ರಾಮ್ ಗೋಪಾಲ್ ವರ್ಮಾ.. ಭಾರತೀಯ ಚಿತ್ರರಂಗಕ್ಕೆ ತನ್ನದೇ ಆದಂತಹ ಕೊಡುಗೆ ನೀಡಿರೋ ಒನ್ ಆಫ್ ದಿ ಬೆಸ್ಟ್ ಡೈರೆಕ್ಟರ್. ಇವರ ಸಿನಿಮಾಗಳು ಸೌತ್ ನಿಂದ ಬಾಲಿವುಡ್ ವರೆಗೆ ಸಖತ್ ಸೆನ್ಸೇಷನ್. ಅದರಲ್ಲೂ ರಿಯಲ್ ಬೇಸ್ಡ್ ಕಥೆಗಳನ್ನ ತೆರೆಗೆ ತರೋ ರಾ ಡೈರೆಕ್ಟರ್, ಕಲ್ಟ್ ಸಿನಿಮಾಗಳ ಮಾನ್ ಸ್ಟರ್ ಮಾಂತ್ರಿಕ ಈ ರಾಮ್ ಗೋಪಾಲ್ ವರ್ಮಾ. ಇದೆಲ್ಲವೂ ಒಂದು ಕಾಲಕ್ಕೆ. ಆದ್ರೆ ಈಗ ಪರಿಸ್ಥಿತಿ ಕಂಪ್ಲೀಟ್ ಉಲ್ಟಾ ಆಗಿದೆ. ಹೌದು.. ಶಿವ, ಸತ್ಯ, ರಂಗೀಲಾ, ರಕ್ತಚರಿತ್ರ, ಕ್ಷಣ ಕ್ಷಣಂ ಹೀಗೆ ಸಾಲು ಸಾಲು ಬ್ಲಾಕ್ ಬಸ್ಟರ್ ಹಿಟ್ ಮೂವೀಸ್ ಕೊಟ್ಟಿರೋ ಆರ್ ಜಿ ವಿ ಅದ್ಯಾಕೋ ಇತ್ತೀಚೆಗೆ ಬೇರೆ ವಿಷಯಗಳಿಂದ ಸದ್ದು ಮಾಡ್ತಿದ್ದಾರೆ.
ಒಂದು ಕಾಲದಲ್ಲಿ ಇವರ ಕಥೆ, ಮೇಕಿಂಗ್, ಪಾತ್ರಗಳ ಬಗ್ಗೆ ಇಡೀ ಸಿನಿದುನಿಯಾ ಮಾತಾಡ್ತಿತ್ತು. ಇದೀಗ ಇವರ ತಲೆ ಖಾಲಿಯಾಗಿದೆ. ಇವರ ಬತ್ತಳಿಕೆ ಬತ್ತು ಹೋಗಿದೆ. ಅದೆಷ್ಟೋ ಮಂದಿಗೆ ಸ್ಫೂರ್ತಿಯಾಗಿದ್ದ ವರ್ಮಾ, ಅವರಿಂದಲೇ ಛೀ, ಥೂ ಅನಿಸಿಕೊಳ್ಳೋಕೆ ಶುರು ಮಾಡಿದ್ದಾರೆ. ಹೌದು.. ಸಿನಿಮಾಗಳಿಂದ ಸದ್ದು ಮಾಡ್ತಿದ್ದ ರಾಮ್ ಗೋಪಾಲ್ ವರ್ಮಾ, ಇತ್ತೀಚೆಗೆ ವಿವಾದಗಳಿಂದಲೇ ಜಾಸ್ತಿ ಸುದ್ದಿ ಆಗ್ತಿದ್ದಾರೆ. ಬೇಡವಾದ ವಿಷಯಗಳಿಗೆ ಕಮೆಂಟ್ ಮಾಡೋದು, ಟ್ವೀಟ್ ಮಾಡೋದು, ಟೀಕೆ, ಟಿಪ್ಪಣಿಗಳಿಗೆ ಗುರಿಯಾಗೋದು ಸರ್ವೇ ಸಾಮಾನ್ಯ ಆಗೋಗಿದೆ. ಅದ್ರಲ್ಲೂ ದೊಡ್ಡ ದೊಡ್ಡ ಸ್ಟಾರ್ಗಳು, ಅವರ ಸಿನಿಮಾಗಳ ಬಗ್ಗೆ ಕೆಟ್ಟದಾಗಿ ಮಾತಾಡಿ, ಫ್ಯಾನ್ಸ್ ಕೆಂಗಣ್ಣಿಗೂ ಗುರಿಯಾಗಿದ್ರು.
