ಬೆಂಗಳೂರಿನಲ್ಲಿ ಶಾಕಿಂಗ್ ಕೊಲೆ: ಪರಸ್ತ್ರೀ ಸಂಬಂಧದಿಂದ ಸ್ನೇಹಿತನ ಹತ್ಯೆ!

Web (79)

ಬೆಂಗಳೂರಿನ ಬಂಡೆಪಾಳ್ಯದ ಅಂಬೇಡ್ಕರ್ ನಗರದಲ್ಲಿ ನಡೆದ ಒಂದು ಆಘಾತಕಾರಿ ಕೊಲೆ ಪ್ರಕರಣದಲ್ಲಿ, ಉತ್ತರ ಪ್ರದೇಶ ಮೂಲದ ಶೈಲೆಂದ್ರ ಯಾದವ್ ಎಂಬಾತನ ಹತ್ಯೆಗೆ ಪರಸ್ತ್ರೀಯೊಂದಿಗಿನ ಅಕ್ರಮ ಸಂಬಂಧ ಕಾರಣವಾಗಿತ್ತು ಎಂಬ ಸತ್ಯ ತನಿಖೆಯಲ್ಲಿ ಬಯಲಾಗಿದೆ.

ಕಳೆದ ಗುರುವಾರ ಮಧ್ಯರಾತ್ರಿ, ಸತೀಶ್ ಯಾದವ್ ಎಂಬಾತ ಬಂಡೆಪಾಳ್ಯ ಪೊಲೀಸರಿಗೆ ಕರೆ ಮಾಡಿ, ತನ್ನ ಸ್ನೇಹಿತ ಶೈಲೆಂದ್ರ ಯಾದವ್ ಮೃತಪಟ್ಟಿದ್ದಾನೆ ಎಂದು ಮಾಹಿತಿ ನೀಡಿದ. ಪೊಲೀಸರು ಸ್ಥಳಕ್ಕೆ ತಕ್ಷಣವೇ ಆಗಮಿಸಿ, ಮೃತದೇಹದ ಮೇಲೆ ಯಾವುದೇ ಗಾಯದ ಗುರುತುಗಳಿಲ್ಲದ ಕಾರಣ, ಅನುಮಾನಾಸ್ಪದ ಸಾವಿನ ಪ್ರಕರಣವನ್ನು (ಯುಡಿಆರ್) ದಾಖಲಿಸಿಕೊಂಡು ಶವವನ್ನು ಆಸ್ಪತ್ರೆಗೆ ಕಳಿಹಿಸಿದರು. ಆದರೆ, ಸೋಮವಾರ (ಜೂನ್ 23) ಬಂದ ಮರಣೋತ್ತರ ಪರೀಕ್ಷೆ ವರದಿಯು ಈ ಸಾವಿನ ಹಿಂದಿನ ಕಹಾನಿಯನ್ನು ಬಹಿರಂಗಪಡಿಸಿತು.

ADVERTISEMENT
ADVERTISEMENT

ತನಿಖೆಯಲ್ಲಿ ತಿಳಿದುಬಂದ ಪ್ರಕಾರ, ಸತೀಶ್ ಯಾದವ್ ಬಂಡೆಪಾಳ್ಯದಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಈತನ ಸ್ನೇಹಿತ ಬೀರೇಂದ್ರ ಯಾದವ್‌ಗೆ ಒಬ್ಬ ಮಹಿಳೆಯೊಂದಿಗೆ ಅಕ್ರಮ ಸಂಬಂಧವಿತ್ತು. ಈ ಸಂಬಂಧದ ಬಗ್ಗೆ ಶೈಲೆಂದ್ರ ಯಾದವ್ ಎಲ್ಲರಿಗೂ ತಿಳಿಸುತ್ತಿದ್ದ. ಇದರಿಂದ ಕುಪಿತನಾದ ಬೀರೇಂದ್ರ, ಶೈಲೆಂದ್ರನನ್ನು ಕೊಲೆ ಮಾಡಲು ಯೋಜನೆ ರೂಪಿಸಿದ.

