ಸಪ್ತಮಿ, ಸಾನ್ವಿ ಸುದೀಪ್, ವೈಷ್ಣವಿಗೆ ಮುಜುಗರ ಆಗಿದ್ಯಾಕೆ..?!

ಅಸಭ್ಯ, ಅಸಹ್ಯ ವಿಡಿಯೋ, ಫೋಟೋ ತೆಗೆಯೋರಿಗೆ ಮಂಗಳಾರತಿ

BeFunky collage 2026 03 04T170412.581

ಅಸಭ್ಯ ಹಾಗೂ ಅಸಹ್ಯವಾಗಿ ಫೋಟೋ, ವಿಡಿಯೋಗಳನ್ನ ತೆಗೆದು, ಅದನ್ನ ಅಪ್ಲೋಡ್ ಮಾಡಿ ವೀವ್ಸ್ ಪಡೆಯುತ್ತಿರೋ ಪಾಪರಾಝಿಗಳ ವಿರುದ್ಧ ಸ್ಯಾಂಡಲ್‌ವುಡ್ ನಟಿಮಣಿಯರು ತಿರುಗಿ ಬಿದ್ದಿದ್ದಾರೆ. ಸದ್ಯ ಇದು ಹಾಟ್ ಟಾಪಿಕ್ ಆಗಿದ್ದು, ಸಪ್ತಮಿ ಶುಭಾರಂಭ ಮಾಡಿದ ಈ ಅಭಿಯಾನಕ್ಕೆ ರಮ್ಯಾ, ರಕ್ಷಿತಾ, ರುಕ್ಮಿಣಿಯಿಂದ ಇಡೀ ಚಿತ್ರರಂಗ ಸಾಥ್ ನೀಡಿದೆ. ಸ್ಟಾರ್ಸ್ ಕೂಡ ಬೆಂಬಲ ವ್ಯಕ್ತಪಡಿಸ್ತಿದ್ದಾರೆ. ಪಾಪರಾಝಿಗಳ ಅಟ್ಟಹಾಸ ಮಟ್ಟ ಹಾಕಲು ಒಗ್ಗಟ್ಟಿನ ಮಂತ್ರ ಜಪಿಸ್ತಿರೋ ಚಂದನವನದ ಚೆಂದದ ಕಥೆ ನಿಮಗಾಗಿ.

ಸ್ಯಾಂಡಲ್‌ವುಡ್‌‌‌‌ನಲ್ಲಿ ದಿಢೀರ್ ಅಂತ ಒಂದು ಸಂಚಲನ ಸೃಷ್ಠಿಯಾಗಿದೆ. ನಟಿಮಣಿಯರೆಲ್ಲಾ ರೊಚ್ಚಿಗೆದ್ದು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್‌ಗಳನ್ನ ಹಾಕುವ ಮೂಲಕ ಪ್ರತಿಭಟನೆಗೆ ಇಳಿದಿದ್ದಾರೆ. ಮೊದಲಿಗೆ ಸಪ್ತಮಿ ಗೌಡ ಎತ್ತಿದ ಧ್ವನಿಗೆ ರಕ್ಷಿತಾ, ರಮ್ಯಾ, ರುಕ್ಮಿಣಿ ವಸಂತ್ ಸೇರಿದಂತೆ ಇಡೀ ಚಿತ್ರರಂಗ ಬೆನ್ನೆಲುಬಾಗಿ ನಿಂತಿದೆ. ಆಕೆಯ ಧ್ವನಿಗೆ ತಾವೂ ಜೈ ಜೋಡಿಸೋ ಮೂಲಕ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಬರೀ ನಟಿಯರಷ್ಟೇ ಅಲ್ಲ.. ಸ್ಟಾರ್ ನಟರು ಕೂಡ ನಟಿಯರಿಗೆ ಸಾಥ್ ನೀಡ್ತಿರೋದು ಮತ್ತೊಂದು ಅಚ್ಚರಿ. ಇಷ್ಟಕ್ಕೂ ಏನಾಯ್ತು..? ತಾರೆಯರ ಈ ಡಿಜಿಟಲ್ ಅಭಿಯಾನ ಏತಕ್ಕಾಗಿ..? ಇಂದಿನ ಈ ಎಪಿಸೋಡ್‌‌ನಲ್ಲಿ ಗ್ಯಾರಂಟಿ ನ್ಯೂಸ್ ಎಳೆ ಎಳೆಯಾಗಿ ಪಿನ್ ಟು ಪಿನ್ ಡಿಟೈಲ್ಸ್ ಬಿಚ್ಚಿಡ್ತೀವಿ ನೋಡಿ.