ಅದೆಲ್ಲವೂ ಓಕೆ.. ಆದ್ರೆ ಅದಕ್ಕಿಂತ ಒಂದು ಹೆಜ್ಜೆ ಕೆಳ ಮಟ್ಟಕ್ಕೆ ಇಳಿದುಬಿಟ್ಟಿದ್ದಾರೆ ಈ ಸ್ಟಾರ್ ಡೈರೆಕ್ಟರ್ ವರ್ಮಾ. ಹೌದು.. ಬಿ ಗ್ರೇಡ್, ಸಿ ಗ್ರೇಡ್ ಸಿನಿಮಾಗಳನ್ನ ಮಾಡೋಕೆ ಮುಂದಾದ ದಿನವೇ ಚಿತ್ರರಂಗ ಹಾಗೂ ಸಮಾಜದಲ್ಲಿ ಅವರಿಗಿದ್ದ ಗೌರವ, ಪ್ರತಿಷ್ಠೆಗಳು ಮಣ್ಣು ಪಾಲಾದವು. ಅದರಲ್ಲೂ ಹೆಣ್ಣು ಮಕ್ಕಳಿಗಾಗಿ ಜೊಲ್ಲು ಸುರಿಸೋ ಈ ಡೈರೆಕ್ಟರ್, ಅದನ್ನ ನೇರವಾಗಿ ಸಿನಿಮಾಗಳ ಮೂಲಕ ತೋರಿಸೋಕೆ ಮುಂದಾದ್ರು. ಅಲ್ಲದೆ, ಯೂಟ್ಯೂಬ್ ಸಂದರ್ಶನಗಳಿಂದ ಆ ನಟಿಯರು ಹಾಗೂ ಮಾಡೆಲ್ ಗಳ ಬಳಿ ವಿವಾದಾತ್ಮಕ ಮಾತುಗಳನ್ನ ಆಡುವ ಮೂಲಕ ಅವರ ಫಾಲೋವರ್ಸ್, ಫ್ಯಾನ್ಸ್ ಹಾಗೂ ಒಡನಾಡಿಗಳೇ ಏನಾಗಿದೆ ಈ ವರ್ಮಾಗೆ..? ಏನಪ್ಪಾ ನಿನ್ನ ಕರ್ಮ ಅಂತ ಪ್ರಶ್ನಿಸುವಂತಾಗಿದೆ.
ಯೆಸ್.. ಸದಾ ಹಾಟ್ ಆಗಿರೋ ಗ್ಲಾಮರಸ್ ಹೆಣ್ಮಕ್ಳ ಜೊತೆ ಯೂಟ್ಯೂಬ್ ಸಂದರ್ಶನಗಳನ್ನ ನಡೆಸೋ ರಾಮ್ ಗೋಪಾಲ್ ವರ್ಮಾ, ಇತ್ತೀಚೆಗೆ ಯುವ ನಟಿ ಪ್ರತ್ಯುಷಾ ಜೊತೆಗಿನ ವಿಡಿಯೋದಿಂದ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶಕ್ಕೆ ಗುರಿಯಾಗ್ತಿದ್ದಾರೆ. ಹೆಣ್ಣು ಮಕ್ಕಳ ಪ್ರೈವೇಟ್ ಪಾರ್ಟ್ಸ್ ಬಗ್ಗೆ ಮಾತನಾಡಿರೋ ವರ್ಮಾಗೆ ನೆಟ್ಟಿಗರು ಲೆಫ್ಟು ರೈಟು ಕ್ಲಾಸ್ ತಗೊಳ್ತಿದ್ದಾರೆ. ಹೌದು.. ಒಂದು ಕಾಲದಲ್ಲಿ ಬ್ಲಾಕ್ ಬಸ್ಟರ್ ಹಿಟ್ಸ್ ನೀಡಿರೋ ಡೈರೆಕ್ಟರ್, ಇಷ್ಟು ಚೀಪ್ ಆಗಿ ವಿಡಿಯೋಗಳಿಂದ ಸುದ್ದಿಯಾಗ್ತಿರೋದಕ್ಕೆ ಬೇಸರ ಹಾಗೂ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ವಿವಾದಗಳಿಂದ ಜೈಲಿಗೆ ಹೋಗಿ ಬಂದರೂ, ಮದ್ಯಕ್ಕೆ ದಾಸನಾಗಿರೋ ವರ್ಮಾಗೆ ಚಿತ್ರರಂಗದ ಹಿತೈಷಿಗಳು, ಬಂಧು- ಬಳಗ ಹೇಳಿದ್ರೂ, ತನ್ನ ಗರಡಿಯಿಂದ ಹೊರಬಂದು ಅವರನ್ನ ಗುರುಗಳಂತೆ ಭಾವಿಸ್ತಿರೋ ಶಿಷ್ಯರ ಮಾತಿಗೂ ಕ್ಯಾರೆ ಅನ್ನದ ವರ್ಮಾ ಅದ್ಯಾಕೋ ತಮ್ಮ ವರ್ಚಸ್ಸಿಗೆ ತಾವೇ ಕಳಂಕ ತಂದಿಕೊಳ್ತಿರೋದು ನಿಜಕ್ಕೂ ದುರಂತವೇ ಸರಿ.