ರಜನಿ, ರಾಜ್‌‌ಕುಮಾರ್ ಹಾದಿ..ರಾಯರ ಮಠದಲ್ಲಿ ರಿಷಬ್

ಜೈ ಹನುಮಾನ್‌‌ಗೂ ಮುನ್ನ ರಾಯರ ಮೊರೆ ಹೋದ ಶೆಟ್ರು..!!

BeFunky collage 2026 02 25T135813.848

ರಜನೀಕಾಂತ್ ಹಾಗೂ ರಾಜ್‌‌ಕುಮಾರ್ ಹಾದಿಯಲ್ಲಿ ರಿಷಬ್ ಶೆಟ್ಟಿ ಕೂಡ ಸಾಗುತ್ತಿದ್ದಾರೆ. ಅವರಿಬ್ಬರೂ ಗುರು ರಾಯರ ಬಹುದೊಡ್ಡ ಭಕ್ತರು ಅನ್ನೋದು ಗೊತ್ತೇಯಿದೆ. ಇದೀಗ ಅವರುಗಳ ಹೆಜ್ಜೆಗಳಲ್ಲೇ ಡಿವೈನ್ ಸ್ಟಾರ್ ಕೂಡ ಹೆಜ್ಜೆ ಇಡ್ತಿರೋದು ಖುಷಿಯ ವಿಚಾರ. ಕಾಂತಾರ ಬಳಿಕ ಜೈ ಹನುಮಾನ್‌ಗೆ ಕೈ ಹಾಕಿರೋ ಶೆಟ್ರು, ಮಂತ್ರಾಲಯಕ್ಕೆ ತೆರಳಿ ಗುರು ರಾಯರ ಬಳಿ ಸಂಕಲ್ಪ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲ, ರಾಯರ ಸಿನಿಮಾ ಮಾಡೋ ಸೂಚನೆ ಕೂಡ ಸಿಕ್ಕಿದೆ.

ರಿಷಬ್ ಶೆಟ್ಟಿ..ಕಾಂತಾರ ಚಿತ್ರಗಳಿಂದ ಇಡೀ ವಿಶ್ವ ಸಿನಿದುನಿಯಾ ಕನ್ನಡ ಚಿತ್ರರಂಗದ ಬಗ್ಗೆ ಮಾತನಾಡುವಂತೆ ಮಾಡಿದ ಮಾಸ್ಟರ್‌ಮೈಂಡ್. ನಟನೆ, ನಿರ್ದೇಶನ, ಬರವಣಿಗೆ.. ಹೀಗೆ ಎಲ್ಲಾ ವಿಭಾಗಗಳಲ್ಲಿ ಪಳಗಿರೋ ಶೆಟ್ರು, ಏನೇ ಮಾಡಬೇಕಾದ್ರೂ ದೈವ ಸಂಕಲ್ಪ ಇದ್ದೇ ಇರುತ್ತೆ. ಇತ್ತೀಚೆಗೆ ಅಂಜನಾದ್ರಿ ಬೆಟ್ಟದಲ್ಲಿ ಶೆಟ್ರ ಮುಂದಿನ ಸಿನಿಮಾ ಜೈ ಹನುಮಾನ್ ಸೆಟ್ಟೇರಿತು. ಅದಕ್ಕೆ ಶ್ರೀರಾಮ, ಹನುಮಂತನ ಕೃಪೆ ಅಷ್ಟೇ ಅಲ್ಲ, ಗುರುರಾಯರ ಕೃಪೆ ಕೂಡ ಬೇಕಿದೆ.

ರಜನಿ, ರಾಜ್‌‌ಕುಮಾರ್ ಹಾದಿ..ರಾಯರ ಮಠದಲ್ಲಿ ರಿಷಬ್

ಜೈ ಹನುಮಾನ್‌‌ಗೂ ಮುನ್ನ ರಾಯರ ಮೊರೆ ಹೋದ ಶೆಟ್ರು..!!

ಜೈ ಹನುಮಾನ್ ಸಿನಿಮಾದ ಮುಹೂರ್ತ ಪೂಜೆ ಮುಗಿಸಿ ನೇರವಾಗಿ ಮಂತ್ರಾಲಯಕ್ಕೆ ತೆರಳಿರೋ ಡಿವೈನ್ ಸ್ಟಾರ್, ಅಲ್ಲಿ ಗುರುಸಾರ್ವ ಭೌಮರ ಮೊರೆ ಹೋಗಿದ್ದಾರೆ. ಕಾಂತಾರ-1 ಗೆಲುವು, ಜೈ ಹನುಮಾನ್‌ಗೆ ಅಡೆತಡೆಗಳಿಲ್ಲದೆ ಶೂಟಿಂಗ್ ಸುಸೂತ್ರವಾಗಿ ನಡೆಯಲಿ ಅಂತ ಬಹುದೊಡ್ಡ ಸಂಕಲ್ಪ ಕೂಡ ಮಾಡಿಕೊಂಡಿದ್ದಾರೆ. ಅಲ್ಲದೆ, ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗಳಿಗೆ ನಯವಾಗಿಯೇ ಉತ್ತರಿಸಿದ್ದಾರೆ.

ಮಂತ್ರಾಲಯ ಗುರುರಾಯರ ಸಿನಿಮಾ ಮಾಡ್ತಾರಾ ರಿಷಬ್..?