ಪಾಪರಾಝಿಗಳ ಅಟ್ಟಹಾಸ..ಮಟ್ಟ ಹಾಕಲು ಒಗ್ಗಟ್ಟಿನ ಮಹಾ ಮಂತ್ರ

ಮಹಿಳಾ ಗೌರವಕ್ಕೆ ಧಕ್ಕೆ..ನಟಿಯರ ಅಭಿಯಾನಕ್ಕೆ ಗ್ಯಾರಂಟಿ ಸಾಥ್

ಗೌರವಕ್ಕಾಗಿ ನಟಿಯರೇ ಗೋಗರೆಯುವ ಪರಿಸ್ಥಿತಿ ನಮ್ಮ ಕನ್ನಡ ಚಿತ್ರರಂಗದಲ್ಲಿ ಶುರುವಾಗಿದೆ. ನಟಿಯರೇ ಹೀಗಾದ್ರೆ ಇನ್ನೂ ಸಾಮಾನ್ಯ ಹೆಣ್ಣಿನ ಗತಿ ಏನಾಗಬೇಕು ನೀವೇ ಹೇಳಿ. ಅಂದಹಾಗೆ ಇದು ಚಿತ್ರರಂಗದ ಮಹಿಳಾ ಮಣಿಯರು ಎದುರಿಸುತ್ತಿರೋ ಗಂಭೀರ ಸಮಸ್ಯೆಯೂ ಹೌದು. ಅಸಭ್ಯ ಹಾಗೂ ಅಸಹ್ಯ ವಿಡಿಯೋ, ಫೋಟೋ ತೆಗೆಯೋರಿಗೆ ಮಂಗಳಾರತಿ ಮಾಡ್ತಿದ್ದಾರೆ ನಟಿಯರು. ಕಲೆಗಿಂತ ನಟಿಯರ ದೇಹದ ಮೇಲೆಯೇ ಅವ್ರ ಕೆಟ್ಟ ಕಣ್ಣು, ಕ್ಯಾಮೆರಾ ಕಣ್ಣು ಇರುತ್ತೆ. ಅಂತಹ ಅಸಭ್ಯ ಹಾಗೂ ಅವಮಾನಕಾರಿ ವಿಷಯಗಳನ್ನ ಒಪ್ಪಲಾಗುವುದಿಲ್ಲ. ನಾವು ಕಲೆಗಾಗಿ ಬಂದಿದ್ದೇವೆ.. ಸಿನಿಮಾಗಾಗಿ ಬಂದಿದ್ದೇವೆ. ಉದ್ದೇಶಪೂರ್ವಕವಾಗಿ ಝೂಮ್ ಮಾಡಿ ನಮ್ಮನ್ನ ಚಿತ್ರೀಕರಿಸುತ್ತಾರೆ. ಅಸಭ್ಯ ಕೋನಗಳಿಂದ ಸೆರೆಹಿಡಿದು ನಮ್ಮ ಗೌರವಕ್ಕೆ ಧಕ್ಕೆ ತರುತ್ತಿದ್ದಾರೆ ಅಂತ ಸಿನಿಮಾ, ಸಿನಿಮೇತರ ಕಾರ್ಯಕ್ರಮಗಳಲ್ಲಿ ಮುಗಿಬೀಳುವ ಪಾಪರಾಝಿಗಳ ವಿರುದ್ಧ ಗುಡುಗಿದ್ದಾರೆ ನಟಿಯರು.

ಸಪ್ತಮಿ, ಸಾನ್ವಿ ಸುದೀಪ್, ವೈಷ್ಣವಿಗೆ ಮುಜುಗರ ಆಗಿದ್ಯಾಕೆ..?!

ಛೀ.. ಥೂ.. ಸ್ಟಾಪ್ ಇಟ್.. ಈ ರೀತಿಯ ವೀವ್ಸ್, ಹಣ ಬೇಕೆ?

