ಸಮಂತಾ-ನಾಗಚೈತನ್ಯ ಮತ್ತೆ ಬಿಗ್ ಸರ್‌ಪ್ರೈಸ್..ಏನದು ?

ಇತ್ತೀಚೆಗಷ್ಟೇ ನಟಿ ಶೋಭಿತಾ ಕೈ ಹಿಡಿದಿರೋ ನಾಗಚೈತನ್ಯ..!

Web 2025 06 17t134915.497

ಸಮಂತಾ ಹಾಗೂ ನಾಗಚೈತನ್ಯ ಚಿತ್ರಪ್ರೇಮಿಗಳಿಗೆ ಸಾಕಷ್ಟು ಸಲ ಸರ್‌ಪ್ರೈಸ್ ನೀಡಿದ್ದಾರೆ. ಇದೀಗ ಮಗದೊಮ್ಮೆ ಬಿಗ್ ಸರ್‌ಪ್ರೈಸ್ ನೀಡಲು ತುದಿಗಾಲಲ್ಲಿ ನಿಂತಿದ್ದಾರೆ. ಅರೇ ಮೊನ್ನೆಯಷ್ಟೇ ನಾಗಚೈತನ್ಯ ಹೊಸದಾಗಿ ಮದ್ವೆ ಆದ್ರಲ್ವಾ..? ಮತ್ತೆ ಈ ಜೋಡಿ ಏನಾದ್ರೂ ಒಂದಾಗ್ತಿದ್ಯಾ ಹೇಗೆ ಅಂತ.

ಒಂದು ಕಾಲದ ಟಾಲಿವುಡ್ ಲವ್ ಬರ್ಡ್ಸ್ ಆಗಿದ್ರು ಚೆಲುವೆ ಸಮಂತಾ ಹಾಗೂ ಕಿಂಗ್ ನಾಗಾರ್ಜುನ್ ಹಿರಿಯ ಮಗ ಅಕ್ಕಿನೇನಿ ನಾಗಚೈತನ್ಯ. ಅದ್ರಲ್ಲೂ ಆನ್ ಸ್ಕ್ರೀನ್ ಇವರ ಕೆಮಿಸ್ಟ್ರಿ ನೋಡಿದವರು ವ್ಹಾವ್ ಎಂಥಾ ಜೋಡಿ ಗುರು..? ಇವರು ರಿಯಲ್ ಲೈಫ್‌‌ನಲ್ಲೂ ಒಂದಾದ್ರೆ ಸೂಪರ್ ಆಗಿರುತ್ತೆ ಅಂದುಕೊಂಡವರೇ ಹೆಚ್ಚು. ಅದು ಅವರಿಗೂ ಅನಿಸಿತ್ತು. ಹಾಗಾಗಿಯೇ ಏಳು ವರ್ಷಗಳ ಪ್ರೀತಿಗೆ ಸಾಕ್ಷಿಯಾಗಿ 2017ರಲ್ಲಿ ಸಪ್ತಪದಿ ತುಳಿದರು.

ADVERTISEMENT
ADVERTISEMENT

ಒಂದೋ ಅಥ್ವಾ ಎರಡೋ ಅಲ್ಲ, ಸಾಲು ಸಾಲು ಸಿನಿಮಾಗಳಲ್ಲಿ ಒಟ್ಟೊಟ್ಟಿಗೆ ತೆರೆ ಹಂಚಿಕೊಂಡರು. ಪ್ರೇಕ್ಷಕರು ಕೂಡ ಇವ್ರ ಜೋಡಿಯನ್ನ ಮತ್ತೆ ಮತ್ತೆ ಒಟ್ಟಿಗೆ ನೋಡಲು ಇಷ್ಟ ಪಡ್ತಿದ್ರು. ಆದ್ರೆ ಅದ್ಯಾರ ಕಣ್ಣು ಬಿತ್ತೋ ಏನೋ ಗೊತ್ತಿಲ್ಲ. ಇಬ್ಬರ ನಡುವೆ ಪರಸ್ಪರ ಭಿನ್ನಾಭಿಪ್ರಾಯಗಳು ಬಂದವು. ನಂತರ ಆ ಸತಿ-ಪತಿ ಅನ್ನೋ ಬಂಧನದಿಂದ ವಿಮುಕ್ತರಾಗುವ ಮನಸ್ಸು ಮಾಡಿದ್ರು. ಅದ್ರಂತೆ 2021ರಲ್ಲಿ ತಮ್ಮ 4 ವರ್ಷಗಳ ಸಹ ಜೀವನಕ್ಕೆ ಫುಲ್‌ಸ್ಟಾಪ್ ಇಟ್ಟರು.

