ರಾವಣ ಯಶ್ ಗೆ ಸಿಕ್ಕೇಬಿಟ್ಲು ಮಂಡೋದರಿ..!

ರಾಮಾಯಣ ಅಖಾಡಕ್ಕೆ ಸ್ಟಾರ್ ಹೀರೋಯಿನ್ ಎಂಟ್ರಿ

Befunky collage 2025 05 16t142730.064

ಬಿಟೌನ್ ರಾಮಾಯಣಕ್ಕೆ ರಾಕೀಭಾಯ್ ಎಂಟ್ರಿಕೊಟ್ಟಾಗಿನಿಂದ ಸಿಕ್ಕಾಪಟ್ಟೆ sensation ಕ್ರಿಯೇಟ್ ಮಾಡಿದೆ. ಅದ್ರಲ್ಲೂ ಸಿನಿಮಾದ ಸ್ಟಾರ್ ಕ್ಯಾಸ್ಟ್ ಮೇಲೆ ಗ್ಲೋಬಲ್ ಆಡಿಯೆನ್ಸ್ ಕಣ್ಣಿದೆ. ಈಗಾಗಲೇ ರಾಮಾಯಣ್ ಸಿನಿಮಾದಲ್ಲಿ ದೊಡ್ಡ ಸ್ಟಾರ್​ಗಳೇ ಇದ್ದಾರೆ. ಸದ್ಯ ಈಗ ರಾವಣನ ಸಹೋದರಿ ಮಂಡೋದರಿ ಪಾತ್ರಕ್ಕೆ ಮತ್ತೊಬ್ಬ ಸ್ಟಾರ್​ ನಟಿಯ ಆಗಮನವಾಗಿದೆ. ಹಾಗಾದ್ರೆ ಯಾರು ಆ ಸ್ಟಾರ್ ನಟಿ..? ಮಂಡೋದರಿ ಪಾತ್ರ ಮಾಡೋದು ಅವರೇನಾ.? ಮಂಡೋದರಿ ಪಾತ್ರಕ್ಕೆ ಆ ನಟಿ ಪಡೆದುಕೊಳ್ತಾಯಿರೋ ಸಂಭಾವನೆ ಎಷ್ಟು ಅನ್ನೋದನ್ನ ಹೇಳ್ತೀವಿ ಈ ಸ್ಟೋರಿ ಓದಿ.

ಹಿಂದಿಯ ರಾಮಾಯಣ್ ಸಿನಿಮಾ ಸೆಟ್ಟೇರಿದಾಗಿನಿಂದಲೂ ಸದ್ದು ಸುದ್ದಿಯಾಗುತ್ತಲೇ ಇದೆ. ಅದರಲ್ಲೂ ಪ್ಯಾನ್  ಇಂಡಿಯಾ ಸೂಪರ್ ಸ್ಟಾರ್ ರಾಕಿಂಗ್ ಸ್ಟಾರ್ ಯಶ್ ರಾಮಾಯಣ್​ ಸಿನಿಮಾಗೆ ಎಂಟ್ರಿಕೊಟ್ಟಾಗಿನಿಂದ ರಾಮಾಯಣ್ ಸಿನಿಮಾದ ರೇಂಜ್ ಇನ್ನಷ್ಟು ಚೇಂಜ್ ಆಗಿದೆ. ಪೌರಾಣಿಕ ಸಿನಿಮಾ ಮಾಡುವುದು ಅಷ್ಟು ಸುಲಭವಲ್ಲ. ರೆಗ್ಯೂಲರ್ ಕಮರ್ಷಿಯಲ್ ಸಿನಿಮಾಗಿಂತ ಈ ಸಿನಿಮಾ ನಿರ್ಮಾಣ ಮಾಡುವುದಕ್ಕೆ ಹೆಚ್ಚು ಸಮಯ ಹಿಡಿಯುತ್ತೆ. ಒಂದೊಂದೂ ಪಾತ್ರವನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಬೇಕಾಗುತ್ತೆ. ಇಂತ ಸಾಹಸಕ್ಕೆ ನಿರ್ದೇಶಕ ನಿತೇಶ್​ ತಿವಾರಿ ಕೈ ಹಾಕಿದ್ದಾರೆ.

ಈಗಾಗಲೇ ಎಲ್ರಿಗೂ ಗೊತ್ತಿರೋ ಹಾಗೆ ಶ್ರೀರಾಮನ ಪಾತ್ರದಲ್ಲಿ ರಣ್‌ಬೀರ್ ಕಪೂರ್, ರಾವಣನಾಗಿ ಯಶ್, ಸೀತೆಯಾಗಿ ಸಾಯಿ ಪಲ್ಲವಿ ಹಾಗೂ ಹನುಮಂತನಾಗಿ ಸನ್ನಿ ಡಿಯೋಲ್ ನಟಿಸೋದು ಕನ್ಫರ್ಮ್ ಆಗಿದೆ. ಇವರೊಂದಿಗೆ ರಾಮಾಯಣ ಸಿನಿಮಾದ ಮತ್ತೆರೆಡು ಪ್ರಮುಖ ಪಾತ್ರಗಳಾದ ಮಂಡೋದರಿ ಹಾಗೂ ಶಿವನ ಪಾತ್ರದಲ್ಲಿ ಯಾರು ನಟಿಸ್ತಾರೆ ಅನ್ನೋದೇ ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಆದ್ರೆ ಈ ಎರಡು ಪಾತ್ರಗಳ ಪೈಕಿ ಒಂದು ಪಾತ್ರ ಕನ್ಫರ್ಮ್ ಅದೇ ಮಂಡೋದರಿ.

