ಆಂಧ್ರ ಪ್ರದೇಶದ ಉಪಮುಖ್ಯಮಂತ್ರಿ ಹಾಗೂ ಟಾಲಿವುಡ್ ಪವರ್ಸ್ಟಾರ್ ಪವನ್ ಕಲ್ಯಾಣ್ ಅವರ ಪತ್ನಿ ಅನಾ ಲೆಜಿನೋವಾ, ತಿರುಪತಿ ತಿಮ್ಮಪ್ಪನ ದೇವಸ್ಥಾನದಲ್ಲಿ ತಮ್ಮ ಹರಕೆಯನ್ನು ತೀರಿಸಿದ್ದಾರೆ. ಏಪ್ರಿಲ್ 13, 2025 ರಂದು ತಿರುಮಲಕ್ಕೆ ಭೇಟಿ ನೀಡಿದ ಅವರು, ತಮ್ಮ 8 ವರ್ಷದ ಪುತ್ರ ಮಾರ್ಕ್ ಶಂಕರ್ನ ಸುರಕ್ಷತೆಗಾಗಿ ಹೊತ್ತಿದ್ದ ಹರಕೆಯನ್ನು ಪೂರೈಸಿ, ಕೂದಲನ್ನು ದಾನ ಮಾಡಿದ್ದಾರೆ.
ಪವನ್ ಕಲ್ಯಾಣ್ ಅವರ ಪುತ್ರ ಮಾರ್ಕ್ ಶಂಕರ್, ಏಪ್ರಿಲ್ 8, 2025 ರಂದು ಸಿಂಗಾಪುರದ ಶಾಲೆಯೊಂದರ ಬೇಸಿಗೆ ಶಿಬಿರದಲ್ಲಿ ನಡೆದ ಅಗ್ನಿ ದುರಂತದಲ್ಲಿ ಸಿಲುಕಿದ್ದರು. ಈ ಘಟನೆಯಲ್ಲಿ ಮಾರ್ಕ್ಗೆ ಕೈ-ಕಾಲುಗಳಿಗೆ ಸುಟ್ಟ ಗಾಯಗಳಾಗಿದ್ದವು, ಜೊತೆಗೆ ಹೊಗೆ ಸೇವನೆಯಿಂದ ಉಸಿರಾಟದ ತೊಂದರೆ ಉಂಟಾಗಿತ್ತು. ತಕ್ಷಣವೇ ಆಸ್ಪತ್ರೆಗೆ ದಾಖಲಾದ ಅವರು, ಚಿಕಿತ್ಸೆಯಿಂದ ಚೇತರಿಸಿಕೊಂಡಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆ, ಆಂಧ್ರದಲ್ಲಿ ಸರ್ಕಾರಿ ಕಾರ್ಯಕ್ರಮದಲ್ಲಿದ್ದ ಪವನ್ ಕಲ್ಯಾಣ್, ತಮ್ಮ ಎಲ್ಲಾ ಚಟುವಟಿಕೆಗಳನ್ನು ರದ್ದುಗೊಳಿಸಿ ಸಿಂಗಾಪುರಕ್ಕೆ ಧಾವಿಸಿದ್ದರು.ಏಪ್ರಿಲ್ 12 ರಂದು, ಅವರು ತಮ್ಮ ಪತ್ನಿ ಅನಾ ಲೆಜಿನೋವಾ ಮತ್ತು ಪುತ್ರನೊಂದಿಗೆ ಹೈದರಾಬಾದ್ಗೆ ಸುರಕ್ಷಿತವಾಗಿ ವಾಪಸಾಗಿದ್ದರು.
ಮಗನ ಸುರಕ್ಷತೆಗಾಗಿ ಶ್ರೀ ವೆಂಕಟೇಶ್ವರನಲ್ಲಿ ಹರಕೆ ಹೊತ್ತಿದ್ದ ಅನಾ ಲೆಜಿನೋವಾ, ಹೈದರಾಬಾದ್ಗೆ ವಾಪಸ್ ಆಗುತ್ತಿದ್ದಂತೆ ತಿರುಮಲಕ್ಕೆ ತೆರಳಿದರು. ಏಪ್ರಿಲ್ 13 ರಂದು, ಪದ್ಮಾವತಿ ಕಲ್ಯಾಣ ಕಟ್ಟೆಯಲ್ಲಿ ತಮ್ಮ ಕೂದಲನ್ನು ದಾನ ಮಾಡಿ, ಹರಕೆಯನ್ನು ತೀರಿಸಿದರು.ಏಪ್ರಿಲ್ 14 ರಂದು, ಅವರು ಸುಪ್ರಭಾತ ಸೇವೆಯಲ್ಲಿ ಭಾಗವಹಿಸಿ, ಮಗನ ಆರೋಗ್ಯಕ್ಕಾಗಿ ವಿಶೇಷ ಪೂಜೆ ಸಲ್ಲಿಸಿದರು.
ಮುಡಿ ಕೊಟ್ಟ ಬಳಿಕ ಪುತ್ರ ಮಾರ್ಕ್ ಶಂಕರ್ ಹೆಸರಲ್ಲಿ ಪವನ್ ಕಲ್ಯಾಣ್, ಪತ್ನಿ ಅನಾ ಲೆಜಿನೋವಾ ತಿರುಪತಿ ತಿಮ್ಮಪ್ಪನ ಅನ್ನ ದಾಸೋಹ ಟ್ರಸ್ಟ್ಗೆ ದೊಡ್ಡ ಮೊತ್ತದಲ್ಲಿ ಹಣ ನೀಡಿದ್ದಾರೆ. ಮಾರ್ಕ್ ಶಂಕರ್, ಭಕ್ತರ ಮಧ್ಯಾಹ್ನದ ಊಟಕ್ಕೆ 17 ಲಕ್ಷ ರೂಪಾಯಿಗಳನ್ನು ಟಿಟಿಡಿ ಅನ್ನ ದಾಸೋಹ ಟ್ರಸ್ಟ್ಗೆ ನೀಡಿದ್ದಾರೆ.