ಪಾಪರಾಝಿಗಳ ಅಟ್ಟಹಾಸವನ್ನ ಮಟ್ಟ ಹಾಕಲು ಒಗ್ಗಟ್ಟಿನ ಮಹಾ ಮಂತ್ರ ಜಪಿಸುತ್ತಿದ್ದಾರೆ. ಮಹಿಳಾ ಗೌರವಕ್ಕೆ ಧಕ್ಕೆ ಬಂದಿದ್ದು, ಆ ನಟಿಯರ ಅಭಿಯಾನಕ್ಕೆ ಗ್ಯಾರಂಟಿ ನ್ಯೂಸ್ ಕೂಡ ಸಾಥ್ ನೀಡಿದೆ. ಕಾರ್ಯಕ್ರಮಗಳನ್ನ ವರದಿ ಮಾಡುವವರು ವೃತ್ತಿಪರತೆ  ಕಾಪಾಡಿಕೊಳ್ಳಬೇಕು. ಸಾಮಾನ್ಯ ಗೌರವ ಹಾಗೂ ಶಿಸ್ತನ್ನು ಕಾಪಾಡಲು ನಿರೀಕ್ಷಿಸುತ್ತೇವೆ.  ಈ ಗಡಿ ರೇಖೆಯನ್ನ ಸ್ಪಷ್ಟವಾಗಿ ಎಳೆದು ಒಟ್ಟಾಗಿ ನಿಂತಿದ್ದೇವೆ. ಅಂತಹ ಕೆಟ್ಟ ಅನುಭವ ಎದುರಿಸಿದವರ ಐಕ್ಯತೆಗೆ ನಾವು ನಿಂತಿದ್ದೇವೆ. ಗೌರವವನ್ನು ಬೇಡುವ ನಮ್ಮ ಧ್ವನಿ ಮುಂದುವರೆಯುತ್ತದೆ ಅಂತ ಎಲ್ಲರೂ ಗಟ್ಟಿಯಾಗಿ ಧ್ವನಿ ಎತ್ತಿದ್ದಾರೆ.

ಅಸಭ್ಯ, ಅಸಹ್ಯ ವಿಡಿಯೋ, ಫೋಟೋ ತೆಗೆಯೋರಿಗೆ ಮಂಗಳಾರತಿ

ಕಲೆಗಿಂತ ನಟಿಯರ ದೇಹದ ಮೇಲೆಯೇ ಅವ್ರ ಕಣ್ಣು, ಕ್ಯಾಮೆರಾ ಕಣ್ಣು

ಇಷ್ಟಕ್ಕೂ ಡಿಜಿಟಲ್ ಮಾಧ್ಯಮ ಬಂದ ಬಳಿಕ ಮೊಬೈಲ್ ಜರ್ನಲಿಸಂ ಹಾವಳಿ ಹೆಚ್ಚಾಗಿದೆ. ಮಾಧ್ಯಮ ಜವಾಬ್ದಾರಿ ಅರಿಯದವರೆಲ್ಲಾ ಇಂದು ಜರ್ನಲಿಸ್ಟ್‌‌ಗಳೇ ಆಗಿದ್ದಾರೆ. ನಟಿಮಣಿಯರಿಗೆ ಹೀಗೆ ಮುಜುಗರ ತರಿಸೋ ನೀವು ಜರ್ನಲಿಸ್ಟ್‌‌ಗಳೇ..? ಸಭ್ಯವಾಗಿ ಜರ್ನಲಿಸಂ ಮಾಡೋರಿಗೂ ನಿಮ್ಮಂಥವರಿಂದ ಕಳಂಕ. ಸಿನಿಮಾ ಮತ್ತು ಅವರ ಕಲೆಯನ್ನ ಪ್ರೋತ್ಸಾಹಿಸಿ, ಅವ್ರ ದೇಹ, ಅಂಗಾಂಗಗಳನ್ನಲ್ಲ.

