ಆನೇಕಲ್ ಜನತೆಗೆ ಕಾಂಗ್ರೆಸ್ ಅಚ್ಚು ಮೆಚ್ಚು..!

ಗ್ಯಾರಂಟಿ ನ್ಯೂಸ್ ಮೂಡ್ ಆಫ್ ಕರ್ನಾಟಕ ಮೆಗಾ ಸರ್ವೆ

Untitled design 2025 04 05t211457.062

ಗ್ಯಾರಂಟಿ ನ್ಯೂಸ್ ಸ್ಯಾಟಲೈಟ್ ಸುದ್ದಿ ವಾಹಿನಿ ಮೂಡ್ ಆಫ್ ಕರ್ನಾಟಕ ಎಂಬ ಮೆಗಾ ಸರ್ವೆ ನಡೆಸುತ್ತಿದೆ. ಈ ಸಮೀಕ್ಷೆಯಲ್ಲಿ ರಾಜ್ಯದ ಎಲ್ಲಾ 224 ಕ್ಷೇತ್ರಗಳಲ್ಲಿ ಸದ್ಯದ ಸ್ಥಿತಿಗತಿ ಹೇಗಿದೆ ಅನ್ನೋದ್ರ ಕುರಿತಾಗಿ ಜನರ ನಾಡಿಮಿಡಿತ ಗ್ರಹಿಸುವ ಕೆಲಸ ಮಾಡ್ತಿದೆ.

ಎಸ್ಸಿ ಮೀಸಲು ಕ್ಷೇತ್ರವಾಗಿರುವ ಆನೇಕಲ್ ನಲ್ಲಿ ಕಳೆದ 2023 ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನ ಬಿ. ಶಿವಣ್ಣ 134,797 (54%), ಬಿಜೆಪಿಯ ಹುಲ್ಲಳ್ಳಿ ಶ್ರೀನಿವಾಸ್ 103,472 (41%), ಜೆಡಿಎಸ್ ನ ಕೆ.ಪಿ. ರಾಜು 6,415 ( 3 %) ಮತಗಳಿಸುವ ಮೂಲಕ ಬಿ.ಶಿವಣ್ಣ 31,325 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

ಆನೇಕಲ್ ಕ್ಷೇತ್ರದ ಚಿತ್ರಣ..
ಬೆಂಗಳೂರಿನ ರಾಜಕೀಯದ ಮೇಲೂ ಪರಿಣಾಮ ಬೀರಬಲ್ಲ ಕ್ಷೇತ್ರವಾಗಿರುವ ಆನೇಕಲ್ ಎಸ್ಸಿ ಮೀಸಲು ಆಗಿದ್ದು, ಸತತ 3 ಚುನಾವಣೆಗಳಲ್ಲಿ ಕಾಂಗ್ರೆಸ್ ನ ಬಿ ಶಿವಣ್ಣ ಗೆಲುವು ಸಾಧಿಸಿದ್ದಾರೆ. ವಲಸಿಗ ಮತದಾರರೇ ಹೆಚ್ಚಿರುವ ಆನೇಕಲ್ ಕ್ಷೇತ್ರದಲ್ಲಿ ಪರಿಶಿಷ್ಟ ಪಂಗಡ, ಮುಸ್ಲಿಂ,ಒಕ್ಕಲಿಗ. ಕುರುಬ ಸಮುದಾಯದ ಮತದಾರರು ನಿರ್ಣಾಯಕ ಪಾತ್ರವಹಿಸುತ್ತಿದ್ದಾರೆ.

ಮೂಡ್ ಆಫ್ ಕರ್ನಾಟಕ : ಆನೇಕಲ್ ಮೂಡ್ ಹೇಗಿದೆ.?
ಶಾಸಕ ಎಂ.ಶಿವಣ್ಣ ಸರಳ ಸಜ್ಜನಿಕೆ ವ್ಯಕ್ತಿಯಾಗಿದ್ದು, ಕ್ಷೇತ್ರದ ಪ್ರತಿ ಹಳ್ಳಿ, ಹಳ್ಳಿಯೂ ಶಿವಣ್ಣಗೆ ಪರಿಚಿತವಾಗಿದೆ. ಇನ್ನು ಸರ್ಕಾರದ ಗ್ಯಾರಂಟಿ ಯೋಜನೆಗಳು ಶ್ರೀರಕ್ಷೆ ಆಗುವುದರಲ್ಲೂ ಯಾವುದೇ ಅನುಮಾನವಿಲ್ಲ. ಬಿಜೆಪಿ ಸಹ ಪ್ರಾಬಲ್ಯ ಹೊಂದಿದ್ದು, ಒಳ್ಳೆಯ ಫೈಟ್ ನೀಡುವ ಕ್ಷೇತ್ರ ವಾಗಿದ್ದರು. ಅಭ್ಯರ್ಥಿ ಆಯ್ಕೆಯ ಗೊದಲದಿಂದ ಹಿನ್ನಡೆ ಸಾಧಿಸಿದೆ. ಒಂದು ವೇಳೆ ಬಿಜೆಪಿ ಇಲ್ಲಿ ಒಳ್ಳೆಯ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದರೆ ಕಾಂಗ್ರೆಸ್ ಗೆ ಪ್ರಬಲ ಪೈಪೋಟಿ ನೀಡಬಹುದು.

ರಂಟಿ ನ್ಯೂಸ್ ನ ಮೂಡ್ ಆಫ್ ಕರ್ನಾಟಕ ಸರ್ವೆ ಆನೇಕಲ್ ಕ್ಷೇತ್ರದಲ್ಲಿ ಪರಿಶಿಷ್ಟ ಪಂಗಡ, ಮುಸ್ಲಿಂ ಹಾಗೂ ಕುರುಬ ಸಮುದಾಯದ ಮತಗಳು ಹೆಚ್ಚಿರುವುದರಿಂದ ಕಾಂಗ್ರೆಸ್ ಪರ ಜನ ಒಲವು ಹೊಂದಿದ್ದಾರೆ.

ಆನೇಕಲ್ ಕ್ಷೇತ್ರದ ಆಕಾಂಕ್ಷಿಗಳು ಯಾರು.?
ಆನೇಕಲ್ ಆಕಾಂಕ್ಷಿಗಳನ್ನೂ ನೋಡುವುದಾದರೆ ಸತತ 3 ಬಾರಿ ಗೆದ್ದಿರುವ ಎಂ. ಶಿವಣ್ಣ ಕಾಂಗ್ರೆಸ್ ನಿಂದ ಸ್ಪರ್ಧಿಸಿದರೆ, ಬಿಜೆಪಿಯಿಂದ ಹುಲ್ಲಳ್ಳಿ ಶ್ರೀನಿವಾಸ್, ಸಂದೀಪ್ ಮತ್ತು ಜೆಡಿಎಸ್ ನಿಂದ ಕೆ.ಪಿ. ರಾಜು ಆಕಾಂಕ್ಷಿಗಳಾಗಿದ್ದಾರೆ.

ನಿಮ್ಮ ನೆಚ್ಚಿನ ಗ್ಯಾರಂಟಿ ನ್ಯೂಸ್ ಈ ಕೆಳಕಂಡ ಕೇಬಲ್ & ಡಿಟಿಎಚ್ ನೆಟ್ ವರ್ಕ್ ಗಳಲ್ಲಿ ಲಭ್ಯ..

Exit mobile version