ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್.
ಡಿವೈನ್ಸ್ಟಾರ್ ರಿಷಬ್ ಶೆಟ್ಟಿ ಇತ್ತೀಚೆಗಷ್ಟೇ ಹೊಂಬಾಳೆ ಫಿಲ್ಮ್ಸ್ ಇನ್ಸ್ಟಾ ಅಕೌಂಟ್ ಅನ್ಫಾಲೋ ಮಾಡಿದ್ರು. ಈ ಬೆನ್ನಲ್ಲೆ ತಮ್ಮ ಆಪ್ತ ಗೆಳೆಯ ರಾಜ್ ಬಿ ಶೆಟ್ಟಿ ಅವ್ರನ್ನ ಕೂಡ ರಿಷಬ್ ಅನ್ಫಾಲೋ ಮಾಡಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಶೆಟ್ರು ತಮ್ಮ ಕಾಂತಾರ ಚೆಲುವೆಯನ್ನು ಅನ್ಫಾಲೋ ಮಾಡಿ ಮತ್ತೆ ಸುದ್ದಿಯಾಗಿದ್ದಾರೆ. ಅಷ್ಟಕ್ಕೂ ರಿಷಬ್ ಶೆಟ್ಟಿ ಹೀಗೆ ಒಬ್ಬೊಬರನ್ನೇ ಅನ್ಫಾಲೋ ಮಾಡ್ತಾ ಇರೋದು ಯಾಕೆ ಅಂತ ಹೇಳ್ತೀವಿ, ಈ ಸ್ಟೋರಿ ನೋಡಿ.
- ಹೊಂಬಾಳೆ – ರಿಷಬ್ ನಡುವೆ ಬಿರುಕು..? ಇಂಡಸ್ಟ್ರಿ ಶಾಕ್..!
- ರಾಜ್, ರುಕ್ಮಿಣಿನ ಅನ್ಫಾಲೋ… ಫ್ರೆಂಡ್ಶಿಪ್ಗೆ ಬಿತ್ತಾ ಬ್ರೇಕ್ ..?
- ‘ಕಾಂತಾರ’ ಸಕ್ಸಸ್ ಬಳಿಕ ಆಪ್ತ ಬಳಗದಿಂದ ರಿಷಬ್ ದೂರ..!?
- ಕಾಂತಾರ-2 ಸ್ವಂತ ಬ್ಯಾನರ್ಗೆ ಶಿಫ್ಟ್ ಆಗ್ತಾರಾ ರಿಷಬ್ ಶೆಟ್ಟಿ..?
ರಿಷಬ್ ಶೆಟ್ಟಿ ಮತ್ತು ಹೊಂಬಾಳೆ ಫಿಲ್ಮ್ಸ್ ನಡುವೆ ಎಲ್ಲವೂ ಸರಿಯಿಲ್ಲ ಅನ್ನೋ ಮಾತುಗಳು ಕೆಲವು ದಿನಗಳಿಂದಲೇ ಗಾಳಿ ಮಾತಾಗಿದ್ದವು. ಆದ್ರೆ ಈಗ ಅದಕ್ಕೆ ಫ್ಯುಯೆಲ್ ಸಿಕ್ಕಂತೆ, ರಿಷಬ್ ಮೊದಲಿಗೆ ಹೊಂಬಾಳೆ ಫಿಲ್ಮ್ಸ್ ಪೇಜ್ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅನ್ ಫಾಲೋ ಮಾಡಿದ್ದಾರೆ. ಕಾಂತಾರ ಅಂತ ಬ್ಲಾಕ್ಬಸ್ಟರ್ ಕೊಟ್ಟ ಕಾಂಬಿನೇಶನ್ನಲ್ಲಿ ಬಿರುಕು ಬಿದ್ದಿದ್ಯಾ..? ಹೊಂಬಾಳೆ ಫಿಲ್ಮ್ಸ್ ಜೊತೆ ಸೇರಿ ‘ಕಾಂತಾರ’ ಸರಣಿ ಸಿನಿಮಾಗಳನ್ನು ಮಾಡಿದ್ದ ರಿಷಬ್ ಈಗ ತಮ್ಮದೇ ಹಾದಿ ಕಂಡುಕೊಳ್ಳುವ ಪ್ರಯತ್ನದಲ್ಲಿದ್ದಾರಾ ಎಂಬ ಅನುಮಾನ ಮೂಡಿದೆ.