ಕಳೆದ ಬುಧವಾರ ರಾತ್ರಿ, ಬೀರೇಂದ್ರ ತನ್ನ ಸ್ನೇಹಿತರಾದ ಸತೀಶ್ ಮತ್ತು ಅರುಣ್ ಯಾದವ್ ಜೊತೆಗೆ ಶೈಲೆಂದ್ರನನ್ನು ಸತೀಶ್‌ನ ಮನೆಗೆ ಕರೆಸಿಕೊಂಡಿದ್ದ. ಎಣ್ಣೆ ಪಾರ್ಟಿಯ ನೆಪದಲ್ಲಿ ಶೈಲೆಂದ್ರನ ಮೇಲೆ ಕೈಯಿಂದ ತೀವ್ರವಾಗಿ ಹಲ್ಲೆ ಮಾಡಿ, ಅವನನ್ನು ಕೊಲೆಗೈದರು. ಶೈಲೆಂದ್ರನ ಎದೆಗೆ ಬಲವಾದ ಏಟು ಬಿದ್ದಿದ್ದು, ಇದೇ ಅವನ ಸಾವಿಗೆ ಕಾರಣವಾಯಿತು ಎಂದು ಮರಣೋತ್ತರ ವರದಿ ದೃಢಪಡಿಸಿದೆ.

ಶವವನ್ನು 24 ಗಂಟೆ ಮನೆಯಲ್ಲಿಟ್ಟಿದ್ದ ಆರೋಪಿ

ಕೊಲೆಯಾದ ಬಳಿಕ, ಗಾಬರಿಯಾದ ಬೀರೇಂದ್ರ ಮತ್ತು ಅರುಣ್ ಮನೆಯಿಂದ ಪರಾರಿಯಾದರು. ಆದರೆ, ಶವವನ್ನು ಏನು ಮಾಡಬೇಕೆಂದು ತಿಳಿಯದ ಸತೀಶ್, 24 ಗಂಟೆಗಳ ಕಾಲ ಮೃತದೇಹವನ್ನು ಮನೆಯಲ್ಲಿಯೇ ಇಟ್ಟಿದ್ದ. ಶವದಿಂದ ವಾಸನೆ ಬರಲು ಆರಂಭವಾದಾಗ, ಮನೆಯ ಮಾಲೀಕರಿಗೆ ವಿಷಯ ತಿಳಿಸಿ, ಬಳಿಕ ಪೊಲೀಸರಿಗೆ ಕರೆ ಮಾಡಿದ್ದಾನೆ. ಆರಂಭದಲ್ಲಿ ಇದು ಆಕಸ್ಮಿಕ ಸಾವು ಎಂದು ತೋರಿಸಲು ಯತ್ನಿಸಿದ್ದಾನೆ. ಆದರೆ, ಪೊಲೀಸರ ತನಿಖೆಯಲ್ಲಿ ಸತ್ಯ ಬಯಲಾಯಿತು.

ಬಂಡೆಪಾಳ್ಯ ಪೊಲೀಸರು ಕೊಲೆ ಪ್ರಕರಣ ದಾಖಲಿಸಿ, ಸತೀಶ್ ಯಾದವ್ ಮತ್ತು ಅರುಣ್ ಯಾದವ್‌ನನ್ನು ಬಂಧಿಸಿದ್ದಾರೆ. ಪ್ರಮುಖ ಆರೋಪಿ ಬೀರೇಂದ್ರ ಯಾದವ್ ಪರಾರಿಯಾಗಿದ್ದು, ಪೊಲೀಸರು ಆತನಿಗಾಗಿ ತೀವ್ರ ಹುಡಿಕಾಟ ನಡೆಸುತ್ತಿದ್ದಾರೆ. ಈಗ ಇಬ್ಬರು ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಗಾಗಿದ್ದಾರೆ.

Exit mobile version