ರಕ್ಕಸಪುರದೋಳ್ ರಾಜ್ ಶೆಟ್ಟಿ..ಬೆನ್ತಟ್ಟಿದ ಕಿಚ್ಚ ಸುದೀಪ್‌, ಜೋಗಿ ಪ್ರೇಮ್

ಕೊಳ್ಳೇಗಾಲದ ಮಾಟ, ಮಂತ್ರ.. ರಾಜ್ ಶೆಟ್ರ ಖಾಕಿ ತಂತ್ರ

Untitled design 2026 01 29T163707.299

ವರ್ಸಟೈಲ್ ಆ್ಯಕ್ಟರ್ ಆಗಿ ಮಿಂಚ್ತಿರೋ ಮ್ಯಾನ್ ಆಫ್ ಮಲ್ಟಿ ಟ್ಯಾಲೆಂಟ್ ರಾಜ್ ಬಿ ಶೆಟ್ಟಿ, ಲ್ಯಾಂಡ್‌‌ಲಾರ್ಡ್‌ ಬಳಿಕ ಮತ್ತೊಂದು ಭಿನ್ನ ಅಲೆಯ ಸಿನಿಮಾದಿಂದ ಪ್ರೇಕ್ಷಕರನ್ನ ರಂಜಿಸೋಕೆ ಬರ್ತಿದ್ದಾರೆ. ರಕ್ಕಸಪುರದೋಳ್‌ ರಾಜ್ ಶೆಟ್ಟಿ ಖಾಕಿ ಖದರ್ ಹೇಗಿದೆ..? ಕೊಳ್ಳೇಗಾಲದ ಮಾಟ, ಮಂತ್ರಗಳಿಗೆ ಖಾಕಿ ತಂತ್ರ ಎಂಥದ್ದು ಅನ್ನೋದ್ರ ಜೊತೆ ಬೆನ್ನು ತಟ್ಟಿದ ಬಾದ್‌ಷಾ ಸುದೀಪ್, ಜೋಗಿ ಪ್ರೇಮ್ ಹೇಳಿದ್ದೇನು.. ಇಲ್ಲಿದೆ ನೋಡಿ ಫುಲ್‌ ಡಿಟೈಲ್ಸ್.

ಇದು ರಕ್ಕಸಪುರದೋಳ್ ಸಿನಿಮಾದ ಟ್ರೈಲರ್ ಝಲಕ್. ಇದೇ ಫೆಬ್ರವರಿ 6ಕ್ಕೆ ತೆರೆಗೆ ಬರ್ತಿರೋ ಈ ಸಿನಿಮಾ, ಟೀಸರ್ ಹಾಗೂ ಸಾಂಗ್ಸ್‌ನಿಂದ ಕೌತುಕತೆ ಹೆಚ್ಚಿಸಿತ್ತು. ಇದೀಗ ಟ್ರೈಲರ್ ಆ ತುಡಿತವನ್ನ ಡಬಲ್ ಆಗಿಸಿದೆ. ಹೌದು.. ಲ್ಯಾಂಡ್‌ಲಾರ್ಡ್‌ ಇನ್ನೂ ಥಿಯೇಟರ್‌ನಲ್ಲಿ ಇರುವಾಗ್ಲೇ ರಾಜ್ ಬಿ ಶೆಟ್ಟಿ ಲೀಡ್‌‌ನಲ್ಲಿ ನಟಿಸಿರೋ ರಕ್ಕಸಪುರದೋಳ್ ಬಿಗ್‌‌ಸ್ಕ್ರೀನ್‌ಗೆ ಬರ್ತಿರೋದು ಗಮನಾರ್ಹ.

ರವಿ ಸಾರಂಗ ನಿರ್ದೇಶನದ ಹಾಗೂ ರವಿವರ್ಮಾ ನಿರ್ಮಾಣದ ಈ ಸಿನಿಮಾ ಕೊಳ್ಳೇಗಾಲದ ಮಾಟ, ಮಂತ್ರಗಳು ಹಾಗೂ ಪೊಲೀಸ್ ಆಫೀಸರ್ ಖಾಕಿ ತಂತ್ರಗಳಿಂದ ಕೂಡಿದೆ. ನೋಡೋಕೆ ಸಸ್ಪೆನ್ಸ್ ಕ್ರೈಂ ಥ್ರಿಲ್ಲರ್ ಜಾನರ್‌‌ನಿಂದ ಕೂಡಿದ್ದು, ಸಂಥಿಂಗ್ ಇಂಟರೆಸ್ಟಿಂಗ್ ಅನಿಸಿದೆ ಕಥಾವಸ್ತು. ರಾಜ್ ಶೆಟ್ರ ಹಸಿವಿಗೆ ತಕ್ಕನಾದ ಪಾತ್ರ ಇದಾಗಿದ್ದು, ಇಲ್ಲಿ ಮತ್ತೊಮ್ಮೆ ಅವ್ರಲ್ಲಿರೋ ಆ ನಟರಾಕ್ಷಸನನ್ನ ನೋಡೋ ಸಮಯ ಸನಿಹಿಸುತ್ತಿದೆ ಅನಿಸ್ತಿದೆ.

