ಆಪ್ ಕಿ ಅದಾಲತ್‌ನಲ್ಲಿ ಯಶ್ ಗೆದ್ದ ‘ಜನರ ಅದಾಲತ್’

ಯಶ್ ಸಂಭಾವನೆ ಕೇಳಿ ಟ್ರೇಡ್ ಪಂಡಿತರು ಶಾಕ್..!

ಖರ್ಗೆ (4)

ರಾಕಿಂಗ್ ಸ್ಟಾರ್ ಅಂದ್ರೆ ಬರೀ ಸ್ಯಾಂಡಲ್‌ವುಡ್ ಕಿಂಗ್ ಅಲ್ಲ, ಇಡೀ ಇಂಡಿಯಾದ ಬಾಕ್ಸ್ ಆಫೀಸ್ ಶೇಕರ್.  ಆಪ್ ಕಿ ಅದಾಲತ್ ಕಟಕಟೆಯಲ್ಲಿ ಕೂತು ಯಶ್ ಕೊಟ್ಟ ಒಂದೊಂದು ಆನ್ಸರ್‌ಗೆ ಇಡೀ ದೇಶವೇ ಅಚ್ಚರಿಗೊಂಡಿದೆ. ಯಶ್ ಗೆ 50 ಕೋಟಿ ಸಂಭಾವನೆ ಅಲ್ವಾoತೆ, ಅಭಿಮಾನಿಯ ಅಂತ್ಯಕ್ರಿಯೆಗೆ ಯಶ್ ಹೋಗಿಲ್ಲ ಯಾಕೆ? ಯಾವುದಕ್ಕೂ ಹಿಂಜರಿಯದೆ ರಾಕಿ ಭಾಯ್ ಕೊಟ್ಟ ಆ ಉತ್ತರದ ಕಂಪ್ಲೀಟ್ ಸ್ಟೋರಿ ಇಲ್ಲಿದೆ ನೋಡಿ…

ಒಂದಾನೊಂದು ಕಾಲದಲ್ಲಿ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯೋ ನಟರ ಲಿಸ್ಟ್‌ನಲ್ಲಿ ದಕ್ಷಿಣ ಭಾರತದ ಕೆಲವು ನಟರು ಹಾಗೂ ಬಾಲಿವುಡ್ ಮಂದಿಯದ್ದೇ ಹವಾ ಇತ್ತು. ಆದ್ರೆ ಈಗ ಆ ಲೆಕ್ಕಾಚಾರನೆಲ್ಲಾ ಬ್ರೇಕ್ ಮಾಡಿದ್ದಾರೆ ಆ ಒಬ್ಬ ಕನ್ನಡಿಗ. ರಾಕಿಂಗ್ ಸ್ಟಾರ್ ಯಶ್ ಎಂಟ್ರಿ ಕೊಟ್ಟ ಮೇಲೆ ಆ ರೇಸ್‌ ರೂಟ್ ಸಂಪೂರ್ಣ ಬದಲಾಗಿದೆ. ಅತಿ ಹೆಚ್ಚು ಸಂಭಾವನೆ ಪಡೆಯೋ ಇಂಡಿಯನ್ ಸೂಪರ್‌ಸ್ಟಾರ್‌ಗಳ ಸಾಲಿನಲ್ಲಿ ಯಶ್ ಈಗ ಮುಂಚೂಣಿಯಲ್ಲಿದ್ದು, ಗ್ಲೋಬಲ್ ಮಟ್ಟದಲ್ಲಿ ಧೂಳೆಬ್ಬಿಸುತ್ತಿದ್ದಾರೆ.

ದೇಶದ ಅತ್ಯಂತ ಜನಪ್ರಿಯ ಟಿವಿ ಶೋ ಆಪ್ ಕಿ ಅದಾಲತ್ ಅಖಾಡಕ್ಕೆ ರಂಗಪ್ರವೇಶ ಮಾಡಿದ ಯಶ್, ಸಂದರ್ಶಕ ರಜತ್ ಶರ್ಮಾ ಅವರ ಖಡಕ್ ಪ್ರಶ್ನೆಗಳಿಗೆ ಸಖತ್‌ ಉತ್ತರ ನೀಡಿದ್ದಾರೆ. ನೀವು ಧಾರಾವಾಹಿ ಮಾಡೋ ಕಾಲದಲ್ಲೇ ಸ್ಕ್ರಿಪ್ಟ್ ಕೇಳಿದ್ರಂತೆ, ಅದಕ್ಕೆ ನಿರ್ದೇಶಕರು ಸಿನಿಮಾ ಕೊಡಲಿಲ್ಲವಂತೆ ಹೌದಾ? ಎಂದು ರಜತ್ ಶರ್ಮಾ ಕೇಳಿದ್ದಕ್ಕೆ, ಸ್ಕ್ರಿಪ್ಟ್ ಕೇಳಿದ್ದು ತಪ್ಪಾ? ಅಂದು ಸಿನಿಮಾ ಕೊಡದ ನಿರ್ದೇಶಕರು ಈಗ ಎಲ್ಲಿದ್ದಾರೋ ನಂಗೆ ಗೊತ್ತಿಲ್ಲ ಅಂತ ನೇರವಾಗಿಯೇ ಟಾಂಗ್ ಕೊಟ್ಟಿದ್ದಾರೆ.

