ಪತ್ನಿ ‘ಎಣ್ಣೆ’ ತಂದು ಕೊಡಲಿಲ್ಲವೆಂದು ಕಾರವಾರದ ಆಟೋ ಚಾಲಕ ನೇಣಿಗೆ ಶರಣು

BeFunky collage (32)

ಅತಿಯಾದ ಮದ್ಯಪಾನದ ಚಟ ಮನುಷ್ಯನ ವಿವೇಚನೆಯನ್ನು ಹೇಗೆ ನಾಶಪಡಿಸುತ್ತದೆ ಎಂಬುದಕ್ಕೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕದ್ರಾದಲ್ಲಿ ನಡೆದ ಈ ದಾರುಣ ಘಟನೆಯೇ ಸಾಕ್ಷಿ. ಲಿವರ್ ಸೋಂಕಿನಿಂದ ಬಳಲುತ್ತಿದ್ದರೂ ಮದ್ಯ ಸಿಗಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಮನನೊಂದು ಆಟೋ ಚಾಲಕನೊಬ್ಬ ನೇಣಿಗೆ ಶರಣಾಗಿದ್ದಾರೆ.

ಘಟನೆಯ ಹಿನ್ನೆಲೆ :

ಕದ್ರಾದ ಚರ್ಚ್‌ವಾಡ ನಿವಾಸಿ ಡುಮಿಂಗ್ ಮನ್ವೇಲ್ ರೊಡ್ರಿಗಿಸ್ (49) ಮೃತಪಟ್ಟ ದುರ್ದೈವಿ. ವೃತ್ತಿಯಲ್ಲಿ ಆಟೋ ಚಾಲಕರಾಗಿದ್ದ ಡುಮಿಂಗ್ ದೀರ್ಘಕಾಲದಿಂದ ಮದ್ಯದ ಚಟಕ್ಕೆ ದಾಸರಾಗಿದ್ದರು. ಅತಿಯಾದ ಕುಡಿತದಿಂದಾಗಿ ಅವರ ಲಿವರ್ (ಯಕೃತ್ತು) ಹಾಳಾಗಿದ್ದು, ವೈದ್ಯರು ‘ಇನ್ನು ಮುಂದೆ ಮದ್ಯ ಸೇವಿಸಿದರೆ ಜೀವಕ್ಕೆ ಅಪಾಯ’ ಎಂದು ಎಚ್ಚರಿಸಿದ್ದರು. ಇದೇ ಕಾರಣಕ್ಕೆ ಅವರನ್ನು ಕುರ್ನಿಪೇಟೆಯ ಆಯುರ್ವೇದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು.

ಪತ್ನಿಯ ನಿರಾಕರಣೆ ಆಸ್ಪತ್ರೆಯಿಂದ ಮನೆಗೆ ಓಡಿಬಂದ ಪತಿ :

ಆಸ್ಪತ್ರೆಯಲ್ಲಿದ್ದಾಗಲೂ ಡುಮಿಂಗ್ ಅವರಿಗೆ ಕುಡಿತದ ವ್ಯಾಮೋಹ ಬಿಟ್ಟಿರಲಿಲ್ಲ. ತನಗೆ ಮದ್ಯ ತಂದುಕೊಡುವಂತೆ ಪತ್ನಿ ಅನಿತಾ ಅವರಲ್ಲಿ ಹಠ ಹಿಡಿದಿದ್ದರು. ಪತಿಯ ಜೀವ ಉಳಿಸಬೇಕೆಂಬ ಹಂಬಲದಿಂದ ಪತ್ನಿ ಮದ್ಯ ನೀಡಲು ಕಟ್ಟುನಿಟ್ಟಾಗಿ ನಿರಾಕರಿಸಿದ್ದರು. ಇದರಿಂದ ತೀವ್ರ ಬೇಸರಗೊಂಡ ಡುಮಿಂಗ್, ಶುಕ್ರವಾರ ಬೆಳಗಿನ ಜಾವ ಯಾರಿಗೂ ತಿಳಿಸದೆ ಆಸ್ಪತ್ರೆಯಿಂದ ಮನೆಗೆ ಬಂದಿದ್ದಾರೆ.

ಕೇಬಲ್ ವೈರ್‌ನಿಂದ ನೇಣಿಗೆ ಶರಣು :

ಮನೆಗೆ ಮರಳಿದ ಡುಮಿಂಗ್, ಅಂಗಳದ ಶೆಡ್‌ನ ಜಂತಿಗೆ ಕೇಬಲ್ ವೈರ್ ಬಳಸಿ ನೇಣು ಬಿಗಿದುಕೊಂಡಿದ್ದಾರೆ. ಬೆಳಿಗ್ಗೆ ಮನೆಯವರು ಎದ್ದು ನೋಡಿದಾಗ ಡುಮಿಂಗ್ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮದ್ಯದ ಚಟ ಒಂದು ಸುಂದರ ಕುಟುಂಬವನ್ನು ಬೀದಿಗೆ ತಂದಿರುವುದು ಸ್ಥಳೀಯರಲ್ಲಿ ವಿಷಾದ ಮೂಡಿಸಿದೆ.

Exit mobile version