ರಚಿತಾ ರಾಮ್‌ ಮೇಲೆ ವಾಣಿಜ್ಯ ಮಂಡಳಿ ಅಧ್ಯಕ್ಷರು ತರಾಟೆ!

Web (59)
ADVERTISEMENT
ADVERTISEMENT

ಕನ್ನಡ ಚಿತ್ರರಂಗದ ಜನಪ್ರಿಯ ನಟಿ ರಚಿತಾ ರಾಮ್ ಮತ್ತು ‘ಸಂಜು ವೆಡ್ಸ್ ಗೀತಾ 2’ ಚಿತ್ರತಂಡದ ನಡುವಿನ ವಿವಾದ ತಾರಕಕ್ಕೇರಿದ್ದು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಂ.ಜಿ. ನರಸಿಂಹಲು ಅವರು ರಚಿತಾ ವಿರುದ್ಧ ಕಿಡಿಕಾರಿದ್ದಾರೆ. ಚಿತ್ರದ ಪ್ರಚಾರದಲ್ಲಿ ಭಾಗವಹಿಸದಿರುವುದು ಮತ್ತು ವಾಣಿಜ್ಯ ಮಂಡಳಿಯ ಚರ್ಚೆಗೆ ಸ್ಪಂದಿಸದಿರುವುದಕ್ಕೆ ರಚಿತಾ ವಿರುದ್ಧ ಆಕ್ಷೇಪ ವ್ಯಕ್ತವಾಗಿದೆ.

‘ಸಂಜು ವೆಡ್ಸ್ ಗೀತಾ 2’ ಚಿತ್ರದ ನಿರ್ದೇಶಕ ನಾಗಶೇಖರ್, ರಚಿತಾ ರಾಮ್ ಚಿತ್ರದ ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗವಹಿಸಿಲ್ಲ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ಸಲ್ಲಿಸಿದ್ದರು. ಈ ದೂರಿನ ಬಗ್ಗೆ ಚರ್ಚಿಸಲು ರಚಿತಾ ಅವರನ್ನು ವಾಣಿಜ್ಯ ಮಂಡಳಿಗೆ ಕರೆಯಲಾಗಿತ್ತು. ಆದರೆ, ರಚಿತಾ ಚರ್ಚೆಗೆ ಹಾಜರಾಗದಿರುವುದು ಮಂಡಳಿಯ ಕೆಂಗಣ್ಣಿಗೆ ಕಾರಣವಾಗಿದೆ.

ವಾಣಿಜ್ಯ ಮಂಡಳಿ ಅಧ್ಯಕ್ಷ ಎಂ.ಜಿ. ನರಸಿಂಹಲು ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, “ಕಲಾವಿದರು ಚಿತ್ರ ಬಿಡುಗಡೆಯಾದಾಗ ಪ್ರಚಾರಕ್ಕೆ ಬಂದು ಬೆಂಬಲ ನೀಡಲೇಬೇಕು. ಚಿತ್ರರಂಗದಿಂದಲೇ ಹಣ ಮತ್ತು ಹೆಸರು ಗಳಿಸಿರುವವರು ವಾಣಿಜ್ಯ ಮಂಡಳಿಯ ಕರೆಗಾದರೂ ಸ್ಪಂದಿಸಬೇಕು. ಯಾರಾದರೂ ಪಿಎಗಳ ಮೂಲಕ ಮಾತನಾಡಿಸುವುದು ಸರಿಯಲ್ಲ” ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ನಿರ್ದೇಶಕ ನಾಗಶೇಖರ್ ಅವರ ಪ್ರಕಾರ, ರಚಿತಾ ರಾಮ್ ಚಿತ್ರದ ಪ್ರಚಾರದಲ್ಲಿ ಭಾಗವಹಿಸದಿರುವುದು ಚಿತ್ರತಂಡಕ್ಕೆ ನಷ್ಟವನ್ನುಂಟು ಮಾಡಿದೆ. ‘ಸಂಜು ವೆಡ್ಸ್ ಗೀತಾ 2’ ಚಿತ್ರವು 2021ರಲ್ಲಿ ಬಿಡುಗಡೆಯಾದ ‘ಸಂಜು ವೆಡ್ಸ್ ಗೀತಾ’ ಚಿತ್ರದ ಮುಂದುವರಿದ ಭಾಗವಾಗಿದ್ದು, ರಚಿತಾ ರಾಮ್‌ರ ಜನಪ್ರಿಯತೆಯನ್ನು ಆಧರಿಸಿಯೇ ಚಿತ್ರದ ಪ್ರಚಾರ ಯೋಜನೆ ರೂಪಿಸಲಾಗಿತ್ತು. ಆದರೆ, ರಚಿತಾ ಸಹಕಾರದ ಕೊರತೆಯಿಂದ ಚಿತ್ರತಂಡ ಕಂಗಾಲಾಗಿದೆ ಎಂದು ಆರೋಪಿಸಲಾಗಿದೆ.

Exit mobile version