ಅಣ್ಣಾವ್ರು, ತಲೈವಾ ಬಹುದೊಡ್ಡ ಫಾಲೋವರ್ ಡಿವೈನ್ ಸ್ಟಾರ್

ಜೈ ಹನುಮಾನ್ ಸಿನಿಮಾದ ಕಾನ್ಸೆಪ್ಟ್‌‌ಗಿಂತ ಕಥೆ ಮುಖ್ಯ ಎಂದಿರೋ ರಿಷಬ್, ಮುಂದಿನ ದಿನಗಳಲ್ಲಿ ರಾಯರ ಕುರಿತು ಸಿನಿಮಾ ಮಾಡ್ತಾರಾ ಅನ್ನೋದ್ರ ಹಿಂಟ್ ಕೂಡ ನೀಡಿದ್ದಾರೆ. ಅಂದಹಾಗೆ ಶೆಟ್ರು ನಟಸಾರ್ವಭೌಮ ಡಾ. ರಾಜ್‌ಕುಮಾರ್ ಹಾಗೂ ಸೂಪರ್ ಸ್ಟಾರ್ ರಜನೀಕಾಂತ್‌ರ ಬಹುದೊಡ್ಡ ಅನುಯಾಯಿ. ಅವ್ರ ಸ್ಫೂರ್ತಿಯಿಂದಲೇ ಚಿತ್ರರಂಗಕ್ಕೆ ಕಾಲಿಟ್ಟವರು. ಹೀಗಾಗಿ ಅವರ ಹಾದಿಯಲ್ಲೇ ರಿಷಬ್ ಕೂಡ ಸಾಗುತ್ತಿರೋದು ಇಂಟರೆಸ್ಟಿಂಗ್.

ಡಾ. ರಾಜ್‌‌ಕುಮಾರ್ ಹಾಗೂ ರಜನೀಕಾಂತ್ ರಾಯರ ಬಹುದೊಡ್ಡ ಭಕ್ತರು ಅನ್ನೋದು ಇಡೀ ವಿಶ್ವಕ್ಕೇ ಗೊತ್ತು. ಅಲ್ಲಿಗೆ ಆಗಾಗ ಭೇಟಿ ನೀಡಿ, ಬೃಂದಾವನದ ದರ್ಶನ ಮಾಡಿಕೊಳ್ಳೋದ್ರ ಜೊತೆಗೆ ಗುರುರಾಯರ ಮಹತ್ವವನ್ನು ಸಾರುವ ಸಿನಿಮಾಗಳು, ಹಾಡುಗಳನ್ನ ಕೂಡ ಹಾಡಿದ್ದಾರೆ. ಅದಕ್ಕೆ ಎವರ್‌‌ಗ್ರೀನ್ ಸಿನಿಮಾ ಭಾಗ್ಯವಂತ, ಶ್ರೀ ರಾಘವೇಂದ್ರಸ್ವಾಮಿ ಮಹಾತ್ಮೆ ಚಿತ್ರಗಳೇ ಪ್ರತ್ಯಕ್ಷ ಸಾಕ್ಷಿ.

 ದೊಡ್ಮನೆ ರಾಘಣ್ಣ, PRO ವೆಂಕಟೇಶ್‌ಗೆ ಗೌರವ ಡಾಕ್ಟರೇಟ್

ಫ್ಲೋರಿಡಾದ ಯೋಗ ಸಂಸ್ಕೃತಂ ಯೂನಿವರ್ಸಿಟಿಯಿಂದ ಗೌರವ

ಮಂತ್ರಾಲಯದ ಸುಬುಧೇಂದ್ರ ಶ್ರೀಗಳಿಂದ ಡಾಕ್ಟರೇಟ್ ಸ್ವೀಕಾರ

ಕನ್ನಡ ಚಿತ್ರರಂಗಕ್ಕೆ ನಟ, ನಿರ್ಮಾಪಕರಾಗಿ ಸಾಕಷ್ಟು ಕೊಡುಗೆ ನೀಡಿರೋ ದೊಡ್ಮನೆಯ ರಾಘವೇಂದ್ರ ರಾಜ್‌‌ಕುಮಾರ್ ಹಾಗೂ ಸಿನಿಮಾ ಪ್ರಚಾರಕರ್ತ ಸುಧೀಂದ್ರ ವೆಂಕಟೇಶ್ ಅವರಿಗೆ ಮಂತ್ರಾಲಯದ ರಾಯರ ಆಲಯದಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು. ಫ್ಲೋರಿಡಾದ ಯೋಗ ಸಂಸ್ಕೃತಂ ಯೂನಿವರ್ಸಿಟಿ ನೀಡಿದ ಗೌರವ ಡಾಕ್ಟರೇಟ್‌‌ನ ಮಂತ್ರಾಲಯದ ಶ್ರೀ ಸುಬುಧೇಂದ್ರ ತೀರ್ಥರು ವಿಶ್ವವಿದ್ಯಾಲಯದ ಪರವಾಗಿ ಇವರುಗಳಿಗೆ ನೀಡಿದ್ರು.

ಇತ್ತೀಚೆಗೆ ಮಂತ್ರಾಲಯದಲ್ಲಿ ಗುರು ವೈಭವೋತ್ಸವ ಕಾರ್ಯಕ್ರಮ ಬಹಳ ಅರ್ಥಪೂರ್ಣ ಹಾಗೂ ಭಕ್ತಿಪೂರ್ವಕವಾಗಿ ನಡೆಯಿತು. ಅದೇ ಕಾರ್ಯಕ್ರಮದಲ್ಲಿ ಪಿಆರ್‌ಓ ವೆಂಕಟೇಶ್ ಹಾಗೂ ರಾಘಣ್ಣಗೆ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ಅನಾರೋಗ್ಯದ ನಡುವೆಯೂ ಅಲ್ಲಿಗೆ ತೆರಳಿ ರಾಯರ ಆಲಯದಲ್ಲಿ ಡಾಕ್ಟರೇಟ್ ಸ್ವೀಕರಿಸಿದ ರಾಘಣ್ಣ ಒಂದಷ್ಟು ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿ ಆದರು.

 

Exit mobile version