ವೈಯಕ್ತಿಕ ಬಾಳಲ್ಲಿ ಬಿರುಗಾಳಿ ಮೂಡಿದ ಬಳಿಕ ಪರಸ್ಪರ ಮಾತುಕತೆ ಮೂಲಕ ಡಿವೋರ್ಸ್‌ ಪಡೆಯಿತು ಜೋಡಿ. ಸಮಂತಾ ಅದೇ ನೋವಲ್ಲಿ ಕೊರಗುತ್ತಲೇ ಇದ್ದಾರೆ. ಆದ್ರೆ ನಾಗಚೈತನ್ಯ ಅದನ್ನ ಬಹಳ ಲಘುವಾಗಿ ಪರಿಗಣಿಸಿ, ಕಳೆದ ವರ್ಷ ನಟಿ ಶೋಭಿತಾ ಕೈ ಹಿಡಿಯೋ ಮೂಲಕ ಹೊಸ ಲೈಫ್ ಶುರು ಮಾಡಿದ್ದಾರೆ. ಇಷ್ಟೆಲ್ಲಾ ಆದ ಬಳಿಕವೂ ಈ ಸ್ಯಾಮ್ ಹಾಗೂ ಚೈತು ಮತ್ತೊಮ್ಮೆ ಚಿತ್ರಪ್ರೇಮಿಗಳಿಗೆ ಹಾಗೂ ಫ್ಯಾನ್ಸ್‌ಗೆ ಮತ್ತೊಂದು ಸರ್‌‌ಪ್ರೈಸ್ ಕೊಡಲು ಸಜ್ಜಾಗಿರೋದು ಅಚ್ಚರಿ.

ಏ ಮಾಯ ಚೇಸಾವೆ ಸಿನಿಮಾದಿಂದ ನಾಯಕನಟಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಶಡಿದ್ರು ನಟಿ ಸಮಂತಾ. ಇನ್ನು ಆಗಷ್ಟೇ ಜೋಶ್ ಸಿನಿಮಾ ಮಾಡಿ ಅದೇ ಜೋಶ್‌‌ನಲ್ಲಿ ಸಮಂತಾ ಜೊತೆ ನಟನೆಗೆ ಬಂದಿದ್ದ ನಾಗಚೈತನ್ಯ, ಆಕೆಯ ಮೋಹದಲ್ಲಿ ಬೀಳ್ತಾರೆ. ಗೌತಮ್ ವಾಸುದೇವ ಮೆನನ್ ಈ ಜೋಡಿಯನ್ನ ಅಷ್ಟು ರೊಮ್ಯಾಂಟಿಕ್ ಹಾಗೂ ಯೂತ್‌ಫುಲ್ ಆಗಿ ಸಿನಿಮಾದಲ್ಲಿ ತೋರಿಸ್ತಾರೆ.

ಅಂದಹಾಗೆ ಸಮಂತಾ ಈ ಚಿತ್ರದಿಂದ ಬರೀ ಚಿತ್ರರಂಗಕ್ಕೆ ಪರಿಚಯವಾಗಲಿಲ್ಲ. ನಾಗಚೈತನ್ಯ ಅನ್ನೋ ವ್ಯಕ್ತಿಗೆ ವೈಯಕ್ತಿಕವಾಗಿ ಪರಿಚಯವಾಗ್ತಾರೆ. ಪ್ರೀತಿ, ಪ್ರೇಮ, ಪ್ರಣಯ ಅನ್ನುವಂತೆ. ಸದ್ಯ ನಾನೊಂದು ತೀರಾ ನೀನೊಂದು ತೀರಾ ಅಂತಿದ್ದಾರೆ. ಇದರ ಮಧ್ಯೆ ಈ ಸಿನಿಮಾನ ನಿರ್ಮಾಣ ಸಂಸ್ಥೆ ರೀ- ರಿಲೀಸ್ ಮಾಡೋಕೆ ಮುಂದಾಗಿದೆ. ಯಶಸ್ವಿ 15 ವರ್ಷ ಪೂರೈಸಿರೋ ಈ ಸಿನಿಮಾ ಇಂದಿಗೂ ನೋಡುಗರನ್ನ ಸೆಳೆಯುವಂತಹ ಮಾಯೆಯಾಗಿದೆ. ಅದೇ ಕಾರಣಕ್ಕೆ ಮುಂದಿನ ತಿಂಗಳು ಜುಲೈನಲ್ಲಿ ಮರು ಬಿಡುಗಡೆ ಆಗ್ತಿದೆ.

ರೀ-ರಿಲೀಸ್ ಸುದ್ದಿ ತಿಳಿದು ಫ್ಯಾನ್ಸ್ ಮಿಶ್ರ ಪ್ರತಿಕ್ರಿಯೆ ನೀಡ್ತಿದ್ದಾರೆ. ನಾಗಚೈತನ್ಯ ಏನೋ ಓಕೆ. ಆದ್ರೆ ಸಮಂತಾಗೆ ಇದು ಹೇಗಾಗಬೇಡ. ಪಾಪ ಆ ಹೃದಯ ಅದೆಷ್ಟು ನೊಂದುಕೊಳ್ಳುತ್ತೆ ಅಂತೆಲ್ಲಾ ಸ್ಯಾಮ್ ಪರ ಬ್ಯಾಟ್ ಬೀಸುತ್ತಿದ್ದಾರೆ. ವೈಯಕ್ತಿಕ ಜೀವನ, ಆರೋಗ್ಯ ಎಲ್ಲವೂ ಕೈ ಕೊಟ್ಟ ಹಿನ್ನೆಲೆ ಸಮಂತಾ ಈಗಾಗ್ಲೇ ಸಾಕಷ್ಟು ನೊಂದಿದ್ದಾರೆ. ಸೋ.. ಇದನ್ನ ಸಮಂತಾ ಹೇಗೆ ಸ್ವೀಕರಿಸ್ತಾರೆ ಅನ್ನೋದೇ ಯಕ್ಷ ಪ್ರಶ್ನೆ.

Exit mobile version