ಹಾಗಾದ್ರೆ ಇಲ್ಲಿಯವರೆಗೆ ಯಾರೆಲ್ಲಾ ಹೀಗೆ ಮುಜುಗರಕ್ಕೆ ಈಡಾಗಿದ್ದಾರೆ ಅನ್ನೋದನ್ನ ಹೇಳ್ತೀವಿ ಕೇಳಿ.  ಸೀರಿಯಲ್ ನಟಿ ವೈಷ್ಣವಿಗೆ ಸಿನಿಮಾ ಪ್ರೀಮಿಯರ್ ವೇಳೆ ಇರಿಸು ಮುರಿಸು ಆಗುವಂತೆ ಮಾಡಿದ್ರು ಪಾಪರಾಝಿಗಳು. ಹೌದು.. ಪ್ರೇಮಕಾವ್ಯ ಸೀರಿಯಲ್ ನಟಿಯ ವಿಡಿಯೋ ಟ್ರೋಲ್ ಆಗಿ, ಆಕೆ ಎಷ್ಟು ಮುಗುಗರ ಅನುಭವಿಸಿದ್ರು ಅನ್ನೋದನ್ನ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಇನ್ನೂ ನಟ ಸುದೀಪ್ ಮಗಳು ಸಾನ್ವಿ ಸುದೀಪ್‌ಗೂ ಇದು ತಪ್ಪಲಿಲ್ಲ. ಆ ಪಾಪರಾಝಿಗಳ ಕಾಟದಿಂದ ಮಾರ್ಕ್ ಚಿತ್ರದ ಫಸ್ಟ್ ಡೇ ಫಸ್ಟ್ ಶೋ ವೇಳೆ ಸಾನ್ವಿ ಸುದೀಪ್‌ ತುಂಬಾ ಅನ್‌ ಕಂಫರ್ಟಬಲ್ ಫೀಲ್ ಮಾಡಿದ್ರು. ಸುದೀಪ್ ಅವರ ತಾಯಿ ಅಂತಿಮ ದರ್ಶನದ ವೇಳೆಯೂ ಸಾನ್ವಿಗೆ ಮುಜುಗರ ತರಿಸಿದ್ರು.

ಫಿಲ್ಮ್ ಚೇಂಬರ್ ಅಧ್ಯಕ್ಷೆ ಜಯಮಾಲಾ ಕೂಡ ಮಹಿಳಾಮಣಿ!

ಸ್ಯಾಂಡಲ್‌ವುಡ್‌ನ ಈ ಸಮಸ್ಯೆಗೆ ಕೊಡ್ತಾರಾ ತಾರ್ಕಿಕ ಅಂತ್ಯ..?

ಮುಖಕ್ಕೇನೇ ಕ್ಯಾಮೆರಾ ಇಡುವ ಕೆಲಸ ಮಾಡ್ತಾರೆ ಕೆಲ ಪಾಪರಾಝಿಗಳು. ಇವರು ಮಾಡೋ ವಿಡಿಯೋಗಳಿಂದ ಟ್ರೋಲರ್ಸ್‌ ಗೆ ಆಹಾರ ಆಗ್ತಿದೆ. ನಂತರ ಅದು ಬಾಡಿ ಶೇಮಿಂಗ್ ಮಾಡಿ ಟ್ರೋಲ್ ಮಾಡುವ ಹಂತಕ್ಕೆ ಹೋಗ್ತಿದೆ. ಈ ಬಗ್ಗೆ ತುಟಿಕ್ ಪಿಟಿಕ್ ಅಂತಿಲ್ಲ ಫಿಲ್ಮ್ ಚೇಂಬರ್. ಸದ್ಯ ಫಿಲ್ಮ್ ಚೇಂಬರ್ ಅಧ್ಯಕ್ಷೆ ಕೂಡ ಮಹಿಳಾ ನಟಿಮಣಿಯೇ. ಅಧಿಕಾರದ ಚುಕ್ಕಾಣಿಯಲ್ಲಿರೋದು ಹಿರಿಯನಟಿ ಜಯಮಾಲಾ. ಈ ಹಿಂದೆ ಸ್ಯಾಟಲೈಟ್ ಚಾನೆಲ್‌ಗಳ ಪ್ರತಿನಿಧಿಗಳು ಈ ಬಗ್ಗೆ ಫಿಲ್ಮ್ ಚೇಂಬರ್ ಗಮನಕ್ಕೆ ತಂದಿದ್ದರು. ಆದ್ರೆ ಆ ಬಗ್ಗೆ ತಾತ್ಸಾರ ತೋರಿತ್ತು ಫಿಲ್ಮ್ ಚೇಂಬರ್. ಇದೀಗ ಇಡೀ ಕನ್ನಡ ಚಿತ್ರರಂಗ ಪಾಪರಾಝಿಗಳ ವಿರುದ್ಧ ಗುಡುಗುತ್ತಿದೆ. ಈಗ ಏನು ಮಾಡ್ತಾರೆ ಜಯಮಾಲಾ..?

