ಬಿಸಿಲ ಧಗೆಗೆ ಬೇಸತ್ತಿದ ಸಿಟಿ ಮಂದಿಗೆ ತಂಪೆರೆದಿದ್ದಾನೆ ವರುಣ. ನಿನ್ನೆ ಸುರಿದ ಭಾರೀ ಮಳೆಗೆ ಸಿಲಿಕಾನ್ ಸಿಟಿ ಮಂದಿ ತತ್ತರಿಸಿ ಹೋಗಿದ್ದಾರೆ. ರಾಜಧಾನಿಯಲ್ಲಿ ಸುರಿದ ಮಳೆ, ಗಾಳಿಯಿಂದಾಗಿ ಅನೇಕ ಮರಗಳು ನೆಲಕ್ಕೆ ಉರಳಿದವು. ನಗರದ ಅನೇಕ ಭಾಗಗಳಲ್ಲಿ 10ಕ್ಕೂ ಹೆಚ್ಚು ಮರಗಳು ಧರೆಗಿಳಿದಿವೆ. ಹಾಗಾದ್ರೆ ಬೆಂಗಳೂರಿನಲ್ಲಿ ಮಳೆ ತಂದ ಅವಾಂತರ.
ಸದ್ಯ ಬೆಂಗಳೂರು ಸಿಟಿ ಕೂಲ್ ಆಗಿದೆ. ವಿಕೇಂಡ್ಗೆ ನಗರಕ್ಕೆ ಎಂಟ್ರಿ ಕೊಟ್ಟಿದ್ದ ಮಳೆರಾಯ ಧಾರಕಾರವಾಗಿ ಸುರಿದಿದ್ದಾನೆ. ನಿನ್ನೆ ನಗರದಲ್ಲಿ ಗುಡುಗು ಸಹಿತ 11.8 MM ಮಳೆಯಾಗಿದೆ. ನಮ್ಮಬೆಂಗಳೂರು ಏರ್ಪೋರ್ಟ್ ಭಾಗದಲ್ಲಿ ಗುಡುಗು ಸಹಿತ 38.6 MM ಮಳೆಯಾಗಿದೆ ಇನ್ನು ಎಲೆಕ್ಟ್ರಾನಿಕ್ ಸಿಟಿಯಲ್ಲಿ 13.5 MM ಮಳೆಯಾಗಿದೆ. ಹೆಸರಘಟ್ಟ 1.5 MM ಬೆಂಗಳೂರಿನ ದಕ್ಷಿಣ, ಮಹದೇವಪುರ ಹಾಗೂ ದಾಸರಹಳ್ಳಿಯ ಕೆಲ ಭಾಗಗಳಲ್ಲಿ 15 mm ನಿಂದ 64 mm ಮಳೆಯಾಗಿದೆ. ಬೆಂಗಳೂರಿನ ಉಳಿದ ಭಾಗಗಳಲ್ಲಿ 2.5 mm ನಿಂದ 15.5 mm ಮಳೆಯಾಗಿದೆ.
ಹಾಟ್ ಸಿಟಿಯಾಗಿದ್ದ ಬೆಂದಕಾಳುರಲ್ಲಿ ಮಳೆ ಸೃಷ್ಟಿಸಿದ ಅವಾಂತರ ಒಂದಾ..ಎರಡಾ? ನಿನ್ನೆ ಒಂದು ದಿನ ಸುರಿದ ಮಳೆಗೆ ಬೆಂಗಳೂರು ತತ್ತರಿಸಿದೆ. ಮಳೆಯಿಂದಾಗಿ ನಗರದಲ್ಲಿ ನೆಲಕ್ಕೂರುಳಿದ ಮರಗಳು ನಗರದ ಹಲವೆಡೆ ಧಾರಕಾರ ಮಳೆ ಆಗಿದೆ.
ಸದಾಶಿವನಗರ,ಬನಶಂಕರಿ, ಜಯನಗರ, ತ್ಯಾಗರಾಜನಗರ, ಕೋಣನಕುಂಟೆ, ಯಲಹಂಕ, ಸುಬ್ರಮಣ್ಯ ನಗರ ಸೇರಿ 10 ಕ್ಕೂ ಹೆಚ್ಚು ಕಡೆ ಮರಗಳು ನೆಲಕ್ಕುರುಳಿದೆ. ಮನೆಗಳ ಕಾಂಪೌಂಡ್, ಗೇಟ್, ರಸ್ತೆಗಳಲ್ಲಿ ಮಧ್ಯೆಯಲ್ಲಿ ಬಿದ್ದಿರುವ ಮರಗಳು.
ವೀಕೆಂಡ್ ಎಂಜಾಯ್ ಮಾಡಬೇಕು ಅಂತಿದ್ದ ಜನರಿಗೆ ವರುಣ ಅಡ್ಡಿಯಾಗಿದ್ದಾನೆ. ಇನ್ನು 5 ದಿನಗಳ ಕಾಲ ರಾಜ್ಯದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹಾವಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇನ್ನು ರಸ್ತೆಯಲ್ಲಿ ಓಡಾಡಬೇಕಾದರೆ ಸ್ವಲ್ಪ ಗಮನದಿಂದ ಸಂಚಾರ ಮಾಡಿ.