ಬೇಸಿಗೆ ಬಂತು ಅಂದ್ರೆ ಸಾಕು ಎಲ್ಲೆಡೆ ನೀರಿಗೆ ಹಾಹಾಕಾರ ಶುರುವಾಗುತ್ತೆ. ಜನರಿಗೆ ಕುಡಿಯೋಕೆ ನೀರು ಸಿಗದೆ ಇದ್ದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತೆ. ಅದ್ರಲ್ಲೂ ಬೆಂಗಳೂರು, ಹೈದ್ರಾಬಾದ್, ಮುಂಬೈ, ಕೋಲ್ಕತ್ತಾ ಚೆನ್ನೈ ಅಂತಹ ಬಿಗ್ ಸಿಟೀಸ್ಗಳಲ್ಲಿ ಅದರ ತೀವ್ರತೆ ಮತ್ತಷ್ಟು ಹೆಚ್ಚುತ್ತೆ. ಹೀಗಿರುವಾಗ ಸೆನ್ಸೇಷನಲ್ ಡೈರೆಕ್ಟರ್ ರಾಜಮೌಳಿಗೆ 15 ಲಕ್ಷ ಲೀಟರ್ ನೀರು ಬೇಕಂತೆ. ಅದ್ಯಾಕೆ ಅನ್ನೋದಕ್ಕೆ ಈ ಸ್ಟೋರಿ ಒಮ್ಮೆ ನೋಡಿ.
ಸೆನ್ಸೇಷನಲ್ ಡೈರೆಕ್ಟರ್ ರಾಜಮೌಳಿಗೆ ಸ್ವಲ್ಪ ಆದ್ರೂ ಸೆನ್ಸ್ ಇಲ್ಲ. ಹೀಗಂತ ಇಡೀ ದೇಶವೇ ಮಾತಾಡ್ತಿದೆ. ಹೌದು.. ಅದಕ್ಕೆ ಕಾರಣ ಆಗಿರೋದು ಅವ್ರ ಬಹುನಿರೀಕ್ಷಿತ ವಾರಣಾಸಿ ಸಿನಿಮಾ. ಸೂಪರ್ ಸ್ಟಾರ್ ಮಹೇಶ್ ಬಾಬು, ಪೃಥ್ವಿರಾಜ್ ಸುಕುಮಾರನ್ ಹಾಗೂ ಪ್ರಿಯಾಂಕಾ ಚೋಪ್ರಾ ಅಂತಹ ಘಟಾನುಘಟಿ ಕಲಾವಿದರುಗಳನ್ನ ಇಟ್ಕೊಂಡು ಚಿತ್ರೀಕರಣ ನಡೆಸ್ತಿದ್ದಾರೆ ಮೌಳಿ. ಸಿಂಗಲ್ ಟೀಸರ್ನಿಂದ ಸಿನಿಮಾ ಹಾಲಿವುಡ್ವರೆಗೆ ಟಾಕ್ ಆಫ್ ದಿ ಟೌನ್ ಆಗಿದೆ. ಆದ್ರೀಗ ಇದೇ ವಾರಣಾಸಿ ಚಿತ್ರದ ಶೂಟಿಂಗ್ ವಿಚಾರ ಎಲ್ಲರೂ ರಾಜಮೌಳಿ ಬಗ್ಗೆ ಕೇವಲವಾಗಿ ಮಾತನಾಡುವಂತಾಗಿದೆ.
ರಾಜಮೌಳಿಗೆ ಬೇಕೇ ಬೇಕಂತೆ 15 ಲಕ್ಷ ಲೀಟರ್ ವಾಟರ್
150 ವಾಟರ್ ಟ್ಯಾಂಕರ್ಸ್ಗೆ ಬೇಡಿಕೆ ಇಟ್ಟಿದ್ಯಾಕೆ ಮೌಳಿ..?
ಸೆನ್ಸೇಷನಲ್ ಡೈರೆಕ್ಟರ್ ಮನವಿ ತಿರಸ್ಕರಿಸಿದ ಜಲ ಮಂಡಳಿ
ಬೇಸಿಗೆಯಲ್ಲಿ ಕುಡಿಯೋಕೆ ನೀರಿಲ್ಲ.. ಬುದ್ಧಿ ಆದ್ರೂ ಬೇಡವೇ?
ಇಷ್ಟಕ್ಕೂ ರಾಜಮೌಳಿಗೆ ಏತಕ್ಕೆ ಅಷ್ಟು ನೀರು ಅಂತೀರಾ..? ವಾರಣಾಸಿ ಚಿತ್ರದ ಶೂಟಿಂಗ್ಗಾಗಿ ಅನ್ನೋದು ಇಂಟರೆಸ್ಟಿಂಗ್. ಗಗನ್ಪಹಾದ್ನಲ್ಲಿರೋ ಫಿಲ್ಮ್ ಸ್ಟುಡಿಯೋದಲ್ಲಿ ವಾರಣಾಸಿ ಚಿತ್ರಕ್ಕಾಗಿ ವಿಶೇಷವಾಗಿ ಶೂಟಿಂಗ್ ಸೆಟ್ನ ನಿರ್ಮಿಸಲಾಗಿದೆಯಂತೆ. ಅಲ್ಲಿ ಸಿನಿಮಾದ ಪ್ರಮುಖ ಆ್ಯಕ್ಷನ್ ಸೀಕ್ವೆನ್ಸ್ ಚಿತ್ರಿಸಲು ನೀರಿನ ಅವಶ್ಯಕತೆಯಿದೆಯಂತೆ. ಅಂದಹಾಗೆ ಅದು ಅಂಡರ್ವಾಟರ್ ಫೈಟ್ ಸೀಕ್ವೆನ್ಸ್ ಆಗಿದ್ದು, ನೀರಿಲ್ಲದೆ ಶೂಟಿಂಗ್ ಕೂಡ ಸ್ಟಾಪ್ ಮಾಡಿದ್ದಾರಂತೆ ಮೌಳಿ. ಇಷ್ಟಕ್ಕೂ ಮಳೆಗಾಲ ಶುರುವಾದ ಬಳಿಕ ನೀರಿನ ಕೊರತೆ ನೀಗಿದ ಬಳಿಕ, ಬೇಸಿಗೆ ಕಳೆದು ಆ ದೃಶ್ಯಗಳನ್ನ ಚಿತ್ರಿಸುವ ಅವರ ಬುದ್ಧಿಗೆ ಏನಾಗಿದೆ ಅಂತ ಜನ ನೇರವಾಗಿಯೇ ರಾಜಮೌಳಿ ಕಾಲೆಳೆಯುತ್ತಿದ್ದಾರೆ.
