ಯಶ್ ಟ್ರಾನ್ಸ್‌‌ಫಾರ್ಮೇಷನ್‌..ಟಾಕ್ಸಿಕ್‌‌ಗಾಗಿ 12KG ಇಳಿಕೆ

ಗ್ಯಾರಂಟಿ ನ್ಯೂಸ್‌‌ನಲ್ಲಿ ಯೋಗರಾಜ ಕಂಡಂತೆ ರಾಕಿಂಗ್ ರಾಯ

ಷ್ಯ (21)

ಕರ್ನಾಟಕದಲ್ಲಿ ಟಾಕ್ಸಿಕ್ ಪ್ರಮೋಷನ್ಸ್‌ಗೆ ವಿಕಟಕವಿ ಯೋಗರಾಜ್ ಭಟ್ ಭರ್ಜರಿಯಾಗಿ ಚಾಲನೆ ನೀಡಿದ್ದಾರೆ. ಯೆಸ್.. ತಬಾಹಿ ಸೆನ್ಸೇಷನಲ್ ಸಾಂಗ್ ಹಿಂದಿನ ಚಿತ್ರಸಾಹಿತಿ ಆಗಿರೋ ಭಟ್ರು, ಮತ್ತೆರಡು ಗೀತೆಗಳಿಗೆ ಪದ ಪೋಣಿಸಿದ್ದಾರಂತೆ. ಅಷ್ಟೇ ಅಲ್ಲ.. ಯಶ್ ತನ್ನ ಪಾತ್ರಕ್ಕಾಗಿ 12 ಕೆಜಿ ತೂಕ ಇಳಿಸಿಕೊಂಡು ಬಾಡಿ ಟ್ರಾನ್ಸ್‌ಫಾರ್ಮೇಷನ್ ಆಗಿದ್ದು, ಕಿಯಾರಾ ಎಕ್ಸ್‌ಪ್ರೆಷನ್ಸ್, ಮುಂಬೈನಲ್ಲಿ ರಾಕಿಂಗ್ ಸ್ಟಾರ್ ಕಟ್ಟಿರೋ ಕನ್ನಡ ಸಾಮ್ರಾಜ್ಯದ ಬಗ್ಗೆ ಎಕ್ಸ್‌‌ಕ್ಲೂಸಿವ್ ಆಗಿ ಮಾತನಾಡಿದ್ದಾರೆ. ಭಟ್ರು ಕಂಡಂತೆ ರಾಕಿಂಗ್ ರಾಯನ ಪ್ರಪಂಚ ಹೇಗಿದೆ ಅನ್ನೋದನ್ನ ನೀವೊಮ್ಮೆ ನೋಡ್ಕೊಂಡ್ ಬನ್ನಿ.

ಟಾಕ್ಸಿಕ್.. ಟಾಕ್ಸಿಕ್.. ಟಾಕ್ಸಿಕ್.. ಸದ್ಯ ವಿಶ್ವ ಸಿನಿದುನಿಯಾದ ಮೋಸ್ಟ್ ಟ್ರೆಂಡಿಂಗ್ ಮೂವಿ. ನಮ್ಮ ಹೆಮ್ಮೆಯ ಕನ್ನಡಿಗ ಯಶ್ ನಟಿಸಿ, ಕೆವಿಎನ್ ಜೊತೆ ಸಹ ನಿರ್ಮಾಣ ಮಾಡಿರೋ ಕನ್ನಡದ ಹಾಲಿವುಡ್ ಎಂಟರ್‌ಟೈನರ್. ಗೀತು ಮೋಹನ್‌ದಾಸ್ ನಿರ್ದೇಶನದ ರೆಟ್ರೋ ಗೋವಾ-ಪೋರ್ಚುಗಲ್‌‌ ಬ್ಯಾಕ್‌ಡ್ರಾಮ್ ಮೂವಿಯ ಒಂದೊಂದು ಟೀಸರ್ ಕೂಡ ಸಖತ್ ಹೈಪ್ ಕ್ರಿಯೇಟ್ ಮಾಡಿವೆ. ಅದ್ರಲ್ಲೂ ತಬಾಹಿ ಸಾಂಗ್ ಚಿತ್ರಕ್ಕೆ ಟ್ರಂಪ್‌‌ಕಾರ್ಡ್ ಆಗಿ ಪರಣಮಿಸಿದ್ದು, ರಿಲೀಸ್‌ಗೆ ಜಸ್ಟ್ 42 ಡೇಸ್ ಅಷ್ಟೇ ಬಾಕಿ ಉಳಿದಿದೆ.