ಇದಕ್ಕಿಂತಲೂ ಹೆಚ್ಚು ಶಾಕ್ ಏನು ಗೊತ್ತಾ..? ತಮ್ಮ ಕ್ಲೋಸ್ ಫ್ರೆಂಡ್ ರಾಜ್ ಬಿ. ಶೆಟ್ಟಿ ಅವರನ್ನು ಕೂಡ ರಿಷಬ್ ಇನ್ಸ್ಟಾಗ್ರಾಮ್ ನಲ್ಲಿ ಅನ್ಫಾಲೋ ಮಾಡಿದ್ದಾರೆ. ಕಾಂತಾರ ಸಿನಿಮಾ ವೇಳೆ ರಾಜ್ ಬಿ ಶೆಟ್ಟಿ ದೈವಕ್ಕೆ ಸಂಬಂಧಪಟ್ಟ ಕೆಲ ದೃಶ್ಯಗಳನ್ನ ನಿರ್ದೇಶನ ಮಾಡಿದ್ರು. ಆದ್ರೆ ಕಾಂತಾರ-1 ಬಂದಾಗ ರಾಜ್ ರಿಷಬ್ ಶೆಟ್ಟಿ ಅವರಿಂದ ಅಂತರ ಕಾಯ್ದುಕೊಂಡ್ರು ಈ ಬಗ್ಗೆ ಸಾಕಷ್ಟು ಪ್ರಶ್ನೆಗಳು ಕೇಳಿದಾಗಲು ರಾಜ್ ನೇರವಾಗಿ ಕಾಂತಾರ-1 ಚಿತ್ರಕ್ಕೂ ತಮಗೂ ಯಾವುದೇ ಸಂಬಂಧ ಇಲ್ಲ ಅಂತಲೇ ಹೇಳದ್ರೂ.. ಇದೀಗ ರಿಷಬ್ ರಾಜ್ ಅವ್ರನ್ನ ಇನ್ಸ್ಟಾದಲ್ಲಿ ಅನ್ಫಾಲೋ ಮಾಡಿರೋದು ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ.
ಅಲ್ಲದೇ ಹೊಂಬಾಳೆ, ರಾಜ್ ಬಿ ಶೆಟ್ಟಿ ಬಳಿಕ ರಿಷಭ್ ತಮ್ಮ ಕಾಂತಾರ-1 ಚಿತ್ರದ ನಟಿ ರುಕ್ಮಿಣಿ ವಸಂತ್ ಅವರನ್ನೂ ಇನ್ಸ್ಟಾದಲ್ಲಿ ಅನ್ಫಾಲೋ ಮಾಡಿದ್ದಾರೆ. ಜೊತೆಗೆ ರಿಷಬ್ ಶೆಟ್ಟಿ ಈ ಮೊದಲು ರುಕ್ಮಿಣಿ ವಸಂತ್ ಅವರನ್ನು ಫಾಲೋ ಮಾಡ್ತಿದ್ರಾ? ಎನ್ನುವ ಪ್ರಶ್ನೆ ಕೆಲವರನ್ನು ಕಾಡ್ತಿದೆ.
ರುಕ್ಮಿಣಿ, ಹೊಂಬಾಳೆ, ರಾಜ್. ಬಿ ಶೆಟ್ಟಿ ಮಾತ್ರವಲ್ಲ ಇನ್ನು 40 ಅಕೌಂಟ್ಗಳನ್ನು ರಿಷಬ್ ಅನ್ಫಾಲೋ ಮಾಡಿದ್ದಾರೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಈ ಬಗ್ಗೆ ಅಧಿಕೃತವಾಗಿ ಸ್ಪಷ್ಟನೆ ಸಿಕ್ಕಿಲ್ಲ. ಹೊಂಬಾಳೆ ಹಾಗೂ ರಾಜ್. ಬಿ ಶೆಟ್ಟಿ ಖಾತೆಯನ್ನು ರಿಷಬ್ ಅನ್ಫಾಲೋ ಮಾಡಿರುವುದು ಖಚಿತವಾಗ್ತಿದೆ. ‘ಕಾಂತಾರ’ ಚಿತ್ರದ ನಾಯಕಿ ಸಪ್ತಮಿ ಗೌಡ ಇನ್ಸ್ಟಾ ಅಕೌಂಟ್ ಅನ್ನು ರಿಷಬ್ ಫಾಲೋ ಮಾಡ್ತಿಲ್ಲ. ಹಾಗಾಗಿ ಮೊದಲಿನಿಂದ ರುಕ್ಮಿಣಿ ಅವರ ಅಕೌಂಟ್ ಕೂಡ ಫಾಲೋ ಮಾಡ್ತಿಲ್ವಾ? ಎನ್ನುವ ಅನುಮಾನ ಕೂಡ ಕೆಲವರನ್ನು ಕಾಡುತ್ತಿದೆ.