ಯಶ್ ಅವರ ಬಳಿ “ನಿಮ್ಮ ಸಂಭಾವನೆ ಒಂದು ಸಿನಿಮಾಕ್ಕೆ 50 ಕೋಟಿ ಅಂತೆ ಹೌದಾ?” ಎಂದು ರಜತ್ ಶರ್ಮಾ ಕೇಳಿದಾಗ ಬಂದ ಉತ್ತರ ಪ್ರತಿಯೊಬ್ಬರ ಮೈ ರೋಮಾಂಚನಗೊಳಿಸುವಂತಿತ್ತು. ಸಣ್ಣಗೆ ನಕ್ಕು ಇಲ್ಲ, ಅದಕ್ಕಿಂತಲೂ ಹೆಚ್ಚು ಅಂತ ಯಶ್ ಕೊಟ್ಟ ಆ ಒಂಟಿ ಸಾಲಿನ ಉತ್ತರ ಟ್ರೇಡ್ ಪಂಡಿತರ ನಿದ್ದೆಗೆಡಿಸಿದೆ. ಮೂಲಗಳ ಪ್ರಕಾರ ‘ರಾಮಾಯಣ’ ಸಿನಿಮಾಕ್ಕೆ ಬರೋಬ್ಬರಿ 100 ಕೋಟಿಗೂ ಹೆಚ್ಚು ಜೇಬಿಗಿಳಿಸಿರೋ ಈ ಸುಲ್ತಾನ್, ‘ಟಾಕ್ಸಿಕ್’ ಚಿತ್ರಕ್ಕೆ ಸ್ವತಃ ನಿರ್ಮಾಪಕನಾಗಿ ಅಖಾಡಕ್ಕಿಳಿದಿದ್ದಾರೆ.

ಹೀಗೆ ಸಂದರ್ಶನ ಮುಂದುವರಿಯಲಿವರೆಯುತ್ತಾ ರಜತ್ ಶರ್ಮಾ ಅವರು ಅತ್ಯಂತ ಸೂಕ್ಷ್ಮ ಹಾಗೂ ವಿವಾದಾತ್ಮಕ ಪ್ರಶ್ನೆಯೊಂದನ್ನು ಯಶ್ ಮುಂದೆ ಇಟ್ಟರು. “ನಿಮ್ಮ ಅಭಿಮಾನಿಯೊಬ್ಬ ಆತ್ಮಹತ್ಯೆ ಮಾಡಿಕೊಂಡು, ಕೊನೆಯ ಆಸೆಯಾಗಿ ನೀವು ಮತ್ತು ಸಿಎಂ ಸಿದ್ದರಾಮಯ್ಯ ಅಂತ್ಯಕ್ರಿಯೆಗೆ ಬರಬೇಕು ಎಂದು ಮನವಿ ಮಾಡಿದ್ದ. ಆಗ ಸಿಎಂ ಹೋದರು, ಆದರೆ ನೀವು ಯಾಕೆ ಹೋಗಲಿಲ್ಲ?” ಎಂದು ಕಟಕಟೆಯಲ್ಲಿ ನಿಂತ ಯಶ್ ಅವರನ್ನು ಪ್ರಶ್ನಿಸಿದರು.ಈ ಪ್ರಶ್ನೆಗೆ ಯಶ್ ಕೊಟ್ಟ ಉತ್ತರ ಪ್ರತಿಯೊಬ್ಬರ ಕಣ್ಣು ತೆಗೆಸುವಂತಿತ್ತು.

ಎಸ್, ಯಶ್ ಒಂದು ವೇಳೆ ಅಭಿಮಾನಿಯ ಅಂತ್ಯಕ್ರಿಯೆಗೆ ಹೋಗಿದ್ದರೆ, ಅದು ಸಮಾಜಕ್ಕೆ ಅತ್ಯಂತ ಕೆಟ್ಟ ಸಂದೇಶ ರವಾನಿಸುತ್ತಿತ್ತು. ಕೊನೆಯ ಆಸೆ ಅಂತ ಹೇಳಿ ಜನ ಸಾವಿನ ಹಾದಿ ತುಳಿಯುವ ಅಪಾಯವಿತ್ತು. ಇಂತಹ ಯಾವುದೇ ತಪ್ಪು ಪ್ರೇರಣೆ ಯುವಜನತೆಗೆ ಸಿಗಬಾರದು ಎನ್ನುವುದೇ ಯಶ್ ಉದ್ದೇಶವಾಗಿತ್ತು.