ಸ್ಟಂಟ್ ಮಾಸ್ಟರ್ ರವಿ ವರ್ಮಾ ನಿರ್ಮಾಣದ ಚೊಚ್ಚಲ ಸಿನಿಮಾ ಇದಾಗಿದ್ದು, ಜೋಗಿ ಪ್ರೇಮ್ ಶಿಷ್ಯ ಆ್ಯಕ್ಷನ್ ಕಟ್ ಹೇಳಿದ್ದಾರೆ. ಹಾಗಾಗಿ ಬಾದ್‌ಷಾ ಕಿಚ್ಚ ಸುದೀಪ್ ಹಾಗೂ ಜೋಗಿ ಪ್ರೇಮ್ ಇಬ್ಬರೂ ಈ ಚಿತ್ರದ ಟ್ರೈಲರ್ ಲಾಂಚ್ ಇವೆಂಟ್‌ಗೆ ಸಾಕ್ಷಿ ಆದ್ರು. ರಾಜ್ ಶೆಟ್ರ ಸಿನಿಮಾಗಳ ಟೈಟಲ್‌ಗಳು ಬಾಯಲ್ಲಿ ತಿರುಗೋದೇ ಇಲ್ಲ. ಆದ್ರೆ ಹಿಟ್ ಆಗ್ತಿವೆ ಎಂದ ಕಿಚ್ಚ, ನಾನು ರವಿ ಒಟ್ಟೊಟ್ಟಿಗೆ ಇಂಡಸ್ಟ್ರಿಗೆ ಬಂದ್ವಿ. ಆದ್ರೆ ಚಿತ್ರರಂಗದಲ್ಲಿ ಒಳ್ಳೆಯ ಸ್ಥಾನ ಸಿಕ್ಕಿದೆ ಅಂದ್ರೆ ರವಿವರ್ಮಾ ಕೂಡ ಕಾರಣ ಅಂದ್ರು ಸುದೀಪ್. ಇದೇ ವೇಳೆ ಚಂದು ಚಿತ್ರದ ದಿನಗಳನ್ನ ನೆನೆದರು.

ಪ್ರೇಮ್ ಮಾತಾಡ್ತಾ ಹೊಸಬರಿಗೆ ಸುದೀಪ್ ಸಪೋರ್ಟ್ ಮಾಡ್ತಾರೆ. ಕ್ರಾಂತಿ ಡೈಲಾಗ್ಸ್ ಚಿತ್ರಕ್ಕಿದೆ. ಸಿಸಿಎಲ್-12 ವೈರಲ್ ಡೈಲಾಗ್‌ಗೆ ನಾನು ಬಿಗ್ ಫ್ಯಾನ್ ಅಂದ್ರು. ಅದಕ್ಕೆ ಸುದೀಪ್ ಕೂಡ ನನ್ನ ವೈರಲ್ ಡೈಲಾಗ್‌ಗೆ ಗುರುಗಳು ಪ್ರೇಮ್ ಅಂದ್ರು.

ಒಟ್ಟಾರೆ ರಕ್ಕಸಪೊರದೋಳ್ ಚಿತ್ರ ಕಂಟೆಂಟ್‌ನಿಂದ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿರೋದು ಸುಳ್ಳಲ್ಲ. ವಿಲಿಯಮ್ ಡೇವಿಡ್ ಕ್ಯಾಮೆರಾ ವರ್ಕ್‌, ಅರ್ಜುನ್ ಜನ್ಯ ಸಂಗೀತ, ಮೋಹನ್ ಬಿ ಕೆರೆ ಆರ್ಟ್ ವರ್ಕ್‌, ಕೆ ಎಂ ಪ್ರಕಾಶ್ ಸಂಕಲನ, ಕ್ರಾಂತಿ ಕುಮಾರ ಸಂಭಾಷಣೆ ಈ ಸಿನಿಮಾಗಿದೆ. ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ಜೊತೆ ಸ್ವಾತಿಷ್ಠ ಕೃಷ್ಣನ್, ಅರ್ಚನಾ ಕೊಟ್ಟಿಗೆ ಸೇರಿದಂತೆ ನುರಿತ ಕಲಾವಿದರ ದಂಡಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version