ಮೌನ ಮುರಿದ ರಚಿತಾ.. ದೇವರೇ ಬಂದ್ರೂ ಕ್ಷಮೆ ಕೇಳಲ್ಲ..!

ಸಂಜು ಟೀಂ ಹೇಳಿಕೆಗಳಿಂದ ಬುಲ್‌‌ಬುಲ್ ಮನಸ್ಸಿಗೆ ನೋವು

Add a heading (71)
ADVERTISEMENT
ADVERTISEMENT

12 ವರ್ಷಗಳಲ್ಲಿ 37ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿರೋ ಸ್ಯಾಂಡಲ್‌ವುಡ್ ಲೇಡಿ ಸೂಪರ್ ಸ್ಟಾರ್ ರಚಿತಾ ಮೇಲೆ ಒಂದಲ್ಲ ಎರಡೆರಡು ಗಂಭೀರ ಆರೋಪಗಳು ಕೇಳಿಬಂದಿತ್ತು. ವಿವಾದಗಳಿಂದ ದೂರ ಇರ್ತಿದ್ದ ಡಿಂಪಲ್ ಕ್ವೀನ್, ತನ್ನ ಮೇಲಿನ ಆರೋಪಗಳ ಬಗ್ಗೆ ಕೊನೆಗೂ ಮೌನ ಮುರಿದಿದ್ದಾರೆ. ಆ ದೇವರೇ ಬಂದು ನನ್ನ ಮುಂದೆ ನಿಂತರೂ ಕ್ಷಮೆ ಕೇಳಲ್ಲ ಅಂತ ಕರಾರುವಕ್ಕಾಗಿ ಹೇಳಿದ್ದಾರೆ.

ರಚಿತಾ ರಾಮ್ ತಮ್ಮ ಸಂಜು ವೆಡ್ಸ್ ಗೀತಾ-2 ಸಿನಿಮಾದ ಪ್ರಚಾರಕ್ಕೆ ಬಂದಿಲ್ಲ ಅಂತ ಚಿತ್ರತಂಡ ಆರೋಪ ಮಾಡಿ, ಫಿಲ್ಮ್ ಚೇಂಬರ್ ಮೆಟ್ಟಿಲೇರಿತ್ತು. ಅದೇ ದಿನ ಉಪ್ಪಿ-ರುಪ್ಪಿ ಸಿನಿಮಾದ ನಿರ್ಮಾಪಕಿಗೆ ರಚಿತಾ ಲಕ್ಷಾಂತರ ರೂಪಾಯಿ ವಂಚಿಸಿದ ಆರೋಪ ಕೂಡ ಕೇಳಿಬಂದಿತ್ತು. ಅದಕ್ಕೆ ರಚಿತಾ ರಾಮ್ ಫ್ಯಾನ್ಸ್ ಟಕ್ಕರ್ ಕೊಟ್ಟರಾದ್ರೂ, ಮೌನವಾಗಿದ್ದ ರಚ್ಚು, ಕೊನೆಗೂ ಮೌನ ಮುರಿದಿದ್ದಾರೆ. ತಮ್ಮ ಮೇಲಿನ ಆರೋಪಗಳಿಗೆ ಸ್ಪಷ್ಟನೆ ನೀಡಿದ್ದಾರೆ.

ನಾನು ತಪ್ಪೇ ಮಾಡಿಲ್ಲ. ಕ್ಷಮೆ ಯಾಕೆ ಕೇಳಲಿ. ಆ ದೇವರೇ ಬಂದು ಮುಂದೆ ನಿಂತರೂ ಕ್ಷಮೆ ಕೇಳುವ ಮಾತೇ ಇಲ್ಲ. ನನ್ನ ಫ್ಯಾನ್ಸ್‌ಗೆ ಇದ್ರಿಂದ ನೋವಾಗಿದ್ರೆ, ಅಭಿಮಾನಿಗಳಿಗೆ ಕ್ಷಮೆ ಕೇಳ್ತೀನಿ. ಆದ್ರೆ ನನ್ನನ್ನ ಹಾಡಿ, ಹೊಗಳುತ್ತಿದ್ದ ತಂಡವೇ ಹೀಗೆ ಹೇಳಿಕೆಗಳು ನೀಡ್ತಿರೋದು ಮನಸ್ಸಿಗೆ ತುಂಬಾ ನೋವಾಗಿದೆ ಎಂದಿದ್ದಾರೆ. ಅಷ್ಟೇ ಅಲ್ಲ, ನನ್ನನ್ನ ಆಗ ಮ್ಯಾಟ್ನಿ ಚಿತ್ರದ ಪ್ರಮೋಷನ್ಸ್‌ಗೆ ಕಳುಹಿಸದೆ ಶೂಟಿಂಗ್ ಮಾಡಿಸಿದ್ರು. ಈಗ ಅಯೋಗ್ಯ-2 ಟೀಂ ಶೂಟಿಂಗ್ ಲೊಕೇಷನ್ ಫಿಕ್ಸ್ ಮಾಡಿದೆ. ಅವರದ್ದೂ ದುಡ್ಡೇ ಅಲ್ವಾ..? ನಾಟಕ ಮಾಡ್ತಿರೋದ್ಯಾರು..? ಸುಳ್ಳು ಹೇಳ್ತಿರೋದ್ಯಾರು ಅಂತ ಜಾಡಿಸಿದ್ದಾರೆ.