ಮುಂದುವರೆದು ಮಾತನಾಡಿದ ಯಶ್, “ಯಾರಾದರೂ ನಾನು ಇಂತಹ ದೊಡ್ಡ ಸಾಧನೆ ಮಾಡುತ್ತೇನೆ, ಅದನ್ನು ನೋಡಲು ಯಶ್ ಬರಬೇಕು ಎಂದರೆ ನಾನು ಖಂಡಿತ ಹೋಗಿ ಅವರನ್ನು ಭೇಟಿಯಾಗಿ ಶುಭ ಕೋರುತ್ತೇನೆ. ಅದು ಸಮಾಜಕ್ಕೆ ಒಳ್ಳೆಯ ಮಾದರಿಯಾಗುತ್ತದೆ. ಆದರೆ ಸಾವಿನ ಹಾದಿಯನ್ನು ಯಾರೂ ಮಾದರಿಯಾಗಿ ಮಾಡಿಕೊಳ್ಳುವುದು ನನಗೆ ಇಷ್ಟವಿಲ್ಲ ಎಂದು ಸಾರಿದರು. ಯಶ್ ಅವರ ಈ ಪರಿಪಕ್ವ ಯೋಚನೆಗೆ ಖುದ್ದು ರಜತ್ ಶರ್ಮಾ ಅವರೇ ಬೆರಗಾಗಿ ಶ್ಲಾಘನೆ ವ್ಯಕ್ತಪಡಿಸಿದರು.

ಸಾಮಾನ್ಯವಾಗಿ ‘ಆಪ್ ಕಿ ಅದಾಲತ್’ ಶೋ ಮುಗಿದ ಮೇಲೆ ಜಡ್ಜ್‌ ಪೀಠದಲ್ಲಿದ್ದವರು ಅಂತಿಮ ತೀರ್ಪು ನೀಡುತ್ತಾರೆ. ಆದರೆ ಯಶ್ ಅವರ ವ್ಯಕ್ತಿತ್ವ, ನಿಲುವಿನ ಸ್ಪಷ್ಟತೆ ಮತ್ತು ದೇಶಪ್ರೇಮದ ವಿಚಾರಗಳನ್ನು ಕೇಳಿದ ಮೇಲೆ, ಜಡ್ಜ್ ತೀರ್ಪು ನೀಡುವ ಮೊದಲೇ ಯಶ್ ಜನಮನ ಗೆದ್ದುಬೀಗಿದ್ದರು. ಪ್ರತಿಯೊಂದು ಸವಾಲನ್ನು ಗೆದ್ದು ಬಂದಿರೋ ರಾಕಿಂಗ್ ಸ್ಟಾರ್ ಯಶ್, ರಿಯಲ್ ಲೈಫ್‌ನಲ್ಲೂ ನಂಬರ್ 1 ಲೀಡರ್ ಅನ್ನೋದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.

ಸೋ, ರಿಯಲ್ ಲೈಫ್‌ನಲ್ಲೂ ಪಕ್ಕಾ ಸೈದ್ಧಾಂತಿಕ ನಿಲುವು ಹೊಂದಿರೋ ಯಶ್, ತಮ್ಮ ನಟನೆ ಮತ್ತು ಹಂಬಲ್ ಕ್ಯಾರಕ್ಟರ್‌ನಿಂದ ಇಡೀ ದೇಶದ ಹೃದಯ ಗೆದ್ದಿದ್ದಾರೆ. 50 ಕೋಟಿ ಅಲ್ಲ, 100 ಕೋಟಿ ಕೊಟ್ಟರೂ ಕಂಪ್ಲೀಟ್ ಕಮಿಟ್‌ಮೆಂಟ್ ಕೊಡುವ ಈ ರಾಕಿ ಭಾಯ್, ಕೇವಲ ಸ್ಯಾಂಡಲ್‌ವುಡ್ ಸಾಮ್ರಾಟ್ ಆಗಿಷ್ಟೇ ಉಳಿಲಿಲ್ಲ… ಬದಲಿಗೆ ಭಾರತೀಯ ಚಿತ್ರರಂಗದ ರಿಯಲ್ ‘ಬಾಕ್ಸ್ ಆಫೀಸ್ ಸುಲ್ತಾನ್’ ಆಗಿ ಮೆರೆಯುತ್ತಿದ್ದಾರೆ. ಮುಂಬರುವ ‘ಟಾಕ್ಸಿಕ್’ ಮತ್ತು ‘ರಾಮಾಯಣ’ ಸಿನಿಮಾಗಳ ಮೂಲಕ ಯಶ್ ಜಾಗತಿಕ ಮಟ್ಟದಲ್ಲಿ ಯಾವ ರೇಂಜ್‌ಗೆ ಧೂಳೆಬ್ಬಿಸಲಿದ್ದಾರೆ ಅನ್ನೋದನ್ನ ಕಾದು ನೋಡೋಣ.

 

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್
Exit mobile version