ಹುಬ್ಬಳ್ಳಿ : ವಿದ್ಯಾರ್ಥಿಗಳಿಗೆ ಖಗೋಳ ವಿಜ್ಞಾನ ಹಾಗೂ ಅಂತರಿಕ್ಷದ ಬಗ್ಗೆ ಹೆಚ್ಚಿನ ಅರಿವು ಮೂಡಿಸಲು ಹುಬ್ಬಳ್ಳಿಯಲ್ಲಿ ಪೂರ್ಣ ಪ್ರಮಾಣದ ತಾರಾಲಯ ಅವಶ್ಯವಿದೆ. ಮುಂದಿನ ಒಂದು ವರ್ಷದೊಳಗೆ ಆ ಕನಸು ನನಸಾಗಲಿದ್ದು, ಈಗಾಗಲೇ ಈ ಕುರಿತು ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರ ಜತೆ ಸಹ ಚರ್ಚಿಸಿರುವುದಾಗಿ ಸ್ವರ್ಣಾ ಸಮೂಹದ ವ್ಯವಸ್ಥಾಪಕ ನಿರ್ದೇಶಕ ಡಾ.ಚಿಗರುಪಾಟಿ ವಿ.ಎಸ್.ವಿ ಪ್ರಸಾದ್ ಹೇಳಿದರು.
ಹಿಮಾಲಯನ್ ಸ್ಪೇಸ್ ಸೆಂಟರ್ ನಲ್ಲಿ ರಾಷ್ಟ್ರೀಯ ವಿಜ್ಞಾನ ದಿನ ಹಾಗೂ ಅಂತರರಾಷ್ಟ್ರೀಯ ಮಹಿಳಾ ದಿನ 2026 ಅಂಗವಾಗಿ ವಿಸ್ತೃತ ಸ್ಪೇಸ್ ಲ್ಯಾಬ್ ಉದ್ಘಾಟಿಸಿ ಮತ್ತು ಪೋರ್ಟಬಲ್ ಪ್ಲಾನೆಟೇರಿಯಂ ಡೋಮ್ ಅನಾವರಣ ಮಾಡಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಚಿಂತನೆ ಮತ್ತು ಆಂತರಿಕ್ಷ ಶಿಕ್ಷಣದ ಹೆಚ್ಚಿನ ಆಸಕ್ತಿ ಮೂಡಿಸುತ್ತಿರುವ ಹಿಮಾಲಯನ್ ಸ್ಪೇಸ್ ಸೆಂಟರ್ ಕಾರ್ಯವನ್ನ ಶ್ಲಾಘಿಸಿದ ಅವರು ಮುಂಬರುವ ದಿನಗಳಲ್ಲಿ ಜಾಗತಿಕ ತಾಪಮಾನ ಇನ್ನಷ್ಟು ಹೆಚ್ಚಲಿದ್ದು ಎಲ್ಲಾ ವಿದ್ಯಾರ್ಥಿಗಳು ಪರಿಸರ ಉಳಿಸುವ ಪ್ರಯತ್ನ ಮಾಡಬೇಕಯು ಎಂದು ಮನವಿ ಮಾಡಿದರು.
ಪೋರ್ಟಬಲ್ ಪ್ಲಾನೆಟೇರಿಯಂ ಮೂಲಕ ಖಗೋಳ ವಿಜ್ಞಾನ ಪ್ರದರ್ಶನಗಳು ಹಾಗೂ ಅಂತರಿಕ್ಷ ಅನ್ವೇಷಣೆಯ ಅನುಭವಗಳನ್ನು ತಲುಪಿಸುವ ಉದ್ದೇಶ ಹೊಂದಿದ್ದು ಇದು ಗ್ರಾಮೀಣ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗಲಿದೆ ಎಂದರು.
ಗೌರವ ಅತಿಥಿಯಾಗಿ ಹಿರಿಯ ಮುಖಂಡ ಎಚ್. ಎಸ್. ರೂಗಿ, ಎಚ್ ಎಸ್ಸಿ ಯ ಸಹ-ಸ್ಥಾಪಕಿ ಮತ್ತು ಗ್ಲೋಬಲ್ ಡೈರೆಕ್ಟರ್ ಶ್ರೀಮತಿ ಶ್ರಿದೇವಿ ರೂಗಿ, ಸಂಸ್ಥೆಯ ಸಹ ಸ್ಥಾಪಕ ವೀರೇಶ್ ಪಾಟೀಲ್ ಇತರರು ವೇದಿಕೆ ಮೇಲಿದ್ದರು.
ವಿಜ್ಞಾನ ಶಿಕ್ಷಣವನ್ನು ಪ್ರೇರೆಪಿಸುತ್ತಿರುವ ವಿವಿಧ ಶಾಲೆಗಳ ವಿಜ್ಞಾನ ಶಿಕ್ಷಕರಾದ ಮಮತಾ ಗೋಂಡ್ಕರ್ , ವಾಣಿ ಡಿ, ರಾಜೇಶ್ವರಿ ಶೀಗಿಹಳ್ಳಿಮಠ, ಗೀತಾಂಜಲಿ ಲೋಖಂಡೆ ಹಾಗೂ ಲಿಂಗರಾಜ ರಾಮಾಪುರ ಇವರುಗಳಿಗೆ ಸ್ಟೆಲ್ಲರ್ ಮೆಂಟರ್ ಪ್ರಶಸ್ತಿ ಪ್ರದಾನ ಮಾಡಲಾಯಿತು.