ಡಾಲಿ, ದುನಿಯಾ ವಿಜಯ್, ನೀನಾಸಂ ಸತೀಶ್ ಬಲ

ಅಂಕುಶ ಹಾಕೋದು ಯಾರು..? ಹೇಗೆ..? ಯಾವಾಗ..?

ಹಿರಿಯನಟಿ ಮಾಳವಿಕಾ, ತಾರಾ, ಸುಧಾರಾಣಿ ಕೂಡ ಬೆಂಬಲ ಸೂಚಿಸಿದ್ದಾರೆ. ತರುಣ್-ಸೋನಾಲ್, ಆಶಿಕಾ, ನಿಶ್ವಿಕಾ, ರೀಷ್ಮಾ ನಾಣಯ್ಯ, ಸಂಜನಾ ಆನಂದ್, ಚೈತ್ರಾ ಆಚಾರ್, ಅಮೃತಾ ಅಯ್ಯಂಗಾರ್, ಖುಷಿ ರವಿ, ಬೃಂದಾ, ಮಲೈಕಾ, ಮೇಘನಾ ರಾಜ್, ದುನಿಯಾ ವಿಜಯ್, ದುನಿಯಾ ವಿಜಯ್ ಮಕ್ಕಳು ಮೋನಿಷಾ-ರಿತನ್ಯಾ, ಅನುಪಮಾ ಗೌಡ,ನೀನಾಸಂ ಸತೀಶ್, ವಾಸುಕಿ ವೈಭವ್, ರಾಜವರ್ಧನ್, ಯುವರಾಜ್‌‌ಕುಮಾರ್, ಡಾಲಿ ಸೇರಿದಂತೆ ಎಲ್ಲರೂ ಈ ವಿಚಾರ ಅಭಿಮತ ವ್ಯಕ್ತಪಡಿಸಿದ್ದಾರೆ.

ಸೋಶಿಯಲ್ ಮೀಡಿಯಾ ಸದ್ಬಳಕೆ ಆಗ್ಬೇಕೇ ಹೊರತು ದುರ್ಬಳಕೆ ಅಲ್ಲ. ಸದ್ಯ ಬಳಕೆಗಿಂತ ದುರ್ಬಳಕೆಯೇ ಜಾಸ್ತಿ ಆಗ್ತಿದೆ. ಕೋಟಿ ಕೋಟಿ ರೂಪಾಯಿ ಸುರಿದು ಬಂಡವಾಳ ಹಾಕೋ ನಿರ್ಮಾಪಕರಿಗೆ ಇಂತಹ ಪಾಪರಾಝಿಗಳಿಂದ ನಯಾ ಪೈಸೆ ಉಪಯೋಗ ಇಲ್ಲ. ಕಂಟೆಂಟ್ ಬಗ್ಗೆ ಮಾತನಾಡದೆ ಔಟ್ ಆಫ್ ದಿ ಬಾಕ್ಸ್ ಕಂಟೆಂಟ್ ಮಾತಾಡೋ ಇವರುಗಳಿಗೆ ಸದ್ಯದಲ್ಲೇ ಅಂಕುಶ ಹಾಕೋ ಪ್ರಯತ್ನಗಳು ಬಲವಾಗಿ ನಡೆಯುತ್ತಿವೆ. ಮಾಧ್ಯಮದ ಜವಾಬ್ದಾರಿ ಮೆರೆಯಬೇಕಿದ್ದ ಪಾಪರಾಝಿಗಳು, ಮಾಧ್ಯಮದ ಭಾಗವಾಗಿದ್ದುಕೊಂಡೇ ಮಾಧ್ಯಮಗಳಿಗೆ ಕಳಂಕ ತರುತ್ತಿದ್ದಾರೆ. ಅಂತಹವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲೇಬೇಕು.

 

 

 

Exit mobile version