‘ರಾಮಾಯಣ’ದಂತಹ ಮಹಾಕಾವ್ಯಕ್ಕೆ ಸಿನಿಮಾ ರೂಪ ಕೊಡುವುದಕ್ಕೆ ಅಷ್ಟು ಸುಲಭ ಅಲ್ಲವೇ ಅಲ್ಲಾ. ಅದಕ್ಕೆ ಸರಿಯಾದ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಬಾಲಿವುಡ್‌ನಲ್ಲಿ ಶುರುವಾಗಿರುವ ‘ರಾಮಾಯಣ’ ಸಿನಿಮಾಗೂ ಪಾತ್ರ ಆಯ್ಕೆಯೇ ದೊಡ್ಡ ಸವಾಲಾಗಿತ್ತು. ಸದ್ಯ ಸಿನಿಮಾ ಚಿತ್ರೀಕರಣ ಆರಂಭ ಆಗಿದ್ದರೂ, ನಿರ್ದೇಶಕ ನಿತೇಶ್ ತಿವಾರಿ ಇನ್ನೂ ಸಿನಿಮಾದಲ್ಲಿ ಯಾರೆಲ್ಲ ನಟಿಸುತ್ತಾರೆ ಅನ್ನೋ ಸುಳಿವನ್ನು ಬಿಟ್ಟುಕೊಟ್ಟಿಲ್ಲ.

ಮಂಡೋದರಿಯಾಗ್ತಾರಾ ಕಾಜಲ್ ಅಗರ್ ವಾಲ್​..?

ಶಿವನ ಪಾತ್ರದಲ್ಲಿ  ಗ್ರೀಕ್ ಗಾಡ್ ಹೃತಿಕ್ ರೋಷನ್​ .?

ಹೌದು..ನಿತೇಶ್ ತಿವಾರಿ ಮೋಸ್ಟ್ anticipated ಸಿನಿಮಾ ‘ರಾಮಾಯಣ’ದಲ್ಲಿ ಪಡ್ಡೆ ಹುಡುಗರ ದಿಲ್ ಕಿ ದಡ್ಕನ್ ನಟಿ ಕಾಜಲ್ ಅಗರ್ವಾಲ್ ಮಂಡೋದರಿ ಪಾತ್ರದಲ್ಲಿ ನಟಿಸಲಿದ್ದಾರಂತೆ. ಈ ಮೂಲಕ ರಾವಣ ಯಶ್​ ಜೊತೆಗೆ ಮಂಡೋದರಿ ಪಾತ್ರವನ್ನು ನಿರ್ವಹಿಸಲಿದ್ದಾರೆ. ಬಾಲಿವುಡ್ ವರದಿಗಳ ಪ್ರಕಾರ ಈ ಹಿಂದೆ ಸಾಕ್ಷಿ ತನ್ವರ್ ಮಂಡೋದರಿ ಪಾತ್ರದಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಕೊನೇ ಕ್ಷಣದಲ್ಲಿ ಈ ಅದೃಷ್ಟ ಕಾಜಲ್ ಅಗರ್ ವಾಲ್​ ಪಲಾಗಿದೆ ಎನ್ನಲಾಗ್ತಿದೆ. ಅಷ್ಟೇ ಅಲ್ಲದೇ ಸದ್ಯ ಬಿಡುಗಡೆಗೆ ಸಿದ್ಧವಾಗಿರುವ ತೆಲುಗಿನ ಪ್ಯಾನ್​ ಇಂಡಿಯಾ ‘ಕಣ್ಣಪ್ಪ’ ಸಿನಿಮಾದಲ್ಲೂ ಕಾಜಲ್​ ಅಗರ್​ವಾಲ್​ ಪಾರ್ವತಿಯಾಗಿ ಕಾಣಿಸಿಕೊಂಡಿದ್ದಾರೆ. ಆದ್ರೂ ಮಂಡೋದರಿಯ ಪಾತ್ರವನ್ನು ತಿರಸ್ಕಿರಸದೇ ಒಪ್ಪಿಕೊಂಡಿದ್ದಾರಂತೆ.

ಇದರ ಜೊತೆಗೆ ‘ರಾಮಾಯಣ’ ಸಿನಿಮಾ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣ ಆಗುತ್ತಿರುವ ಸಿನಿಮಾ. ಈ ಸಿನಿಮಾದಲ್ಲಿ ಬಾಲಿವುಡ್‌ನ ಗ್ರೀಕ್ ಗಾಡ್ ಹೃತಿಕ್ ರೋಷನ್ ನಟಿಸುತ್ತಿದ್ದಾರೆ ಅನ್ನೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಅಂದ್ಹಾಗೆ, ಹೃತಿಕ್ ರೋಷನ್ ಈ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಹಲ್‌ಚಲ್ ಎಬ್ಬಿಸಿದೆ. ಶಿವನ ಪಾತ್ರಕ್ಕೆ ಹೃತಿಕ್ ರೋಷನ್ ಸೂಕ್ತ ನಟ ಎಂದೂ ಕೆಲವರು ಅಭಿಪ್ರಾಯ ಪಟ್ಟಿದ್ದಾರೆ. ಅಂದಹಾಗೆ ರಾಮಾಯಣ್ ಸಿನಿಮಾ ದಿನೇ ದಿನೇ ಹೆಚ್ಚು ಸದ್ದು ಮಾಡ್ತಾಯಿದೆ. ಇನ್ನೇನು ಚಿತ್ರತಂಡದಿಂದ ರಾಮಾಯಣ ಸ್ಟಾರ್ ಕ್ಯಾಸ್ಟ್ ಅಧಿಕೃತವಾಗಿ ಘೋಷಣೆ ಆದ್ರೆ ಫ್ಯಾನ್ಸ್ ಗೆ ಹಬ್ಬವೋ ಹಬ್ಬ.

ವರದಿ: ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

Exit mobile version