 

ಇನ್ನು ಉಪ್ಪಿ-ರುಪ್ಪಿ ಸಿನಿಮಾದ ನಿರ್ಮಾಪಕಿಗೆ ಹಣ ವಂಚಿಸಿರೋ ಆರೋಪಕ್ಕೂ ಉತ್ತರಿಸಿರೋ ರಚಿತಾ, ಅದನ್ನ ಸಾರಾ ಗೋವಿಂದು ಅವರು ಮಾತಾಡ್ತೀನಿ ಅಂದಿದ್ದಾರೆ. ಅವರು ಹ್ಯಾಂಡಲ್ ಮಾಡ್ತಿದ್ದಾರೆ. ಅವರ ಮಾತಿಗೆ ನಾನು ಬದ್ಧಳಾಗಿರುತ್ತೇನೆ ಎಂದಿದ್ದಾರೆ.

ದೊಡ್ಡ ಮೊತ್ತದ ಸಂಭಾವನೆ ಪಡೆದು, ಸಿನಿಮಾ ಮಾಡಿದ ನಂತರ ಪ್ರಮೋಷನ್ಸ್‌ಗೆ ಬಾರದಿದ್ರೆ ಹೇಗೆ..? ಸಾಲ ಮಾಡಿ ತಂದು ಬಂಡವಾಳ ಹಾಕುವ ನಿರ್ಮಾಪಕರು ಏನಾಗಬೇಕು..? ಸಿನಿಮಾ ಜನಕ್ಕೆ ರೀಚ್ ಆಗುವುದು ಹೇಗೆ ಅಂತ ತಮ್ಮ ಪಟ್ಟು ಬಿಡ್ತಿಲ್ಲ ನಿರ್ದೇಶಕ ನಾಗಶೇಖರ್ ಹಾಗೂ ನಿರ್ಮಾಪಕ ಛಲವಾದಿ ಕುಮಾರ್. ಪ್ರಮೋಷನ್ಸ್ ಮಾಡೋದು ಕಲಾವಿದರ ಕರ್ತವ್ಯ. ಆದ್ರೆ ರಿಲೀಸ್ ವೇಳೆ ಪ್ರಚಾರ ಮಾಡಿದ್ದ ರಚಿತಾ, ರೀ- ರಿಲೀಸ್‌ಗೆ ಬಾರದಿರೋದು ಗಂಭೀರತೆ ಪಡೆದುಕೊಂಡಿದೆ.

12 ವರ್ಷಗಳಲ್ಲಿ 37ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿರೋ ಬುಲ್ ಬುಲ್ ಚೆಲುವೆ, ಕಿರುತೆರೆ ಸೇರಿ ಸುಮಾರು ಐದಾರು ಚಿತ್ರಗಳಲ್ಲಿ ಬ್ಯುಸಿ ಆಗಿದ್ದಾರೆ. ಇಲ್ಲಿಯವೆಗೂ ಸಿಂಗಲ್ ವಿವಾದ ಮೈ ಮೇಲೆ ಎಳೆದುಕೊಳ್ಳದ ರಚ್ಚು, ಸಂಜು ವೆಡ್ಸ್ ಗೀತಾ-2ನಿಂದ ಆಡಿಕೊಳ್ಳುವವರ ಬಾಯಿಗೆ ಆಹಾರವಾಗ್ತಿದ್ದಾರೆ. ಇದು ಪರಸ್ಪರ ಮಾತುಕತೆ ಮೂಲಕ ಬಗೆಹರಿದರೆ ಚಿತ್ರರಂಗಕ್ಕೆ ಹಿತ.

Exit mobile version