ಬೆಂಗಳೂರಿನ ರಂಗಭೂಮಿಯಲ್ಲಿ ದೇವಿಶ್ರೀ ಪ್ರಸಾದ್ ಅವರ ಸಂಗೀತ ಲೈವ್ ಕಾನ್ಸರ್ಟ್ನಲ್ಲಿ ಸ್ಯಾಂಡಲ್ವುಡ್ ತಾರೆಗಳು ತುಂಬಿದರು.ಕಿಚ್ಚ ಸುದೀಪ್ ಅವರು ಆಗಮನ, ‘ಮೈಕೆಲ್ ಜ್ಯಾಕ್ಸನ್’ ಪ್ರಭುದೇವರ ಡ್ಯಾನ್ಸ್, ಶಿವರಾಜ್ಕುಮಾರ್ ಅವರ ಪ್ರೀತಿಯ ಅಪ್ಪುಗೆ ಮತ್ತು ಗಣೇಶ್ ಆಚಾರ್ಯರ ನೃತ್ಯ ಪ್ರದರ್ಶನ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು. ಈ ಸಮಾರಂಭದ ರಂಗನ್ನು ಹೆಚ್ಚಿಸಲು ಸ್ಯಾಂಡಲ್ವುಡ್ ಸ್ಟಾರ್ಸ್ ಕೂಡ ಆಗಮಿಸಿದ್ದರು ವಿಶೇಷವಾಗಿತ್ತು.ಬಹಳ ಅಚ್ಚುಕಟ್ಟಾಗಿ ನಡೆದ ಲೈವ್ ಕಾನ್ಸರ್ಟ್ನಲ್ಲಿ ‘ಹ್ಯಾಟ್ರಿಕ್ ಹೀರೋ’ ಶಿವರಾಜ್ ಕುಮಾರ್, ‘ಕಿಚ್ಚ’ ಸುದೀಪ್, ಗಣೇಶ್, ಪ್ರಜ್ವಲ್ ದೇವರಾಜ್, ಶ್ರೀಮುರಳಿ, ಅಶ್ವಿನಿ ಪುನೀತ್ ರಾಜ್ಕುಮಾರ್, ತರುಣ್ ಸುಧೀರ್, ಪವನ್ ಒಡೆಯರ್, ಸಂಗೀತ ನಿರ್ದೇಶಕರಾದ ಹರಿಕೃಷ್ಣ, ಗುರುಕಿರಣ್, ಜೂಡಾ ಸ್ಯಾಂಡಿ, ಪೂರ್ಣ ಚಂದ್ರ ತೇಜಸ್ವಿ, ಮಾನ್ವಿತಾ ಕಾಮತ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಕೆವಿಎನ್ನ ವೆಂಕಟ್ ನಾರಾಯಣ್ ಕೊನಂಕಿ ಸೇರಿದಂತೆ ಅನೇಕರು ಆಗಮಿಸಿದ್ದರು.