ಗೋ ಸೇವಾ ಗತಿವಿಧಿಯ ವತಿಯಿಂದ ಹುಬ್ಬಳ್ಳಿಯಲ್ಲಿ ಗೋ ಆಧಾರಿತ ಸದ್ವಿಚಾರಗೋಷ್ಠಿ

WhatsApp Image 2026 05 12 at 5.36.05 PM

ಹುಬ್ಬಳ್ಳಿ: ಗೋವು ನಮ್ಮ ಸಂಸ್ಕೃತಿ ಮತ್ತು ಕೃಷಿಯ ಆಧಾರವೆಂದು ಭಾವಿಸುವ ಗೋಭಕ್ತರು ಮತ್ತು ರೈತರಿಗೆ ವಿಶೇಷ ಕಾರ್ಯಕ್ರಮವೊಂದು ಹುಬ್ಬಳ್ಳಿಯಲ್ಲಿ ಆಯೋಜನೆಯಾಗುತ್ತಿದೆ.

ಗೋ ಸೇವಾ ಗತಿವಿಧಿಯ ವತಿಯಿಂದ ಗೋ ಆಧಾರಿತ ಸದ್ವಿಚಾರಗೋಷ್ಠಿ ನಡೆಯಲಿದೆ. ಈ ಕಾರ್ಯಕ್ರಮವನ್ನು ಶ್ರೀ ಕೆ.ಇ.ಎನ್. ರಾಘವನ್ ಜೀ ಅವರು ನಡೆಸಿಕೊಡುತ್ತಾರೆ.

ಶ್ರೀ ಕೆ.ಇ.ಎನ್. ರಾಘವನ್ ಜೀ ಪರಿಚಯ

ಚೆನ್ನೈ ಮೂಲದ ಶ್ರೀ ಕೆ.ಇ.ಎನ್. ರಾಘವನ್ ಅವರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಪೂರ್ಣಾವಧಿ ಕಾರ್ಯಕರ್ತರಾಗಿ ಬಿಹಾರದಲ್ಲಿ 5 ವರ್ಷಗಳು ಮತ್ತು ಅಸ್ಸಾಂನಲ್ಲಿ 10 ವರ್ಷಗಳ ಕಾಲ ಪ್ರಾಂತ ಸಂಘಟನಾ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ.

ವಿಶ್ವಹಿಂದೂ ಪರಿಷತ್ತಿನ ಏಕಲ ವಿದ್ಯಾಲಯಗಳ ಕೇಂದ್ರ ಟೋಳಿ ಪ್ರಶಿಕ್ಷಣ ಪ್ರಮುಖರಾಗಿ 2001ರಿಂದ 2015ರವರೆಗೆ ಕಾರ್ಯನಿರ್ವಹಿಸಿದ್ದಾರೆ. 2008-09ರಲ್ಲಿ ವಿಶ್ವಮಂಗಲ ಗೋಗ್ರಾಮ ಯಾತ್ರೆಯ ಯಾತ್ರಾ ಪ್ರಮುಖರಾಗಿದ್ದರು.

2016ರಿಂದ ಗೋ ಸೇವಾ ಗತಿವಿಧಿಯ ಅಖಿಲ ಭಾರತೀಯ ಪ್ರಶಿಕ್ಷಣ ಪ್ರಮುಖರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಗೋ ಆಧಾರಿತ ಸಾವಯವ ಕೃಷಿ, ಲಂಬ ಕೃಷಿ, ಬಹುಮಿಶ್ರ ಬೆಳೆಗಳು, ಗವ್ಯೋತ್ಪನ್ನಗಳ ಶಾಸ್ತ್ರೀಯ ತಯಾರಿಕೆಯಲ್ಲಿ ತಜ್ಞರಾಗಿದ್ದಾರೆ.

ಇವರು ಭಾರತದಾದ್ಯಂತ 85,000ಕ್ಕೂ ಹೆಚ್ಚು ರೈತರಿಗೆ ತರಬೇತಿ ನೀಡಿದ್ದಾರೆ. ಭಾರತೀಯ ಪ್ರಾಚೀನ ಗ್ರಂಥಗಳಲ್ಲಿ ಉಲ್ಲೇಖಿತವಾದ ಗೋವಿನ ಮಹತ್ವವನ್ನು ಆಧುನಿಕ ವಿಜ್ಞಾನದೊಂದಿಗೆ ಸಂಯೋಜಿಸಿ ಉಪನ್ಯಾಸಗಳನ್ನು ನೀಡುವುದರಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ.

ಕಾರ್ಯಕ್ರಮ ವಿವರ :

ದಿವ್ಯ ಸಾನಿಧ್ಯ: ಅಮ್ಮಿನಭಾವಿ ಶ್ರೀ ಸಂಸ್ಥಾನ ಪಂಚಗ್ರಹ ಹಿರೇಮಠದ ಪರಮಪೂಜ್ಯ ಶ್ರೀ ಶಾಂತಲಿಂಗ ಮಹಾಸ್ವಾಮಿಗಳು

ಮಹಾಪೋಷಕರು: ಖ್ಯಾತ ಉದ್ಯಮಿ ಡಾ. ವಿ.ಎಸ್.ವಿ. ಪ್ರಸಾದ್

ಈ ಕಾರ್ಯಕ್ರಮದಲ್ಲಿ ಗೋಭಕ್ತರು, ರೈತರು, ಕೃಷಿ ಉತ್ಸಾಹಿಗಳು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರಯೋಜನ ಪಡೆಯಬೇಕೆಂದು ಆಯೋಜಕರು ವಿನಂತಿಸಿದ್ದಾರೆ. ಕಾರ್ಯಕ್ರಮಕ್ಕೆ 10 ನಿಮಿಷ ಮುಂಚೆಯೇ ಬರುವಂತೆ ಸೂಚಿಸಲಾಗಿದೆ.

Exit mobile version