಿದ್ದ, ಅವರಿವರ ಮನೆ ಬಳಿ ಕೆಲಸ ಮಾಡೋದು ಜೊತೆಗೆ ಸೆಕ್ಯೂರಿಟಿ ಯಾಗಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ, ಮನೆಯ ಮುಂದೆ ಗಿಡಗಳನ್ನ ನೆಡೋದು, ಮನೆಯ ಹತ್ತಿರ ಬರೋ ನಾಯಿಗಳಿಗೆ ಊಟ ಹಾಕೋದು ಮಾಡುತ್ತಿದ್ದ ಇದರಿಂದ. ಅಕ್ಕಪಕ್ಕದರು ಕೂಡ ಇಷ್ಟಪಡುವ ವ್ಯಕ್ತಿಯಾಗಿದ್ದ .ಆದ್ರೆ ಇದೇ ವ್ಯಕ್ತಿ ಭೀಕರವಾಗಿ ಕೊಲೆಯಾಗೋಗಿದ್ದಾನೆ
ನಿನ್ನೆ ಭಾನುವಾರ ಆಗಿದ್ದರಿಂದ ಮಹೇಂದ್ರ ಬಹದೂರ್ ಅನ್ನೋ ಯುವಕ ಇದೆ ಶೇಡ್ ಬಳಿ ಬಂದಿದ್ದಾನೆ. ಬಂದವನೇ ಕುಡಿದ ಮತ್ತಿನಲ್ಲಿ ಅಡುಗೆ ವಿಚಾರಕ್ಕೆ ಗಲಾಟೆ ಮಾಡಿದ್ದಾನೆ. ಸಾಂಬಾರ್ ಚೆನ್ನಾಗಿಲ್ಲ ಎಂದು ಕಿರಿಕ್ ತೆಗೆದವನೇ ಚಪಾತಿ ಮಾಡೋ ಲಟ್ಟಣಿಗೆ ಹಾಗೂ ಮಣೆಯಿಂದ ತಲೆಗೆ ಬಲವಾಗಿ ಹೊಡೆದಿದ್ದಾನೆ ಇದರಿಂದ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲಿ ಜರೀಲಾನ್ ಮೃತಪಟ್ಟಿದ್ದಾನೆ, ವಿಷಯ ತಿಳಿದು ಸ್ಥಳಕ್ಕೆ ಬಂದ ಪೋಲಿಸರು ಘಟನೆ ಬಗ್ಗೆ ಮಾಹಿತಿ ಕಲೆ ಹಾಕಿದಾಗ ಶೆಡ್ ಬಳಿ ಯಾರೋ ಬಂದಿದ್ದು ನಿನ್ನೆ ಗಲಾಟೆಯಾಗ್ತಿತ್ತು ಎಂದು ಹೇಳಿದ್ದಾರೆ.ನಂತರ ತನಿಖೆಗಿಳಿದ ಪೋಲಿಸರು ಆರೋಪಿ ನೇಪಾಳಕ್ಕೆ ಎಸ್ಕೇಪ್ ಆಗ್ತಿದ್ದಾಗ ವಶಕ್ಕೆ ಪಡೆದಿದ್ದಾರೆ.
ಸದ್ಯ ಆರೋಪಿಯನ್ನು ವಿಚಾರಣೆ ನಡೆಸುತ್ತಿದ್ದು, ಕೇವಲ ಸಾಂಬಾರ್ ಮಾಡುವ ವಿಚಾರಕ್ಕೆ ಹತ್ಯೆ ಮಾಡಿದ್ದಾನಾ? ಅಥವಾ ಹಣಕಾಸಿನ ವಿಚಾರಕ್ಕೆ ಕೊಲೆ ಮಾಡಿದ್ನ ಅನ್ನೋದು ತನಿಖೆ ಇಂದಾಗಿ ಬೆಳಕಿಗೆ ಬರಬೇಕಿದೆ.