ಕರ್ನಾಟಕದಲ್ಲಿ ಯೋಗರಾಜ್ ಭಟ್ ಟಾಕ್ಸಿಕ್‌ ಪ್ರಮೋಷನ್ಸ್‌ ಕಿಕ್‌ಸ್ಟಾರ್ಟ್ ಮಾಡಿದ್ದು, 10 ಕೋಟಿ ವೀವ್ಸ್‌ನಿಂದ ಯೂಟ್ಯೂಬ್‌‌ನಲ್ಲಿ ಸುನಾಮಿ, ಸುಂಟರಗಾಳಿ ಎಬ್ಬಿಸಿರೋ ತಬಾಹಿ ಟ್ರೆಂಡಿಂಗ್ ನಂ.1 ನಲ್ಲಿದೆ. ಡ್ರಾಮಾ ಚಿತ್ರದಲ್ಲಿ ಯಶ್‌ಗೆ ಆ್ಯಕ್ಷನ್ ಕಟ್ ಹೇಳಿದ್ದ ಭಟ್ರು, ಅದಾದ ಬಳಿಕ ಅವರೊಟ್ಟಿಗೆ ಕೆಲಸ ಮಾಡಿದ ನಿದರ್ಶನವೇ ಇಲ್ಲ. ಅವರಿಬ್ಬರ ನಡುವಿನ ಬಾಂಧವ್ಯ ಅಷ್ಟು ಅದ್ಭುತವಾಗಿತ್ತು. ಅಲ್ಲದೆ, ಯಶ್‌ರ ಸಾಕಷ್ಟು ಚಿತ್ರಗಳಿಗೆ ಸಾಹಿತ್ಯ ರಚಿಸಿದ್ದಾರೆ ಯೋಗರಾಜ್ ಭಟ್.

ಸದ್ಯ ನಮ್ಮ ಗ್ಯಾರಂಟಿ ನ್ಯೂಸ್‌ನ ಗ್ಯಾರಂಟಿ ಪಿಚ್ಚರ್ ಟೀಂ ಜೊತೆ ಎಕ್ಸ್‌ಕ್ಲೂಸಿವ್ ಆಗಿ ಮಾತನಾಡಿರೋ ಭಟ್ರು, ಮುಂಬೈನಲ್ಲಿ ಮಿನಿ ಕರ್ನಾಟಕ ಕಟ್ಟಿರೋ ರಾಕಿಂಗ್ ಸ್ಟಾರ್ ಕನ್ನಡಾಭಿಮಾನ, ದೂರಾಲೋಚನೆಯನ್ನ ಅದ್ಭುತವಾಗಿ ಬಣ್ಣಿಸಿದ್ದಾರೆ. ಅಲ್ಲದೆ, ಎರಡ್ಮೂರು ಪಾತ್ರಗಳಿಗೆ ಜೀವ ತುಂಬಿರೋ ರಾಕಿಂಗ್ ಸ್ಟಾರ್, ಟಾಕ್ಸಿಕ್ ಪಾತ್ರಕ್ಕಾಗಿ ಬರೋಬ್ಬರಿ 12ರಿಂದ 14ಕೆಜಿ ತೂಕ ಇಳಿಸಿಕೊಂಡು ಬಾಡಿ ಟ್ರಾನ್ಸ್‌ಫಾರ್ಮೇಷನ್ ಮಾಡಿಕೊಂಡಿರೋದ್ರ ಬಗ್ಗೆ ಬಹಿರಂಗಪಡಿಸಿದ್ದಾರೆ. ಅಣ್ಣಾವ್ರು 50 ವರ್ಷಗಳ ನಂತರವೂ ಯೋಗದಿಂದ ದೇಹ ಸೌಂದರ್ಯ ಕಾಪಾಡಿಕೊಂಡಿದ್ದನ್ನ ಭಟ್ರು ನೆನೆದರು.

