ಬಸ್‌ನಲ್ಲಿ ಮಹಿಳಾ ಕಳ್ಳಿಯರ ಕೈಚಳಕ: ಹಣ, ಚಿನ್ನಾಭರಣ ದೋಚಿದ ಕಿಡಿಗೇಡಿಗಳು!

Web 2025 05 16t162554.781

ವರದಿ: ಮೂರ್ತಿ ಬೀರಯ್ಯನಪಾಳ್ಯ ಗ್ಯಾರಂಟಿ ನ್ಯೂಸ್ ನೆಲಮಂಗಲ

ತುಮಕೂರು ಜಿಲ್ಲೆಯ ನಿಟ್ಟೂರು ಬಳಿಯ ದೊಡ್ಡಗುಣಿ ಗ್ರಾಮಕ್ಕೆ ತೆರಳುತ್ತಿದ್ದ ಬೆಂಗಳೂರು ಮಂಜುನಾಥನಗರ ನಿವಾಸಿ ನೇತ್ರಾವತಿ ಡಿ.ಕೆ. ಅವರಿಗೆ ಬಸ್ ಹತ್ತುವ ವೇಳೆಯಲ್ಲಿ ಮಹಿಳಾ ಕಳ್ಳಿಯರ ತಂಡ ಚಿನ್ನಾಭರಣ ಹಾಗೂ ನಗದು ದೋಚಿದ ಘಟನೆ ನಡೆದಿದೆ.

ಮಧ್ಯಾಹ್ನ ಸುಮಾರು 3:30ರ ವೇಳೆ, ನೇತ್ರಾವತಿ ಅವರು ತಮ್ಮ ಮಗನೊಂದಿಗೆ ತುಮಕೂರು ಕಡೆಗೆ ಹೋಗುವ ಕೆಎಸ್‌ಆರ್‌ಟಿಸಿ ಬಸ್ (ನಂ. KA-06-F-1111) ಹತ್ತಲು 8ನೇ ಮೈಲಿನ ಬಸ್ ನಿಲ್ದಾಣಕ್ಕೆ ಬಂದಿದ್ದರು. ಆ ಸಮಯದಲ್ಲಿ, ಇಬ್ಬರು ಅನಾಮಿಕ ಮಹಿಳೆಯರು ಬಸ್ ಹತ್ತುವಂತೆ ನೂಕುನುಗ್ಗಲಿನಲ್ಲಿ ತಳ್ಳಾಡಿದಾಗ, ನೇತ್ರಾವತಿ ಅವರ ಕೈಯಲ್ಲಿದ್ದ ವ್ಯಾನಿಟಿ ಬ್ಯಾಗ್‌ನ ಜಿಪ್ ತೆರೆಯಲಾಗಿದ್ದು, ಅದರೊಳಗಿನ ಚಿನ್ನಾಭರಣ ಹಾಗೂ ನಗದು ಕಳ್ಳತನವಾಗಿದೆ.

ಕಳ್ಳತನವಾದ ವಸ್ತುಗಳು:
ಚಿನ್ನದ ಕೊರಳ ಚೈನ್ (6 ಗ್ರಾಂ), ಕೊರಳ ಮಾಲೆ/ಗುಂಡಿನ ಸರ (6ಗ್ರಾಂ),ಚಿನ್ನದ ಬಳೆ (10 ಗ್ರಾಂ)
ಎರಡು ಚಿನ್ನದ ಉಂಗುರಗಳು (3 ಗ್ರಾಂ), ಚಿನ್ನದ ಕಿವಿಯೋಲೆಗಳ ಜೋಡಿ (3 ಗ್ರಾಂ) ಜೊತೆ 7ಸಾವಿರ ರೂಪಾಯಿ ನಗದು
ಒಟ್ಟು ಕಳೆದುಕೊಂಡ ಮೌಲ್ಯ 2 ಲಕ್ಷಕ್ಕೂ ಹೆಚ್ಚು ಎಂದು ತಿಳಿದುಬಂದಿದೆ.

ಕಳವು ಆದ ತಕ್ಷಣ ನೇತ್ರಾವತಿ ಅವರು ಬಸ್ ಕಂಡಕ್ಟರ್‌ಗೆ ವಿಷಯ ತಿಳಿಸಿದ್ದಾರೆ. ಆದರೆ ಬಸ್ ನಿಲ್ಲಿಸದೇ ನೆಲಮಂಗಲದಲ್ಲಿ ಇಳಿಸಲು ಸೂಚಿಸಲಾಗಿದೆ. ನಂತರ ಅವರು ನೆಲಮಂಗಲ ಪೊಲೀಸ್ ಠಾಣೆಗೆ ದೂರು ನೀಡಿದರೂ, ಪ್ರಕರಣ ಪೀಣ್ಯ ಪೊಲೀಸ್ ಠಾಣೆಯ ವ್ಯಾಪ್ತಿಗೆ ಸೇರಿದ್ದು ಅಲ್ಲಿ ದೂರು ದಾಖಲಿಸಲಾಗಿದೆ.

ಪೀಣ್ಯ ಪೊಲೀಸರು ಈ ಸಂಬಂಧ ತನಿಖೆ ಆರಂಭಿಸಿದ್ದು, ಬಸ್ ನಿಲ್ದಾಣ ಹಾಗೂ ಬಸ್ ಒಳಗಿನ ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ನಡೆಯುತ್ತಿದೆ. ನೂಕುನುಗ್ಗಲಿನಲ್ಲಿ ತನ್ನ ಕಾರ್ಯನಿರ್ವಹಿಸಿದ ಈ ಮಹಿಳಾ ಕಳ್ಳಿಯರ ತಂಡ ಇಡೀ ಬೆಂಗಳೂರನ್ನ ತೀವ್ರ ಭೀತಿಯನ್ನು ಮೂಡಿಸಿದೆ.

ಸಾರ್ವಜನಿಕರು ಎಚ್ಚರಿಕೆಯಿಂದಿರುಬೆಕೆಂಬ ಅಗತ್ಯತೆ ಮತ್ತೊಮ್ಮೆ ಮುನ್ನೆಚ್ಚರಿಕೆಯ ಘಂಟೆಯಾಗಿದೆ. ಸಾರ್ವಜನಿಕ ಸಾರಿಗೆ ಸ್ಥಳಗಳಲ್ಲಿ ಈ ರೀತಿಯ ನಿಗೂಢ ಕಳ್ಳತನಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಜನರು ತಮ್ಮ ವಸ್ತುಗಳನ್ನು ಸುರಕ್ಷಿತವಾಗಿ ಕಾಯ್ದಿರಿಸಬೇಕು ಎಂಬುದು ಪೀಣ್ಯಾ ಪೊಲೀಸರ ಮನವಿಯಾಗಿದೆ.

ವರದಿ: ಮೂರ್ತಿ ಬೀರಯ್ಯನಪಾಳ್ಯ ಗ್ಯಾರಂಟಿ ನ್ಯೂಸ್ ನೆಲಮಂಗಲ

| Reported by: ಮೂರ್ತಿ ಬೀರಯ್ಯನಪಾಳ್ಯ ಗ್ಯಾರಂಟಿ ನ್ಯೂಸ್ ನೆಲಮಂಗಲ
Exit mobile version