ಸದ್ಯ ರಿಷಬ್ ಶೆಟ್ಟಿ ‘ಜೈ ಹನುಮಾನ್’ ಚಿತ್ರದ ಕೆಲಸಗಳಲ್ಲಿ ಬ್ಯುಸಿಯಾಗಿದ್ದು, ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹೊಂಬಾಳೆ ಬ್ಯಾನರ್ ಬದಲಿಗೆ ರಿಷಬ್ ತಮ್ಮದೇ ಸ್ವಂತ ಬ್ಯಾನರ್ನಲ್ಲಿ ಕಾಂತಾರ -2 ನಿರ್ಮಾಣ ಮಾಡುತ್ತಾರಾ ಎಂಬ ಪ್ರಶ್ನೆಯೂ ಮೂಡಿದೆ. ಒಟ್ಟಿನಲ್ಲಿ ‘ಕಾಂತಾರ’ ಸಕ್ಸಸ್ ಬಳಿಕ ರಿಷಬ್ ಶೆಟ್ಟಿ ತಮ್ಮ ಆಪ್ತ ಬಳಗದಿಂದ ದೂರವಾಗುತ್ತಿದ್ದಾರಾ ಎಂಬ ಪ್ರಶ್ನೆ ಮೂಡಿದೆ.
ಒಟ್ಟಿನಲ್ಲಿ ಈ ಅನ್ಫಾಲೋ ಸೀರೀಸ್ ಸಣ್ಣ ವಿಚಾರ ಅಂತ ತೆಗೆದುಕೊಳ್ಳೋಕೆ ಆಗೋದಿಲ್ಲ. ಯಾಕಂದ್ರೆ ಇದರಲ್ಲಿ ಹೊಂಬಾಳೆ ಫಿಲ್ಮ್ಸ್, ರಾಜ್ ಬಿ. ಶೆಟ್ಟಿ, ರುಕ್ಮಿಣಿ ವಸಂತ್ ಇಂಡಸ್ಟ್ರಿಯ ಪ್ರಮುಖ ಹೆಸರುಗಳು ಸೇರಿವೆ. ಇದು ಕೇವಲ ಸೋಷಿಯಲ್ ಮೀಡಿಯಾ ಕ್ಲೀನ್ಅಪ್ ಆ? ಅಥವಾ ಒಳಗೊಳಗೆ ನಡೆಯುತ್ತಿರುವ ಭಿನ್ನಾಭಿಪ್ರಾಯಗಳ ಸುಳಿವಾ ಅನ್ನೋದು ಇನ್ನೂ ಕ್ಲಿಯರ್ ಆಗಿಲ್ಲ. ರಿಷಬ್ ಶೆಟ್ಟಿ ಮೌನವೇ ಈಗ ಹೆಚ್ಚು ಪ್ರಶ್ನೆ ಹುಟ್ಟಿಸುತ್ತಿದೆ. ‘ಕಾಂತಾರ-2’ ಯಾವ ದಿಕ್ಕಿನಲ್ಲಿ ಸಾಗುತ್ತೆ ಅನ್ನೋದು ಸ್ಪಷ್ಟವಾದಾಗ ಮಾತ್ರ ಈ ಗಾಸಿಪ್ಗಳಿಗೆ ಫುಲ್ ಸ್ಟಾಪ್ ಸಿಗಲಿದೆ.
| Reported by: ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್