ತಬಾಹಿ ಸಾಂಗ್‌‌ನಲ್ಲಿ ಯಶ್ ಜೊತೆ ಸಖತ್ ಹಾಟ್ ಆಗಿ ಕಾಣಿಸಿಕೊಂಡಿರೋ ಬೋಲ್ಡ್ ಬ್ಯೂಟಿ ಕಿಯಾರಾ ಅಡ್ವಾಣಿ ಎಕ್ಸ್‌‌ಪ್ರೆಷನ್ಸ್ ಬಗ್ಗೆ ಸಾಕಷ್ಟು ಮಂದಿ ಸಾಕಷ್ಟು ರೀತಿ ಮಾತಾಡಿಕೊಳ್ತಿದ್ದಾರೆ. ಆಕೆಯ ಆ ಎಕ್ಸ್‌ಪ್ರೆಷನ್ಸ್‌‌ ಕುರಿತು ಭಟ್ರಿಗೂ ಕುತೂಹಲವಿದೆಯಂತೆ. ಅದನ್ನ ಅವ್ರ ಬಾಯಿಂದಲೇ ಒಮ್ಮೆ ಕೇಳಿಬಿಡಿ.

ಜಿದ್ದಾ ಜಿದ್ದಿನಿಂದ ಬರೆದ ಗೀತೆ ತಬಾಹಿ. ಅದ್ರಲ್ಲಿ ಮಾಜಾ ತಗೊಂಡಿದ್ದು ಮಾತ್ರ ಯಶ್ ಹಾಗೂ ಭಟ್ರಂತೆ. ತಬಾಹಿ ಅಂದ್ರೆ ವಿನಾಶ. ಆದ್ರೆ ನಾನು ನೀನು ಸೇರಿದ್ರೆ ಆ ವಿನಾಶ ಅನ್ನೋದನ್ನ ಹೀರೋ ಹೀರೋಯಿನ್‌ಗೆ ಹೇಳೋದಾಗಿದೆ ಇದು. ಆ ಇನ್‌‌ಸೈಡ್ ಒಳಾರ್ಥವನ್ನ ಸ್ವತಂ ಪದಗಳನ್ನ ಪೋಣಿಸಿರೋ ಭಟ್ರೇ ಬಿಚ್ಚಿಟ್ಟಿದ್ದಾರೆ.

ಕವಿ ಹೃದಯಿ ಆಗಿರೋ ಯಶ್, ಸೀರಿಯಲ್ ದಿನಗಳಲ್ಲೇ ಕವಿತೆಗಳನ್ನ ಬರೆಯುತ್ತಿದ್ರು. ಅವುಗಳನ್ನ ನಾನು ಓದ್ದಿದೀನಿ ಕೂಡ ಅಂದ್ರು ಭಟ್ರು. ಬೇಂದ್ರೆ ಅವ್ರ ಕವನ ಹೇಳಿದ್ರೆ, ಅದನ್ನ ಡೀ ಕೋಡ್ ಮಾಡೋ ತಾಕತ್ತು ಯಶ್ ಅವ್ರಿಗೆ ಇದೆ ಅಂತಾರೆ. ಇನ್ನೂ ತಬಾಹಿ ಪದವನ್ನ ಉತ್ತರ ಕರ್ನಾಟಕದಲ್ಲಿ ಗಜಮಾ ಪದ ಬಳಕೆ ರೀತಿ ಡಿಫರೆಂಟ್ ಆಗಿ ಇರಲಿದೆ ಅಂತ ಬಳಸಿದ್ವಿ ಎಂದರು. ಕಿಯಾರಾ-ಯಶ್‌ರದ್ದು ಮುದ್ದಾದ ಮುಖಗಳು. ಯಶ್ ಕೋಲು ಮುಖಕ್ಕೆ ಆ ಗಡ್ಡ, ಮೀಸೆಯಲ್ಲಿ ಅವ್ರನ್ನ ಪ್ರೆಸೆಂಟ್ ಮಾಡಿರೋ ರೀತಿ ವಿಭಿನ್ನವಾಗಿದೆ ಎಂದರು.

