ಹಣಕ್ಕಾಗಿ ಮಹಿಳೆಗೆ ಡಿಕ್ಕಿ ಹೊಡೆದು ಕೊಂದ ದುಷ್ಕರ್ಮಿಗಳು! ಕೀ ಕದ್ದು ಮನೆಗೆ ಕನ್ನ ಹಾಕಿದ್ರಾ ಕಿರಾತಕರು!

BeFunky collage (12)

ರಾಜಧಾನಿಯಲ್ಲಿ ಹಣಕ್ಕಾಗಿ ಒಂಟಿ ಮಹಿಳೆಯನ್ನು ಬೈಕ್‌ನಿಂದ ಡಿಕ್ಕಿ ಹೊಡೆದು ಕೊಲ್ಲುವ ಘಟನೆ ನಡೆದಿದೆ. ಇದು ಕೇವಲ ಅಪಘಾತವಲ್ಲ, ಉದ್ದೇಶಪೂರ್ವಕ ಕೊಲೆ ಎಂದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ. ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಕುರುಬರಹಳ್ಳಿ ಪೈಪ್ ಲೈನ್ ರಸ್ತೆಯಲ್ಲಿ ಏಪ್ರಿಲ್ 21ರಂದು ಈ ಘಟನೆ ನಡೆದಿದೆ.

ಕೊಲೆಯ ಆಘಾತಕಾರಿ ವಿವರ ವಿಜಯಲಕ್ಷ್ಮಿ ಎಂಬ ಮಹಿಳೆ ಒಂಟಿಯಾಗಿ ವಾಸವಾಗಿದ್ದರು. ಆರೋಪಿ ಚೇತನ್ ಅವರಿಗೆ ಹಣ ಸಾಲ ಪಡೆದಿದ್ದನಂತೆ. ಆಕೆ ಬಳಿ ಹಣವಿದೆ ಎಂದು ತಿಳಿದ ಚೇತನ್, ಮಂಜುನಾಥ್‌ನೊಂದಿಗೆ ಸೇರಿ ಕೊಲೆಯ ಸ್ಕೆಚ್ ಹಾಕಿದ್ದಾನೆ.

ರಾಕೇಶ್ ಬೈಕ್‌ನಲ್ಲಿ ಬಂದು ವಿಜಯಲಕ್ಷ್ಮಿಗೆ ಉದ್ದೇಶಪೂರ್ವಕ ಡಿಕ್ಕಿ ಹೊಡೆದಿದ್ದಾನೆ. ಅಪಘಾತದ ನಂತರ ಪ್ರದೀಪ್ ಮತ್ತು ಯೋಹಾನ್ ಆಟೋದಲ್ಲಿ ಬಂದು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ವೇಳೆ ಮಂಜುನಾಥ್ ಆಕೆಯ ಪರ್ಸ್‌ನಿಂದ ಮನೆಯ ಕೀಲಿ ಕದ್ದಿದ್ದಾನೆ.

ವಿಜಯಲಕ್ಷ್ಮಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ, ಮಂಜುನಾಥ್ ಆಕೆಯ ಮನೆಗೆ ಕನ್ನ ಹಾಕಿ ಹಣ ಮತ್ತು ಚಿನ್ನಾಭರಣಗಳನ್ನು ಹುಡುಕಿದ್ದಾನೆ. ಮನೆ ಮಾಲೀಕರು ಪ್ರಶ್ನಿಸಿದಾಗ ಅವನು ತಪ್ಪಿಸಿಕೊಂಡಿದ್ದಾನೆ.

ಆರೋಪಿಗಳು ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ: ರಾಕೇಶ್, ಮಂಜುನಾಥ್, ಚೇತನ್, ಪ್ರದೀಪ್ ಮತ್ತು ಯೋಹಾನ್. ಆದರೆ ಮಂಜುನಾಥ್ ಮೇ 5ರಂದು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಅವನ ವಿರುದ್ಧ 6 ಪ್ರಕರಣಗಳು ದಾಖಲಾಗಿದ್ದವು.

ಪೊಲೀಸರು ತನಿಖೆ ಮುಂದುವರಿಸಿದ್ದು, ಈ ಕೊಲೆ ಹಣಕ್ಕಾಗಿ ಯೋಜಿತವಾಗಿ ನಡೆದಿದೆ ಎಂದು ದೃಢಪಡಿಸಿದ್ದಾರೆ. ಈ ಘಟನೆ ಬೆಂಗಳೂರಿನಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ.

Exit mobile version