ಮನುಷ್ಯ ಎಷ್ಟೇ ಎತ್ತರಕ್ಕೆ ಬೆಳೆದರೂ ಸಹ, ಬಂದ ದಾರಿಯನ್ನ ಮರೆಯಬಾರದು. ಅದೇ ರೀತಿ ಹತ್ತಿ ಬಂದ ಏಣಿಯನ್ನ ಎಂದೂ ಒದ್ದಿಲ್ಲ ಯಶ್. ಯಾಕಂದ್ರೆ ಡ್ರಾಮಾ ಚಿತ್ರದಲ್ಲಿ ಕೆಲಸ ಮಾಡಿದ್ದ ಶೇಕಡಾ 10ರಷ್ಟು ಮಂದಿ ಹುಡುಗರು ಇದೀಗ ಟಾಕ್ಸಿಕ್ ಚಿತ್ರದಲ್ಲೂ ಕೆಲಸ ಮಾಡಿದ್ದಾರಂತೆ. ಅವರಿಗೆ ಅವಕಾಶ ನೀಡಿರೋ ಯಶ್‌‌ ಮನಸ್ಸು ಎಷ್ಟು ದೊಡ್ಡದು ಅಂತ ನೀವೇ ಒಮ್ಮೆ ಊಹಿಸಿಕೊಳ್ಳಿ.

ಇನ್ನೂ ಚಿತ್ರದಲ್ಲಿ ಸುಮಾರು ಐದು ಮಂದಿ ನಾಯಕಿಯರಿದ್ದು, ಹೆಣ್ಮಕ್ಳೇ ಸ್ಟ್ರಾಂಗು ಗುರು ಅಂತಾರೆ ಭಟ್ರು. ಇದೊಂದು ಶಾಶ್ವತ ಮೈಲಿಗಲ್ಲು ಸೃಷ್ಟಿಸೋ ಸಿನಿಮಾ ಆಗುವ ಭರವಸೆ ನೀಡಿರೋ ವಿಕಟಕವಿ, ಫಿಲಾಸಫರ್ ರೂಮಿ, ಆತನ ಸರಿ-ತಪ್ಪುಗಳ ಆಚೆ ಇರೋ ಪ್ರಪಂಚದ ಬಗ್ಗೆಯೂ ಮಾತನಾಡಿದ್ದಾರೆ.

ಒಟ್ಟಾರೆ ಒಂದ್ಕಡೆ ಯಶ್ ಸಿನಿಮಾಕಾನ್‌ ವೇದಿಕೆಯಲ್ಲಿ ಅಮೆರಿಕದಿಂದ ಪ್ರಮೋಷನ್ಸ್ ಮಾಡ್ತಿದ್ರೆ, ಇಲ್ಲಿ ಭಟ್ರು ಕರುನಾಡಿನಿಂದ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿರೋದು ವಿಶೇಷ. ಈ ಚಿತ್ರದಲ್ಲಿ ಭಟ್ರು ಇನ್ನೂ ಎರಡು ಸಾಂಗ್ಸ್ ಬರೆದಿದ್ದು, ಅವು ವೇದಾಂತ, ನೋವಿನಿಂದ ಕೂಡಿರೋ ಗೀತೆಗಳಾಗಿರಲಿವೆಯಂತೆ. ಇನ್‌ಫ್ಯಾಕ್ಟ್ ಅವು ಯಶ್ ಫೇವರಿಟ್ ಸಾಂಗ್ಸ್ ಕೂಡ ಹೌದಂತೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

 

 

Exit mobile version